ಸೇವಾಧಾಮ: ಪುತ್ತೂರು ನ್ಯಾಯಾಲಯ ತಂಡ ಭೇಟಿ
Team Udayavani, May 13, 2019, 6:00 AM IST
ಬೆಳ್ತಂಗಡಿ: ಸೌತಡ್ಕ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನರ್ವಸತಿ ಕೇಂದ್ರ ಸೇವಾಧಾಮಕ್ಕೆ ಪುತ್ತೂರು ನ್ಯಾಯಾಲಯದ ಸಿಬಂದಿ ಹಾಗೂ ಅವರ ಕುಟುಂಬ ವರ್ಗ ಭೇಟಿ ನೀಡಿತು.
ಸೇವಾಧಾಮದ ನಿರ್ವಹಣೆ ಹಾಗೂ ಕೇಂದ್ರ ಚಟುವಟಿಕೆಗಳ ಕುರಿತು ಸೇವಾಭಾರತಿ ಅಧ್ಯಕ್ಷ ವಿನಾಯಕ ರಾವ್ ಮಾಹಿತಿ ನೀಡಿದರು. ಕೆ. ಸುರೇಶ ಅಡಿಗ ನೇತೃತ್ವದ ತಂಡ ಭಜನ ಸತ್ಸಂಗ ಕಾರ್ಯಕ್ರಮ ನಡೆಸುವುದರ ಜತೆಗೆ ಬೆನ್ನು ಮೂಳೆ ಮುರಿತಕ್ಕೊಳಗಾದವರ ಯೋಗ ಕ್ಷೇಮ ವಿಚಾರಿಸಿ ಕೇಂದ್ರದ ನಿರ್ವಹಣೆಗಾಗಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು.