Ullal ಮದುವೆ ಮಂಟಪಕ್ಕೆ ಬಂದ ವರನ ಪ್ರೇಯಸಿ!
Team Udayavani, Jan 6, 2024, 12:58 AM IST
ಉಳ್ಳಾಲ: ಮದುವೆ ಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ, ನನ್ನಿಂದ ಹಣವನ್ನೂ ತೆಗೆದುಕೊಂಡು ಮೋಸ ಮಾಡಿ ಇದೀಗ ಬೇರೊಂದು ಯುವತಿಯೊಂದಿಗೆ ಮದುವೆಯಾಗುತ್ತಿದ್ದಾನೆ ಎಂದು ಆರೋಪಿಸಿ ಮೈಸೂರು ಮೂಲದ ಯುವತಿಯೊಬ್ಬಳು ಮದುವೆ ಮಂಟಪಕ್ಕೆ ಪೊಲೀಸರೊಂದಿಗೆ ಆಗಮಿಸಿ ಜಗಳವಾಡಿದ ಘಟನೆ ಶುಕ್ರವಾರ ಬೀರಿ ಸಮೀಪದ ಮದುವೆ ಹಾಲ್ನಲ್ಲಿ ನಡೆದಿದೆ.
ಘಟನೆಯ ಸಂದರ್ಭ ಮದುವೆ ಶಾಸ್ತ್ರ ಮುಗಿದಿದ್ದು, ವರ ಮದುವೆ ಮಂಟಪದಿಂದ ಹೊರ ನಡೆದರೆ, ಯುವತಿಯ ಮನೆಯವರು ಘಟನೆಯಿಂದ ಕಂಗಾಲಾಗಿದ್ದಾರೆ.
ಕೇರಳದ ಕೋಝಿಕೋಡ್ ಮೂಲದ ವರನಿಗೆ ಮಂಗಳೂರು ಮೂಲದ ಯುವತಿಯೊಂದಿಗೆ ಶುಕ್ರವಾರ ಮದುವೆ ನಡೆದಿದ್ದು, ಈ ನಡುವೆ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಇನ್ಸ್ಪೆಕ್ಟರ್ನೊಂದಿಗೆ ಆಗಮಿಸಿದ ಮೈಸೂರು ಮೂಲದ ಯುವತಿ ತನಗೆ ಮ್ಯಾರೇಜ್ ವೆಬ್ಸೈಟ್ನಲ್ಲಿ ಪರಿಚಯವಾಗಿದ್ದ ಯುವಕ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ಬಳಿಕ ನನ್ನಿಂದ ಹಣವನ್ನೂ ತೆಗೆದುಕೊಂಡು ಮೋಸ ಮಾಡಿದ್ದಾನೆ.
ಕೇರಳ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದು, ಆರೋಪಿ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈ ನಡುವೆ ಮಂಗಳೂರು ಮೂಲದ ಯುವತಿಯೊಂದಿಗೆ ಮದುವೆಯಾಗುತ್ತಿದ್ದು, ಆರೋಪಿ ವರನನ್ನು ಬಂಧಿಸಿ ಎಂದು ಆಗ್ರಹಿಸಿದ್ದಾಳೆ.
ಯುವತಿ ಬರುವ ಮೊದಲೇ ತರಾತುರಿಯಲ್ಲಿ ಮದುವೆ
ಯುವತಿಯ ಆರೋಪದಂತೆ ಕೇರಳ ಮೂಲದ ಯುವಕ ಮದುವೆ ಮನೆಯಲ್ಲೇ ತರಾತುರಿಯಲ್ಲಿ ಮದುವೆ ಯಾಗಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಕೆಲವೇ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಶುಕ್ರವಾರ ಬೆಳಗ್ಗೆ ಮದುವೆ ಮಂಟಪಕ್ಕೆ ಬಂದ ಕೂಡಲೇ ತರಾತುರಿಯಲ್ಲಿ ಮದುವೆಯಾಗದ್ದ ಎನ್ನಲಾಗಿದೆ. ಪುರೋಹಿತರು ಹೋಮ ಮಾಡುವ ಮೊದಲೇ ಯುವತಿಗೆ ತಾಳಿ ಕಟ್ಟಿ ಮದುವೆಯ ಶಾಸ್ತ್ರ ನಡೆಸಿದ್ದ. ಯುವತಿ ಮದುವೆ ಮಂಟಪಕ್ಕೆ ಬರುವ ಸೂಚನೆ ಮೊದಲೇ ವರನಿಗೆ ತಿಳಿದಿತ್ತು.
ಯುವತಿ ಮದುವೆ ಹಾಲ್ಗೆ ಆಗಮಿಸಿ ಪೊಲೀಸರು ಮತ್ತು ಮಾದ್ಯಮದವರೊಂದಿಗೆ ಮಾತನಾಡುತ್ತಿದ್ದಂತೆ ವರ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯಿಂದ ವಧು ಮತ್ತು ಆಕೆಯ ಹೆತ್ತವರು ಕಂಗಾಲಾಗಿದ್ದು, ಮದುವೆ ಮಂಟಪದಿಂದ ವಾಪಸ್ ಮನೆಗೆ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು