ಸೇವಾಂಜಲಿ ಪ್ರತಿಷ್ಠಾನದ ಸೇವೆ ಶ್ಲಾಘನೀಯ: ಶಕುಂತಳಾ ಶೆಟ್ಟಿ
Team Udayavani, Mar 16, 2017, 12:29 PM IST
ಬಂಟ್ವಾಳ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ವಿದ್ಯಾಭ್ಯಾಸ ಮತ್ತು ವಿಮೆಯನ್ನು ಒದಗಿಸುವ ಮೂಲಕ ಸೇವೆಯಲ್ಲಿಯೇ ಸಾರ್ಥಕತೆಯನ್ನು ಸಂತೃಪ್ತಿಯನ್ನು ಕಾಣುವ ಸೇವಾಂಜಲಿ ಪ್ರತಿಷ್ಠಾನದ ಸೇವೆ ಶ್ಲಾಘನೀಯ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಅವರು ಮಾ. 14ರಂದು ಸೇವಾಂಜಲಿ ನಡೆಸಿಕೊಂಡು ಬರುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಅಮ್ ಆದ್ಮಿ ಯೋಜನೆಯ ಸದಸ್ಯ ಪುತ್ತೂರು ಸಂಪ್ಯದ ರಾಮಣ್ಣ ನಾಯ್ಕ ಮೃತಪಟ್ಟ ಹಿನ್ನೆಲೆಯಲ್ಲಿ ಫಲಾನುಭವಿ ಪತ್ನಿ ಲೀಲಾವತಿ ಅವರಿಗೆ 31,000ದ ಚೆಕ್ ವಿತರಿಸಿ ಮಾತನಾಡಿದರು.
ಸೇವಾಂಜಲಿ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ, ದಾಮೋದರ ಶೆಣೈ ಅರ್ಕುಳ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಶ್ರೀಕ್ಷೇತ್ರ ನಂದಾವರದ ಟ್ರಿಸ್ಟಿ ಗೋಪಾಲಕೃಷ್ಣ ಆಚಾರ್, ನೇತ್ರ ತಜ್ಞ ಡಾ| ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.