“ಮಿಷನರಿಗಳ ಕನ್ನಡ ವೃತ್ತಾಂತ’, “ಕರ್ಣಾಟ ಗ್ರಾಮರ್’
Team Udayavani, Jul 24, 2018, 11:19 AM IST
ಮಂಗಳೂರು: ಪ್ರೊ| ಎ.ವಿ.ನಾವಡ ಅವರು ಬರೆದ “ಮಿಷನರಿಗಳ ಕನ್ನಡ ವೃತ್ತಾಂತ’ ಮತ್ತು ಡಾ| ವಿಲಿಯಂ ಕೇರಿ ಅವರ ಕೃತಿ, ಪ್ರೊ| ಎ.ವಿ. ನಾವಡ ಹಾಗೂ ಡಾ| ಮಹೀದಾಸ ಸಂಪಾದಿ ಸಿದ “ಕರ್ಣಾಟ ಗ್ರಾಮರ್’ ಕೃತಿಗಳ ಬಿಡುಗಡೆ ಸಮಾರಂಭ ನಗರದ ಮಹಿಳಾ ಸಂಪನ್ಮೂಲ ಕೇಂದ್ರ ಸಭಾಂಗಣದಲ್ಲಿ ಸೋಮವಾರ ಜರಗಿತು.
ಕೃತಿ ಬಿಡುಗಡೆಗೊಳಿಸಿದ ಚೆನ್ನೈಯ ಸಿಎಸ್ಐ ಪ್ರ. ಕಾರ್ಯದರ್ಶಿ ಡಾ| ಡಿ.ಆರ್. ಸದಾನಂದ ಮಾತನಾಡಿ, ಎ. ವಿ. ನಾವಡ ಅವರ ಕೃತಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಾಸ್ತ್ರೀಯತೆಯ ಸೊಗಡಿದೆ. “ಮಿಷನರಿಗಳ ಕನ್ನಡ ವೃತ್ತಾಂತ’ ಕೃತಿ ಕನ್ನಡದ ಸಾಂಸ್ಕೃತಿಕ ಬೇರುಗಳನ್ನು ಜನಮಾನಸದಲ್ಲಿ ಅಚ್ಚೊತ್ತುವಂತಿದೆ ಎಂದು ಅಭಿಪ್ರಾಯಪಟ್ಟರು.
ಪಾಶ್ಚಾತ್ಯ ಸಂಸ್ಕೃತಿಯ ಪ್ರತಿನಿಧಿಗಳಾದ ಮಿಷನರಿಗಳು ಕನ್ನಡದ ಆಂತರ್ಯವನ್ನು ತಿಳಿದುಕೊಂಡ ಬಳಿಕ ಜರ್ಮನಿ ಮತ್ತು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸ್ನೇಹಾಲಿಂಗನವಾಯಿತು. ಇದೇ ಮುಂದೆ ಜರ್ಮನ್ ಮತ್ತು ಕನ್ನಡ ಸಾಹಿತ್ಯ, ಸಂಸ್ಕೃತಿಗಳು ಪರಸ್ಪರ ಪರಿಚಯಿಸಿಕೊಳ್ಳಲು ಕಾರಣವಾಯಿತು ಎಂದವರು ಹೇಳಿದರು.
ದಕ್ಷಿಣ ಸಭಾ ಪ್ರಾಂತ ಬಿಷಪ್ ವಂ| ಮೋಹನ್ ಮನೋರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಬಿಷಪ್ ಡಾ| ಸಿ.ಎಲ್. ಫುರ್ಟಾಡೊ, ಕೇರಳ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ಶ್ರೀಕೃಷ್ಣ ಭಟ್ ಕೃತಿಗಳನ್ನು ಪರಿಚಯಿಸಿದರು. ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ| ಹನಿಬಾಲ್ ಕಬ್ರಾಲ್ ಮುಖ್ಯ ಅತಿಥಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ
ನಮ್ಮ ವಿರುದ್ಧ ಷಡ್ಯಂತ್ರ: ಎಚ್.ಡಿ. ರೇವಣ್ಣ