ಪುತ್ತೂರು: ಬೆಂಕಿ ಅವಘಡ ನಿಯಂತ್ರಣಕ್ಕೆ ಬುಲೆಟ್ ಮಾದರಿ ಬೈಕ್..!
Team Udayavani, Jun 7, 2017, 3:04 PM IST
ಪುತ್ತೂರು: ಸಣ್ಣ-ಪುಟ್ಟ ಬೆಂಕಿ ಅವಘಡದ ವೇಳೆ ಕಾರ್ಯಾಚರಣೆಗೆ ಅನು ಕೂಲವಾಗುವ ನಿಟ್ಟಿನಲ್ಲಿ ಪುತ್ತೂರು ಅಗ್ನಿಶಾಮಕ ಠಾಣೆಗೆ ಮಿಸ್ಟ್ ತಂತ್ರಜ್ಞಾನದ ಬುಲೆಟ್ ಮಾದರಿಯ ಬೈಕ್ ಕಾಲಿಟ್ಟಿದೆ. ಈಗಾಗಲೇ ಎರಡು ಫೈರ್ ಟೆಂಡರ್ ಮತ್ತು 1 ರಿಸ್ಕೀ ಟೆಂಡರ್ ವಾಹನ ಇರುವ ಇಲ್ಲಿ ನಾಲ್ಕನೆಯ ವಾಹನವಾಗಿ ಬುಲೆಟ್ ಸೇರ್ಪಡೆಗೊಂಡಿದೆ.
ತುರ್ತು ಅಗ್ನಿಶಮನದ ಸಂದರ್ಭ, ಇಕ್ಕಟ್ಟಾದ ಸ್ಥಳದಲ್ಲಿ ಸಂಚಾರಕ್ಕೆ ಈ ಬುಲೆಟ್ ಬೈಕ್ ಬಳಕೆಯಾಗಲಿದೆ. ಈಗಾಗಲೇ ಮಂಗ ಳೂರು ಸೇರಿದಂತೆ ನಗರ ಕೇಂದ್ರಗಳಲ್ಲಿ ಇದು ಬಳಕೆಯಲ್ಲಿದೆ. ಪುತ್ತೂರಿಗೆ ಕೆಲ ದಿನಗಳ ಹಿಂದಷ್ಟೇ ತರಲಾಗಿದ್ದು, ಸೇವೆಗೆ ಸಿದ್ಧವಾಗಿದೆ.
ಹೇಗಿದೆ ಬುಲೆಟ್
ರಾಯಲ್ ಎನ್ಫೀಲ್ಡ್ನ 350 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಬೆಂಕಿ ನಂದಕ ಬುಲೆಟ್ ಆಗಿ ಪರಿವರ್ತಿಸಲಾಗಿದೆ. ಬೈಕ್ನ ಹಿಂಭಾಗದಲ್ಲಿ ಹತ್ತು ಲೀಟರ್ ಸಾಮರ್ಥ್ಯದ ಫೋಮ್(ದ್ರಾವಣ) ತುಂಬಿರುವ ಅಗ್ನಿಶಮನ ಉಪಕರಣಗಳನ್ನು ಅಳವಡಿಸಲಾಗಿದೆ. ಅದರ ಸುತ್ತ ಸಣ್ಣ ಗಾತ್ರದ 2.ಕೆ.ಜಿ ಸಾಮರ್ಥ್ಯದ ಏರ್ ಸಿಲಿಂಡರ್ ಇದೆ. ಪಕ್ಕದಲ್ಲಿರುವ ಹೈಡ್ರಾಲಿಕ್ ಉಪಕರಣ ಸಿಲಿಂಡರ್ ಒಳಗಿನ ದ್ರಾವಣವನ್ನು ಹೊರಕ್ಕೆ ಚಿಮ್ಮಿಸಲು ಸಹಾಯ ಮಾಡುತ್ತದೆ. ಜತೆಗೆ ಬೈಕ್ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೈರನ್, ಧ್ವನಿವರ್ಧಕ, ಕೆಂಪು ದೀಪಗಳಿವೆ.
ಬಳಕೆ ಹೀಗೆ
ಈ ಬೈಕ್ನಲ್ಲಿ ಚಾಲಕ, ಹಿಂಬದ ಸವಾರ ಕುಳಿತುಕೊಳ್ಳಬಹುದು. ಕಾರ್ಯಾಚರಣೆ ಸಂದರ್ಭ ಬೈಕ್ನ ಹಿಂಭಾಗದಲ್ಲಿರುವ ಎರಡು ಸಿಲಿಂಡರ್ ತೆಗೆದು ಬೆನ್ನಿಗೆ ನೇತು ಹಾಕಲು ಸಾಧ್ಯವಿದೆ. ಸಿಲಿಂಡರ್ ಜತೆಗಿನ ಗನ್ ಟ್ರಗರ್ ಅದುಮಿದರೆ, 25 ರಿಂದ 35 ಅಡಿಯಷ್ಟು ದೂರ ಅಗ್ನಿ ನಿಯಂತ್ರಣ ದ್ರಾವಣ ಹೊರಕ್ಕೆ ಚಿಮ್ಮಿ, ಬೆಂಕಿ ನಂದಿಸಲು ಸಾಧ್ಯವಾಗುತ್ತದೆ.
ಬಳಕೆ ಎಲ್ಲೆಲ್ಲಿ
ಸಣ್ಣ ಪ್ರಮಾಣದ ಗ್ಯಾಸ್ ಸೋರಿಕೆ, ವಿದ್ಯುತ್ ಶಾರ್ಟ್ ಸರ್ಕ್ನೂಟ್, ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹಾಗೂ ಇತರೆ ಬೆಂಕಿ ಅವಘಡ ಸಂಭವಿಸಿದಾಗ ಇದನ್ನು ಬಳಸಲಾಗುತ್ತದೆ. ಅಗ್ನಿಶಾಮಕ ದಳದ ದೊಡ್ಡ ಗಾತ್ರದ ವಾಹನಗಳು ಇಕ್ಕಟ್ಟಾದ ಸ್ಥಳದಲ್ಲಿ ಸಂಚರಿಸುವುದು ತ್ರಾಸದಾಯಕವಾಗಿರುವ ಕಾರಣ, ಈ ಬುಲೆಟ್ ವಾಹನ ಶೀಘ್ರ ಸ್ಪಂದನೆಗೆ ಅನುಕೂಲ ಎಂಬ ಕಾರಣ ಹೊಂದಲಾಗಿದೆ.
ಬಳಕೆ ಕಷ್ಟ..!
ಬುಲೆಟ್ ಪ್ರಯೋಜನ ಅಂದರೂ, ಅದರ ಬಳಕೆ ಸುಲಭ ಅಲ್ಲ. 350 ಸಿಸಿ ಬೈಕ್ನಲ್ಲಿ ಸವಾರ ಸೇರಿ ಇಬ್ಬರು ಕುಳಿತುಕೊಳ್ಳಲು ಸ್ಥಳ ಇದ್ದರೂ, ಅಗ್ನಿ ನಿಯಂತ್ರಣ ಸಾಧನ ಸೇರಿದರೆ ಒಟ್ಟು ತೂಕ 500 ಕೆ.ಜಿ ದಾಟುತ್ತದೆ. ಹಾಗಾಗಿ ಎಕ್ಸ್ ಪರ್ಟ್ಗಳೇ ಬೈಕ್ ಚಲಾಯಿಸಬೇಕಷ್ಟೆ. ಏರು ಮಾರ್ಗದಲ್ಲಿ ಬೈಕ್ ನಿಲ್ಲಿಸಿದರೆ, ಸವಾರನಿಗೆ ಭಾರ ತಡೆದುಕೊಳ್ಳುವ ಶಕ್ತಿ ಬೇಕು. ಇಲ್ಲದಿದ್ದರೆ ಪಲ್ಟಿ. ಆಕಸ್ಮಿಕವಾಗಿ ಬಿದ್ದರೆ, ಹಿಂಬದಿ ಸವಾರನಿಗೆ ಗಾಯ ಉಂಟಾಗುವುದು ಖಂಡಿತ. ಅಪಾಯದ ಸಂದರ್ಭ ಹಿಂಬದಿ ಸವಾರ ಪಾರಾಗಲು ಬೇಕಾದ ವ್ಯವಸ್ಥೆ ಇಲ್ಲದಿರುವುದು ಅಪಾಯಕ್ಕೆ ಮುಖ್ಯ ಕಾರಣ.!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು