ಅನಧಿಕೃತ ಆಧಾರ್ ನೋಂದಣಿ ಮನೆಗೆ ಪೊಲೀಸ್ ದಾಳಿ
Team Udayavani, Jul 12, 2018, 10:31 AM IST
ಬಂಟ್ವಾಳ: ಅನಧಿಕೃತವಾಗಿ ಆಧಾರ್ ನೋಂದಣಿ ಮಾಡುತ್ತಿದ್ದ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಮತ್ತು ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರ ಸಹಿತ ನೋಂದಣಿ ಯಂತ್ರ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಬಂಟ್ವಾಳ ಕೆಳಗಿನ ಪೇಟೆ, ಗ್ರಾಮಾಂತರ ಠಾಣೆಯ ಎದುರು ಸುಮಾರು ನೂರು ಅಡಿಗಳಷ್ಟು ಒಳಗೆ ಜೆಡಿಎಸ್ ಮುಖಂಡ ಹಾರೂನ್ ರಶೀದ್ ಮನೆಯಲ್ಲಿ ಕಳೆದ 2 ದಿನಗಳಿಂದ ನೋಂದಣಿ ನಡೆಯುತ್ತಿತ್ತು ಎಂದು ಆಪಾದಿತರು ತನಿಖೆಯ ಸಂದರ್ಭದಲ್ಲಿ ತಿಳಿಸಿದ್ದಾರೆ. ಕಡಬ ಮೂಲದ ಫ್ರಾನ್ಸಿಸ್ ಪ್ರಶಾಂತ್ ಡಿ’ಸೋಜಾ ತನ್ನ ಯುಐಡಿ ನಂಬ್ರವನ್ನು ಬಳಸಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದರು.
ಬಂಟ್ವಾಳದಲ್ಲಿ ನೋಂದಣಿ ಮಾಡಿಕೊಂಡ ಎಲ್ಲ ದಾಖಲೆಗಳನ್ನು ಫ್ರಾನ್ಸಿಸ್ ಸಂಜೆ ಆರು ಗಂಟೆಯ ಒಳಗೆ ಕಡಬ ನೋಂದಣಿ ವ್ಯಾಪ್ತಿಗೆ ಹೋಗಿ ಅಪ್ಲೋಡ್ ಮಾಡಬೇಕು. ಇಲ್ಲವಾದಲ್ಲಿ ನೋಂದಣಿಗಳು ತಿರಸ್ಕೃತವಾಗುತ್ತವೆ. ಆದರೆ ಫ್ರಾನ್ಸಿಸ್ ಅವರಿಗೆ ಬಂಟ್ವಾಳದಲ್ಲಿ ನೋಂದಣಿ ಮಾಡಲು ಅನುಮತಿ ಇಲ್ಲದ ಕಾರಣ ಅದು ಆಧಾರ್ ಅಕ್ರಮ ನೋಂದಣಿ ಆರೋಪದ ಪ್ರಕರಣವೆಂದು ಅಭಿಪ್ರಾಯ ವ್ಯಕ್ತವಾಗಿದೆ. ಇಂಥ ಪ್ರಕರಣ ಸೈಬರ್ ಕ್ರೈಮ್ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಹಿರಿಯ ಅಧಿಕಾರಿಗಳು, ಕಾನೂನು ತಜ್ಞರಲ್ಲಿ ಚರ್ಚಿಸಿ ಈ ಪ್ರಕರಣಕ್ಕೆ ಸೂಕ್ತ ಸೆಕ್ಷನ್ ತಿಳಿದು ಎಫ್ಐಆರ್ ಮಾಡಲಾಗುವುದು ಎಂದು ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ
Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್
Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ