ಸ್ವತ್ಛ ಮಂಗಳೂರು ಅಭಿಯಾನ; ವಿವಿಧೆಡೆಗಳಲ್ಲಿ ಸ್ವತ್ಛತೆ


Team Udayavani, May 2, 2017, 4:45 PM IST

clean.jpg

ಮಹಾನಗರ: ರಾಮಕೃಷ್ಣ ಮಿಷನ್‌ ಸ್ವತ್ಛ ಮಂಗಳೂರು ಅಭಿಯಾನದ 30ನೇ ವಾರ 11 ಕಡೆಗಳಲ್ಲಿ ಸ್ವತ್ಛತಾ ಕಾರ್ಯಕ್ರಮ ನಡೆಯಿತು. 

ರಾವ್‌ ಅಂಡ್‌ ರಾವ್‌ ವೃತ್ತ: ಕ್ಯಾಂಪ್ಕೋ ಸಹಯೋಗದಲ್ಲಿ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ನಿಂದ ಬಂದರ್‌ ಮುಖ್ಯರಸ್ತೆಯ ವರೆಗೆ ಸ್ವತ್ಛತಾ ಕಾರ್ಯ ನಡೆಯಿತು. ಬೆಳಗ್ಗೆ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಹಾಗೂ ಎಂಡಿ ಸುರೇಶ್‌ ಭಂಡಾರಿ ಚಾಲನೆ ನೀಡಿದರು. ಸುಮಾರು 100 ಜನ ಕ್ಯಾಂಪ್ಕೋ ಸಿಬಂದಿ ಹಾಗೂ ಸ್ವತ್ಛ ಮಂಗಳೂರು ಅಭಿಯಾನದ ಹಿರಿಯ ಕಾರ್ಯಕರ್ತರು ಸುಮಾರು ಎರಡೂವರೆ ಗಂಟೆಗಳ ಸ್ವತ್ಛತೆ ನಡೆಧಿಸಿಧಿದರು. ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್‌ ಕೋಟೆಕಾರ್‌ ಮಾರ್ಗದರ್ಶನ ನೀಡಿದ್ದು, ಟಿ.ಎಸ್‌.ಭಟ್‌  ಸಂಯೋಜಿಸಿದ್ದರು. 

ಕರಂಗಲ್ಪಾಡಿ: ಸುಬ್ರಮಣ್ಯ ಸಭಾದ ಕಾರ್ಯ ಕರ್ತರು ಹಾಗೂ ಸ್ಥಳೀಯರ ಸಹಕಾರದಿಂದ ಸ್ವತ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಧರ ಶಾಸಿŒ ಹಾಗೂ ಪ್ರಭಾಕರ್‌ ರಾವ್‌ ಚಾಲನೆ ನೀಡಿದರು. ಶ್ರೀಕಾಂತ ರಾವ್‌ ನೇತೃತ್ವದಲ್ಲಿ ಕಾರ್ಯಕರ್ತರು ಕರಂಗಲ್ಪಾಡಿ ರಸ್ತೆ ಹಾಗೂ ಬಿಜೈ ಚರ್ಚ್‌ ರಸ್ತೆ ಶುಚಿಗೊಳಿಸಿದರು. 
ಮನೀಶ್‌ ರಾವ್‌, ಕರುಣ ಬೆಳ್ಳೆ ಹಾಗೂ ಪ್ರದೀಪ ರಾವ್‌ ಸಹಿತ ಸುಮಾರು 50 ಜನರು ಸ್ವತ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. 

ಭವಂತಿ ರಸ್ತೆ: ಟೀಂ ಇನ್‌ಸ್ಪಿರೇಶನ್‌ ತಂಡದವರು ಪೊಲೀಸ್‌ ಉಪನಿರೀಕ್ಷಕ ಮದನ್‌ ನೇತೃತ್ವದಲ್ಲಿ ಭವಂತಿ ಸ್ಟ್ರೀಟ್‌ನಿಂದ ಕಾರ್‌ಸ್ಟ್ರೀಟ್‌ ವರೆಗೂ ಸ್ವತ್ಛತೆ ಕೈಗೊಂಡರು. 

ಪ್ರಸನ್ನಕುಮಾರ ಹಾಗೂ ನವೀನ್‌ ಕುಡುಪು ಅಭಿಯಾನಕ್ಕೆ ಚಾಲನೆ ನೀಡಿದರು. ಮೊದಲಿಗೆ ರಸ್ತೆಯನ್ನು ಸ್ವತ್ಛಗೊಳಿಸಿ, ತೆರೆದ ತೋಡುಗಳಲ್ಲಿ ಸಂಗ್ರಹವಾಗಿದ್ದ ಹಳೆಯ ಸಾಮಾನು ಸಹಿತವಾದ ತ್ಯಾಜ್ಯ ಹೊರತೆಗೆಯಲಾಯಿತು. ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್‌ ತೆಗೆಯಲಾಯಿತು.   

ಬೋಳಾರ: ನಿವೇದಿತಾ ಬಳಗದ ಸದಸ್ಯರಿಂದ ಬೋಳಾರ ಮುಖ್ಯ ಬೀದಿಯಲ್ಲಿ ಸ್ವತ್ಛತಾ  ಜರಗಿತು. ರಘುರಾಮ್‌ ಉಪಾಧ್ಯಾಯ ಹಾಗೂ ಲಲಿತಾ ಉಪಾಧ್ಯಾಯ ಸ್ವತ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಮುಖ್ಯರಸ್ತೆ ಹಾಗೂ ಬದಿಯ ತೋಡುಗಳಲ್ಲಿದ್ದ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು. ಅಲ್ಲದೇ ಬ್ಯಾನರ್‌ ಪೋಸ್ಟರ್‌ಗಳನ್ನು ಕಿತ್ತು ಶುಚಿಗೊಳಿಸಲಾಯಿತು.  

ಎ.ಬಿ. ಶೆಟ್ಟಿ ವೃತ್ತ: ಹಿಂದೂ ವಾರಿಯರ್ಸ್‌ ತಂಡದ ಸದಸ್ಯರಿಂದ ಎ.ಬಿ. ಶೆಟ್ಟಿ ವೃತ್ತದಿಂದ ಪಾಂಡೇಶ್ವರಕ್ಕೆ ಸಾಗುವ ಮಾರ್ಗಗಳನ್ನು ಸ್ವತ್ಛಗೊಳಿಸಲಾಯಿತು. 

ಸಿಂಡಿಕೇಟ್‌ ಸದಸ್ಯ ಹರೀಶ್‌ ಆಚಾರ್‌ ಹಾಗೂ ದಿಲ್‌ರಾಜ್‌ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತೀಯ ವಿದ್ಯಾಭವನದೆದುರಿನ ರಸ್ತೆ ಹಾಗೂ ಮಾರ್ಗವಿಭಾಜಕಗಳನ್ನು ಸ್ವತ್ಛಗೊಳಿಸಲಾಯಿತು. ಶಿವು ಪುತ್ತೂರು ಹಾಗೂಯೋಗಿಶ್‌ ಕಾಯರ್ತಡ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿ. ಟಿ. ರಸ್ತೆ: ಶ್ರೀಗೋಕರ್ಣ ಮಠದ ಭಕ್ತರು ಹಾಗೂ ಸ್ಥಳೀಯ ನಾಗರಿಕರು ವಿಠೊಭಾ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಂಡಿದ್ದರು. ದಾಮೋದರ ಭಟ್‌ ಹಾಗೂ ಜಗದೀಶ್‌ ಶೆಣೈ  ಚಾಲನೆ ನೀಡಿದ್ದು, ಕಮಲಾಕ್ಷ ಪೈ  ಉಸ್ತುವಾರಿ ವಹಿಸಿದ್ದರು.

ಜಪ್ಪು: ಶ್ರೀ ಅಂಬಾಮಹೇಶ್ವರಿ ಭಜನ ಮಂಡಳಿ ಸದಸ್ಯರಿಂದ ಜಪ್ಪು ಮಾರ್ಕೆಟ್‌ ಬಳಿ ಸ್ವತ್ಛತಾ ಕಾರ್ಯ ನೆರವೇರಿತು. ಕಳೆದ ವಾರ ಪೋಸ್ಟರ್‌ ತೆಗೆದು ಸ್ವತ್ಛಗೊಳಿಸಿದ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಅಂದಗೊಳಿಸಲಾಯಿತು. ಕಸ ಬೀಳುವ ಸ್ಥಳಗಳನ್ನು ಪುಟ್ಟ ಗಾರ್ಡನ್‌ ಆಗಿ ಪರಿವರ್ತಿಸಲಾಗಿದೆ. ಪುನೀತ್‌ ಹಾಗೂ ರೂಪೇಶ್‌ ಅಭಿಯಾನ ಸಂಯೋಜಿಸಿ, ಯಶಸ್ವಿಗೊಳಿಸಿದರು. 

ಪಡೀಲ್‌: ಯೂತ್‌ ಸೆಂಟರ್‌ ಸದಸ್ಯರಿಂದ ಪಡೀಲ್‌ ಜಂಕ್ಷನ್‌ನಲ್ಲಿ ಸ್ವತ್ಛತಾ ಅಭಿಯಾನ ಜರಗಿತು. ರಘುವೀರ್‌ ಗಟ್ಟಿ ಹಾಗೂ ಮೋಹನ್‌ ಪಡೀಲ್‌  ಚಾಲನೆ ನೀಡಿದರು. ಉದಯ ಕೆ.ಪಿ. ನೇತೃತ್ವದಲ್ಲಿ ಪಡೀಲ್‌ ಜಂಕ್ಷನ್‌ನಿಂದ ಬಟ್ಲಗುಡ್ಡೆ ಶಾಂತಿನಗರ  ವರೆಗಿನ ಪ್ರದೇಶ ಸ್ವತ್ಛ ಮಾಡ ಲಾಯಿತು. ಸ್ಥಳೀಯರು ಸಹಕಾರ ನೀಡಿದರು. 

ಶಿವಬಾಗ್‌: ಸ್ವತ್ಛ ಶಿವಬಾಗ್‌ ಟೀಂ ಸದಸ್ಯರಿಂದ ಇಲ್ಲಿನ 3ನೇ ಅಡ್ಡರಸ್ತೆಯಲ್ಲಿ ಸ್ವತ್ಛತೆ ನಡೆಯಿತು. ಮೋಹನ್‌ ಮೆಂಡನ್‌ ಹಾಗೂ ರವೀಂದ್ರ ಶೆಟ್ಟಿ ಉದ್ಘಾಟಿಸಿದರು. ಶೀಲಾ ಜಯಪ್ರಕಾಶ ಹಾಗೂ ಚಂದ್ರಕಲಾ ದೀಪಕ್‌ ನೇತೃತ್ವದಲ್ಲಿ 3 ಮತ್ತು 4ನೇ ಕ್ರಾಸ್‌ ರಸ್ತೆಗಳನ್ನು ಸ್ವತ್ಛ ಮಾಡಲಾಯಿತು. ಸ್ಥಳೀಯ ವ್ಯಾಪಾರಿಗಳು  ಶ್ರಮದಾನ ಮಾಡಿದರು. 

ಅತ್ತಾವರ: ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಅತ್ತಾವರ ರೋಟರಿ ಕ್ಲಬ್‌ನಿಂದ ಉಮಾಮಹೇಶ್ವರಿ ದೇವಸ್ಥಾನದ ವರೆಗೆ ಸ್ವತ್ಛತಾ ಕಾರ್ಯ ನಡೆಸಲಾಯಿತು. 

ಬಾಲಕೃಷ್ಣ ಶೆಟ್ಟಿ ಹಾಗೂ ರಾಜೇಶ್‌ ಅತ್ತಾವರ ಆರಂಭಗೊಳಿಸಿದರು. ಎರಡು ಗಂಟೆಗಳ ಕಾಲ ಸ್ವತ್ಛತೆ ಜರಧಿಗಿತು. ಅಕ್ಷಿತ್‌ ಅತ್ತಾವರ ಕಾರ್ಯಕ್ರಮ ಸಂಯೋಜಿಸಿದರು.

ಎಮ್ಮೆಕೆರೆ: ಶಾರದಾ ಮಹಿಳಾ ವೃಂದದ ಸದಸ್ಯರಿಂದ ಎಮ್ಮೆಕೆರೆ ಸುತ್ತಮುತ್ತ ಸ್ವತ್ಛತಾ ಕಾರ್ಯ  ನಡೆಯಿತು. ನಿವೃತ್ತ ಪ್ರಾಚಾರ್ಯ ಸತೀಶ್‌ ಭಟ್‌ ಚಾಲನೆ ನೀಡಿದರು. 

ಎಮ್ಮೆಕೆರೆ ಮುಖ್ಯರಸ್ತೆಯಲ್ಲಿ ಸ್ವತ್ಛತೆ ಪ್ರಾರಂಭಿಸಿ ಶ್ರೀನಿವಾಸ್‌ ಕಾಲೇಜಿನ ಮುಂಭಾಗದ ವರೆಗೂ ರಸ್ತೆಯ ಎರಡೂ ಬದಿ ಬಿದ್ದಿದ್ದ ಪ್ಲಾಸ್ಟಿಕ್‌ ಹಾಗೂ ಪೇಪರ್‌ ಹೆಕ್ಕಿ ಸ್ವತ್ಛಗೊಳಿಸಲಾಯಿತು. ಚಿತ್ರಾ ಪ್ರಭು ಅಭಿಯಾನ ಸಂಯೋಜಿಸಿದರು. 

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.