ಮನೆಯೂಟಕ್ಕೆ ಕೊಕ್; ಹಣ್ಣು ಹಂಪಲು ಸಾಕ್
Team Udayavani, Jul 25, 2017, 11:45 AM IST
ಕೈದಿಗಳ ಪಾರ್ಟಿ ಫೋಟೊ ವೈರಲ್ ಪರಿಣಾಮ
ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಇತ್ತೀಚೆಗೆ ಪಾರ್ಟಿ ನಡೆಸಿದ ಬಗೆಗಿನ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬಳಿಕ ಕೆಲವೊಂದು ಹೊಸ ಬೆಳವಣಿಗೆಗಳಾಗಿದ್ದು, ಇದೀಗ ಸಂಬಂಧಿಕರಿಂದ ಮತ್ತು ಹಿತೈಷಿಗಳಿಂದ ಕೈದಿಗಳಿಗೆ ಆಹಾರ ಪೂರೈಕೆ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಫೋಟೊ ಇದೇ ಜೈಲಿನಲ್ಲಿ ಸುಮಾರು ಮೂರು ತಿಂಗಳ ಹಿಂದೆ ನಡೆದ ಪಾರ್ಟಿಯ ಫೋಟೊ ಹೌದು ಎಂಬುದನ್ನು ಬಂದೀಖಾನೆ ಇಲಾಖೆಯ ಹಿರಿಯ ಅಧಿಕಾರಿಗಳು ದೃಢೀಕರಿಸಿದ್ದಾರೆ.
ವೈರಲ್ ಆದ ಫೋಟೋದಲ್ಲಿ ಕಾಣುವ ಕೈದಿಗಳ ಪೈಕಿ ಇಬ್ಬರು ಈಗಾಗಲೇ ಕಳೆದ ಮೇ 11ರಂದು ಬಿಡುಗಡೆಯಾಗಿ ಹೋಗಿದ್ದಾರೆ. ಈ ಇಬ್ಬರು ಬಿಡುಗಡೆಯಾಗಿ ಹೋಗುವ ಸಂದರ್ಭದಲ್ಲಿ ಈ ಪಾರ್ಟಿಯನ್ನು ಏರ್ಪಡಿಸಲಾಗಿತ್ತೇ ಅಥವಾ ಅದಕ್ಕಿಂತ ಮೊದಲು ನಡೆದ ಪಾರ್ಟಿಯೇ ಎನ್ನುವುದು ಖಚಿತವಾಗಿಲ್ಲ ಎಂದು ಜೈಲಿನ ಮೂಲಗಳು ತಿಳಿಸಿವೆ. ಇದೀಗ ಕೈದಿಗಳಿಗೆ ಅನ್ನ, ಸಾರು, ಪಲ್ಯವನ್ನು ಸರಬರಾಜು ಮಾಡುವುದನ್ನು ನಿರ್ಬಂಧಿಸಲಾಗಿದೆ. ಹಣ್ಣು ಹಂಪಲು ಮತ್ತು ಡ್ರೈಫ್ರುಟ್ಗಳನ್ನು ಮಾತ್ರ ಕೈದಿಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.
ಜೈಲುಗಳಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಆಹಾರಗಳಲ್ಲಿ ಈಗ ಬಹಳಷ್ಟು ಸುಧಾರಣೆಯಾಗಿದೆ. ಮಂಗಳವಾರ ಮೊಟ್ಟೆ ಮತ್ತು ಶುಕ್ರವಾರ ಚಿಕನ್/ ಮಟನ್ ನೀಡಲಾಗುತ್ತದೆ. ಬೆಳಗ್ಗಿನ ಉಪಾಹಾರ ಈ ಹಿಂದೆ ಗಂಜಿ ಊಟ ಇದ್ದರೆ ಈಗ ದಿನಕ್ಕೊಂದು ವೆರೈಟಿಯ ತಿಂಡಿ (7 ದಿನಗಳಲ್ಲಿ 7 ಬಗೆಯ ತಿಂಡಿ) ನೀಡಲಾಗುತ್ತದೆ.
ಕೈದಿಗಳು ನಾಲ್ಕು ಗೋಡೆಗಳ ಮಧ್ಯೆ ಬಂಧಿಗಳಾಗಿದ್ದರೂ ಆವರಿಗೆ ಹೊಟ್ಟೆ ತುಂಬಾ ಆಹಾರ ನೀಡಲಾಗುತ್ತದೆ. ಅದರಲ್ಲೂ ದಿನಕ್ಕೊಂದು ವೆರೈಟಿಯ ಆಹಾರ ಲಭಿಸುತ್ತಿರುವುದರಿಂದ ಅವರಿಗೆ ಹೊರಗಿನಿಂದ ಆಹಾರ ಒದಗಿಸುವ ಆವಶ್ಯಕತೆ ಇರುವುದಿಲ್ಲ. ಅಪರೂಪಕ್ಕೆ ಹಬ್ಬದ ದಿನಗಳಲ್ಲಿ ಬೇಕಿದ್ದರೆ ಹೊರಗಿನಿಂದ ಆಹಾರ ಪೂರೈಕೆಗೆ ಅವಕಾಶ ಕಲ್ಪಿಸಬಹುದು. ಉಳಿದ ದಿನಗಳಲ್ಲಿ ಆಹಾರ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಜೈಲಿನ ಪರಿಸ್ಥಿತಿ ಸುಧಾರಿಸಬಹುದು ಎಂದು ಹೆಸರು ಹೇಳಲಿಚ್ಛಿಸದ ಜೈಲು ಸಿಬಂದಿಯೊಬ್ಬರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ