ಪತ್ತನಾಜೆ ತುಳು ಚಿತ್ರದ ಧ್ವನಿ ಸುರುಳಿ ಬಿಡುಗಡೆ
Team Udayavani, Aug 7, 2017, 7:00 AM IST
ಮಂಗಳೂರು: ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರ್ಮಾಣ – ನಿರ್ದೇಶನದ ಕಲಾ ಜಗತ್ತು ಕ್ರಿಯೇಶನ್ ಅರ್ಪಿಸುವ ಪತ್ತನಾಜೆ ತುಳು ಚಿತ್ರದ ಧ್ವನಿ ಸುರುಳಿ ಬಿಡುಗಡೆ, ಟ್ರೇಲರ್ ಲೋಕಾರ್ಪಣೆ, ಪೋಸ್ಟರ್ಗೆ ಚಾಲನೆ ಸಮಾರಂಭ ಶನಿವಾರ ಪುರಭವನದಲ್ಲಿ ನಡೆಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ನಿರ್ದೇಶಕರಾದ ವಿಜಯ್ಕುಮಾರ್ ಕೊಡಿಯಾಲ್ಬೈಲ್, ದೇವದಾಸ್ ಕಾಪಿಕಾಡ್, ಚೇತನ್ ಮುಂಡಾಡಿ, ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ, ಹರೀಶ್ ಶೇರಿಗಾರ್, ಮಧು ಸುರತ್ಕಲ್, ಫ್ರಾಂಕ್ ಫೆರ್ನಾಂಡಿಸ್, ಸಂಗೀತ ನಿರ್ದೇಶಕ ವಿ. ಮನೋಹರ್, ಪತ್ತನಾಜೆ ಚಿತ್ರದ ಸಂಘಟನಾ ಸಮಿತಿ ಅಧ್ಯಕ್ಷೆ ಶಮಿನಾ ಆಳ್ವ, ಚಿತ್ರದ ಕಲಾವಿದರು ಮೊದಲಾದವರು ಉಪಸ್ಥಿತರಿದ್ದರು.