ಸಂಸ್ಕೃತಿ-ಸಂಸ್ಕಾರ ಉಳಿವಿಗೆ ವೇದ ಪಾಠ ಅವಶ್ಯ: ನಾರಾಯಣ ಭಟ್
ಮಾಣಿ ಪೆರಾಜೆ ಮಠ: ವಸಂತ ವೇದಪಾಠ ಶಿಬಿರ ಸಂಪನ್ನ
Team Udayavani, May 13, 2019, 6:04 AM IST
ವಿಟ್ಲ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ವಸಂತ ವೇದಪಾಠ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಮಾತನಾಡಿ, ಈ ಶಿಬಿರದಲ್ಲಿ ಪಡೆದ ಶಿಕ್ಷಣವನ್ನು ಸದುಪಯೋಗಪಡಿಸಬೇಕು. ನಿರಂತರವಾಗಿ ಮುಂದುವರಿಯಬೇಕು. ಸಂಸ್ಕೃತಿ-ಸಂಸ್ಕಾರಗಳ ಉಳಿವಿಗೆ, ಜ್ಞಾನ ಸಂಪಾದನೆಗೆ ವೇದ ಪಾಠ ಅವಶ್ಯ. ಈ ಶಿಕ್ಷಣಕ್ಕೂ ಹೆತ್ತವರು ಆದ್ಯತೆ ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಯು.ಎಸ್. ವಿಶ್ವೇಶ್ವರ ಭಟ್ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮಕ್ಕಳ ಬುದ್ಧಿಯನ್ನು ಚುರುಕುಗೊಳಿಸುತ್ತವೆ. ವೇದ ವಿದ್ಯೆಯನ್ನು ಪಡೆಯುವ ಆಸಕ್ತಿ ಹೆಚ್ಚಬೇಕು. ಆ ಮೂಲಕ ಸಮಾಜದ ಒಳಿತಾಗಬೇಕು ಎಂದರು. ವೇದ ಶಿಬಿರದ ಅಧ್ಯಾಪಕರಾದ ವಿಘ್ನೇಶ್ವರ ಭಟ್, ಸುಮಂತ್ ಹೆಗ್ಡೆ ಉಪಸ್ಥಿತರಿದ್ದರು. ಅನೂಪ್ ಶರ್ಮ ಸ್ವಾಗತಿಸಿ, ವೆಂಕಟಕೃಷ್ಣ ವಂದಿಸಿದರು. ಸತ್ಯನಾರಾಯಣ ನಿರೂಪಿಸಿದರು.