Road Mishap; ಲಾರಿ ಢಿಕ್ಕಿ: ಸ್ಕೂಟರ್ ಸವಾರ ಸಾವು
Team Udayavani, Dec 31, 2023, 12:06 AM IST
ಮಂಗಳೂರು: ಲಾರಿ ಢಿಕ್ಕಿಯಾಗಿ ಸ್ಕೂಟರ್ ಸವಾರ ಯತೀಶ್(40) ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.
ಅವರು ಸ್ಕೂಟರ್ನಲ್ಲಿ ಅಪರಾಹ್ನ 3.10ರ ಸುಮಾರಿಗೆ ಕೂಳೂರಿನಿಂದ ಕೊಟ್ಟಾರಚೌಕಿ ಕಡೆಗೆ ಬರುತ್ತಿದ್ದಾಗ ಕೋಡಿಕಲ್ ಕ್ರಾಸ್ ಬಳಿ ಸ್ವಲ್ಪ ಮುಂದೆ ಕೂಳೂರು ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಢಿಕ್ಕಿ ಹೊಡೆಯಿತು. ರಸ್ತೆಗೆ ಬಿದ್ದ ಅವರ ಮೇಲೆಯೇ ಲಾರಿಯ ಚಕ್ರ ಹಾದು ಹೋಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರು ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿ ಸಾವು: ಸ್ಕೂಟರ್ ಸವಾರನಿಗೆ ಶಿಕ್ಷೆ
ಮಂಗಳೂರು: ಸ್ಕೂಟರ್ ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆಗೆ ಸಂಬಂಧಿಸಿ 2ನೇ ಜೆಎಂಎಫ್ಸಿ ನ್ಯಾಯಾಲಯವು ಸ್ಕೂಟರ್ ಸವಾರನಿಗೆ 6 ತಿಂಗಳ ಸಾದಾ ಶಿಕ್ಷೆ ಹಾಗೂ 5,500 ರೂ. ದಂಡ ವಿಧಿಸಿದೆ.
ಮ್ಯಾಕ್ಸಿಂ ಅಂದ್ರಾದೆ ಮೃತಪಟ್ಟವರು. ನಿತೇಶ್ ಶಿಕ್ಷೆಗೊಳಗಾದ ಸವಾರ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಗೀತಾ ರೈ ಹಾಗೂ ಮನೋಜ್ ಅವರು ವಾದಿಸಿದ್ದಾರೆ.
2022ರ ಫೆ.7ರಂದು ಸಂಜೆ 5 ಗಂಟೆಗೆ ಹೊನ್ನಕಟ್ಟೆ ಜಂಕ್ಷನ್ ಬಳಿ ಅಪಘಾತ ಸಂಭವಿಸಿತ್ತು. ಗಾಯಗೊಂಡಿದ್ದ ಮ್ಯಾಕ್ಸಿಂ 2023ರ ಫೆ. 23ರಂದು ಮೃತಪಟ್ಟಿದ್ದರು.