ರೇಷನಿಂಗ್: ಮೇ 15ರ ಬಳಿಕ3 ದಿನ ನೀರು ಸ್ಥಗಿತ ಸಾಧ್ಯತೆ
Team Udayavani, May 11, 2019, 8:04 AM IST
ಮಂಗಳೂರು: ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರು ಇಳಿಕೆಯಾಗುತ್ತಿದ್ದು, ಸದ್ಯ ಜಾರಿಯಲ್ಲಿರುವ ರೇಷನಿಂಗ್ ಮೇ 15ರ ಬಳಿಕ ಬದಲಾಗುವ ಸಾಧ್ಯತೆ ಇದೆ. ಮೇ 15ರ ವರೆಗೂ ಮಳೆ ಯಾಗದಿದ್ದರೆ ಮೇ 15ರ ಬಳಿಕ 4 ದಿನ ನೀರು ಸರಬರಾಜು ಮಾಡಿ 3 ದಿನ ಸ್ಥಗಿತಗೊಳಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಗುರುವಾರ ಬೆಳಗ್ಗೆ 6ರಿಂದ ನೀರು ಸರಬರಾಜು ಆರಂಭಗೊಂಡಿದ್ದು, ಮೇ 13ರ ಬೆಳಗ್ಗೆ 6 ಗಂಟೆವರೆಗೆ ಸರಬರಾಜಾಗಲಿದೆ. ಶುಕ್ರವಾರ ಸಂಜೆ ತುಂಬೆ ನೀರಿನ ಮಟ್ಟ 4.12 ಮೀ. ಆಗಿದೆ. ಗುರುವಾರ ಬೆಳಗ್ಗೆ 4.24 ಮೀ. ಇದ್ದ ಮಟ್ಟ ಸಂಜೆ 4.17 ಮೀ.ಗೆ ಇಳಿಕೆಯಾಗಿತ್ತು. ಮಳೆ ಬಾರದಿದ್ದಲ್ಲಿ ವಾರದೊಳಗೆ 4 ಮೀ.ಗೆ ಇಳಿಯಲಿದೆ.
ಮೇ 15ರ ಬಳಿಕ ತೀರ್ಮಾನ
ರೇಷನಿಂಗ್ ಆರಂಭಿಸಿದ್ದರಿಂದ ನಗರಕ್ಕೆ ಸದ್ಯ ನೀರಿನ ಸಮಸ್ಯೆ ದೊಡ್ಡದಾಗಿ ಕಾಡುತ್ತಿಲ್ಲ. ಮೇ 15ರ ವರೆಗೆ ಈಗಿನ ನಿಯಮದ ಪ್ರಕಾರವೇ ರೇಷನಿಂಗ್ ಮುಂದುವರಿಯಲಿದೆ. ಆ ಬಳಿಕ ಪರಿಸ್ಥಿತಿ ಅವಲೋಕಿಸಿ ವಾರದಲ್ಲಿ ಮೂರು ದಿನ ನೀರು ಸ್ಥಗಿತ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.- ಶಶಿಕಾಂತ ಸೆಂಥಿಲ್, ಜಿಲ್ಲಾಧಿಕಾರಿ. ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ