ಕರಾವಳಿಯಾದ್ಯಂತ ಮಳೆ ವಿರಾಮ: ಕೃಷಿಕರ ಮೊಗದಲ್ಲಿ ಹರ್ಷ


Team Udayavani, Oct 24, 2022, 6:35 AM IST

ಕರಾವಳಿಯಾದ್ಯಂತ ಮಳೆ ವಿರಾಮ: ಕೃಷಿಕರ ಮೊಗದಲ್ಲಿ ಹರ್ಷ

ಮಂಗಳೂರು: ಕಳೆದ ಕೆಲವು ದಿನಗಳಿಂದ ಒಂದಲ್ಲ ಒಂದು ಕಡೆ ಯಲ್ಲಿ ಸುರಿಯುತ್ತಿದ್ದ ಮಳೆ ರವಿವಾರ ಕರಾವಳಿಯಾದ್ಯಂತ ವಿರಾಮ ಪಡೆದಿತ್ತು.

ದ.ಕ. ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಕಡೆ ಹಗಲಿನಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣ ಇತ್ತು. ಸೆಕೆಯೂ ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಹೆಚ್ಚಿತ್ತು.

ಒಂದು ವಾರದಿಂದ ಅಪರಾಹ್ನದ ಬಳಿಕ  ಸಿಡಿಲು ಸಹಿತ ಮಳೆಯಾ ಗುತ್ತಿತ್ತು. ಸಿಡಿಲಿನ ಅಬ್ಬರದಿಂದ ಕೆಲವೆಡೆ ಹಾನಿಯೂ ಆಗಿತ್ತು.

ಕೃಷಿಕರ ಮೊಗದಲ್ಲಿ ಹರ್ಷ
ದೀಪಾವಳಿಗೆ ಪೂರ್ವವಾಗಿ ಮಳೆ ವಿರಾಮ ನೀಡಿದ್ದರಿಂದ ಕೃಷಿಕರಲ್ಲಿ ಮತ್ತು ವ್ಯಾಪಾರಿ ವಲಯದಲ್ಲಿ ಹರ್ಷ ಮೂಡಿದೆ. ಮುಖ್ಯವಾಗಿ ಭತ್ತ ಕೃಷಿಕರು ಹರ್ಷಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆ, ಮಳೆಗಾಲ ಆರಂಭದಲ್ಲಿಯೇ ಬಿತ್ತನೆ ಮಾಡಿರುವ ಭತ್ತದ ಫ‌ಸಲು ಕೊಯ್ಲಿನ ಹಂತಕ್ಕೆ ಬಂದಿತ್ತು. ಆದರೆ ಇದೇ ಸಮಯದಲ್ಲಿ ಮಳೆಯೂ ಮುಂದುವರಿದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಸಿಗಲಾರದೇನೊ ಎಂಬ ಆತಂಕ ಮನೆ ಮಾಡಿತ್ತು. ಈಗ ಮಳೆ ವಿರಾಮ ನೀಡಿರುವುದರಿಂದ ಕೊಯ್ಲು ಕಾರ್ಯ ರಭಸ ಪಡೆದಿದೆ. ಕೊಯ್ಲು ಆಗದೆ ದೀಪಾವಳಿ ದಿನ ಗದ್ದೆಗೆ ದೀಪ ಇಡುವುದು ಹೇಗೆ ಎಂಬ ಆತಂಕವನ್ನು ಹೊಂದಿದ್ದರು. ರವಿವಾರವಂತೂ ಹೆಚ್ಚಿನ ಕಡೆಗಳಲ್ಲಿ ಕೊಯ್ಲು ಕಂಡುಬಂತು.

ಸಾಲು ಸಾಲು ಯಂತ್ರಗಳು
ಮಳೆ ವಿರಾಮ ಪಡೆದ ಕೂಡಲೇ ಎಲ್ಲೆಡೆ ರೈತರು ಕೊಯ್ಲಿಗೆ ಮನಸ್ಸು ಮಾಡುವುದನ್ನು ಅಂದಾಜು ಮಾಡಿದ್ದ ಬೇರೆ ಜಿಲ್ಲೆಯ ಕಟಾವು ಯಂತ್ರಗಳು ಕಳೆದ ಶುಕ್ರವಾರವೇ ಕರಾವಳಿಗೆ ಧಾವಿಸಿದ್ದವು. ಶನಿವಾರ ಮತ್ತಷ್ಟು ಯಂತ್ರಗಳು ಆಗಮಿಸಿದ್ದು, ರಾಷ್ಟ್ರೀಯ ಹೆದ್ದಾರಿ ಬದಿ ಸಾಲು ಸಾಲಾಗಿ ವಾಹನಗಳು ಕಂಡು ಬಂದವು.

ದುಬಾರಿ ಬೆಲೆ
ಸಾಕಷ್ಟು ಯಂತ್ರಗಳು ಆಗಮಿಸಿ ದ್ದರೂ ದುಬಾರಿ ಬಾಡಿಗೆ ಹೇಳುತ್ತಿ ರುವುದು ರೈತರಿಗೆ ಸಮಸ್ಯೆಯಾಗಿದೆ. ಹೆಚ್ಚಿನವರು ಮಳೆ ಬರಬಹುದೇನೋ ಎಂಬ ಭೀತಿಯಿಂದ ಸಿಕ್ಕಿದ ಯಂತ್ರಗಳನ್ನು ಕೊಂಡೊಯ್ಯುವ ಸ್ಥಿತಿಯಲ್ಲಿದ್ದು, ಹೆಚ್ಚು ಬಾಡಿಗೆ ನೀಡಿ ಕಟಾವು ನಡೆಸುತ್ತಿದ್ದಾರೆ.

ಕನಿಷ್ಠ 3 ದಿನ ಮಳೆ ವಿರಾಮ
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನು ಕನಿಷ್ಠ ಮೂರು ದಿನ ಕರಾವಳಿಯಾದ್ಯಂತ ಒಣ ಹವೆ ಇರಲಿದೆ. ಅ. 27ರ ಬಳಿಕವಷ್ಟೇ ಮತ್ತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಮಾನ ನಿಲ್ದಾಣ ದಲ್ಲಿ ರವಿವಾರ 32 ಡಿ.ಸೆ. ಗರಿಷ್ಠ ಮತ್ತು 24 ಡಿ.ಸೆ. ಕನಿಷ್ಠ ಉಷ್ಣಾಂಶ ಇತ್ತು.

ಟಾಪ್ ನ್ಯೂಸ್

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.