ನವೆಂಬರ್‌ ಅಂತ್ಯದವರೆಗೂ ಆಗಾಗ ಮಳೆ; ಸೆಖೆ ಹೆಚ್ಚಳ


Team Udayavani, Nov 11, 2022, 5:35 AM IST

ನವೆಂಬರ್‌ ಅಂತ್ಯದವರೆಗೂ ಆಗಾಗ ಮಳೆ; ಸೆಖೆ ಹೆಚ್ಚಳ

ಮಂಗಳೂರು: ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಿ, ಹಿಂಗಾರು ಮಳೆ ಆಗಾಗ ಸುರಿಯುತ್ತಿದೆ. ಇದೇ ವೇಳೆ ಪೂರ್ವ ಕಡಲಿನಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆ, ವಾಯುಭಾರ ಕುಸಿತ, ಅದರಿಂದ ಸುರಿಯುತ್ತಿರುವ ಮಳೆ ಮೊದಲಾದ ಕಾರಣಗಳಿಂದ ಈ ಬಾರಿ ಚಳಿಯ ದಿನಗಳು ಕಡಿಮೆಯಾಗುತ್ತಿವೆ.

ಆಗಾಗ ಸಾಮಾನ್ಯ ಚಳಿ, ಹಗಲು ವೇಳೆ ಉರಿ ಬಿಸಿಲಿನ ದಿನಗಳು ಸದ್ಯ ಕಂಡುಬರುತ್ತಿವೆ. ಅಕ್ಟೋಬರ್‌ ಅಂತ್ಯ-ನವೆಂಬರ್‌ ಆರಂಭದಲ್ಲಿ ಎರಡು ಮೂರು ದಿನ ಚಳಿಯ ವಾತಾವರಣವಿತ್ತು. ಜತೆಗೆ ಗ್ರಾಮೀಣ ಭಾಗದಲ್ಲಿ ದಟ್ಟ ಮಂಜು ಕವಿದ ವಾತಾವರಣವೂ ಕಂಡುಬಂದಿತ್ತು. ಆದರೆ ಬಳಿಕ ಚಳಿ ದೂರವಾಗಿ ಮುಂಜಾನೆಯೇ ಸೆಕೆ ಹೆಚ್ಚಾಗಿದೆ.

ಈಗ ಮತ್ತೆ ಕೆಲವು ದಿನಗಳಿಂದ ಸಾಮಾನ್ಯ ಚಳಿ ಅನುಭವಕ್ಕೆ ಬರುತ್ತಿದೆ. ಆದರೆ ಇದು ಕೂಡ ಕೆಲವೇ ದಿನಗಳಿಗೆ ಸೀಮಿತ. ನ. 12ರಿಂದ ಮತ್ತೆ ಮಳೆ ಸುರಿಯುವ ಸಾಧ್ಯತೆ ಇದ್ದು, ಬಳಿಕ ಕಡಿಮೆಯಾದರೂ, ನ. 19ರಿಂದ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ನವೆಂಬರ್‌ ಅಂತ್ಯದ ವರೆಗೂ ಇದೇ ರೀತಿಯ ಆಗಾಗ ವಾತಾವರಣದಲ್ಲಿ ಬದಲಾವಣೆ ಕಂಡುಬಂದು ಮಳೆ ಸುರಿಯುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಮಳೆ ದೂರವಾದರೆ ಡಿಸೆಂಬರ್‌ ತಿಂಗಳಿನಿಂದ ಚಳಿ ತೀವ್ರವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಮಧ್ಯಾಹ್ನ ಉರಿ ಬಿಸಿಲು:

ಹಗಲು ಹೊತ್ತಿನಲ್ಲಿ ಉರಿ ಬಿಸಿಲಿನಿಂದ ತಾಪಮಾನದದಲ್ಲಿ ವಿಪರೀತ ಏರಿಕೆ ಉಂಟಾಗುತ್ತಿದೆ. ಸದ್ಯ ಕರಾವಳಿಯಲ್ಲಿ 30-34 ಡಿಗ್ರಿ ಸೆಲ್ಸಿಯಸ್‌ ವರೆಗೆ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತಾಪಮಾನ 35-36 ಡಿಗ್ರಿ ಸೆ.ವರೆಗೆ ತಲುಪುವ ಸಾಧ್ಯತೆಯೂ ಇದೆ ಎನ್ನುತ್ತದೆ ಹವಾಮಾನ ಇಲಾಖೆಯ ಈ ಹಿಂದಿನ ಅಂಕಿ ಅಂಶ. ಸದ್ಯ ಕನಿಷ್ಠ ತಾಪಮಾನ 22-23 ಡಿಗ್ರಿ ಸೆ. ಗಡಿಯಲ್ಲಿದ್ದು, ಡಿಸೆಂಬರ್‌ ಅಂತ್ಯದ ವೇಳೆ 20 ಡಿಗ್ರಿ ಸೆ.ಗಿಂತ ಕೆಳಗಿಳಿಯುವ ಸಾಧ್ಯತೆಯಿದೆ.

ಕೃಷಿಕರಲ್ಲಿ ಆತಂಕ:

ಚಳಿ ಕಡಿಮೆಯಾದರೆ ಕರಾವಳಿಯಲ್ಲಿ ಮುಖ್ಯವಾಗಿ ಪರಿಣಾಮ ಬೀಳುವುದು ಭತ್ತದ ಬೆಳೆಯ ಮೇಲೆ. ಚಳಿ ಹೆಚ್ಚಿದ್ದಷ್ಟು ಭತ್ತದ ಪೈರು ಉತ್ತಮವಾಗಿ ಬರುತ್ತದೆ. ಉತ್ತಮ ಚಳಿ ಇದ್ದರೆ ಗೇರು, ಮಾವು, ಹಲಸಿನ ಮರಗಳಲ್ಲಿ ಹೂ ಬಿಡಲು ಆರಂಭವಾಗುತ್ತದೆ. ಚಳಿ ಕಡಿಮೆಯಾದರೆ ಇದೂ ವಿಳಂಬವಾಗುತ್ತದೆ. ಅಂದರೆ ಬೇಸಗೆಯಲ್ಲಿ ಕೈಗೆ ಸಿಗಬೇಕಾದ ಬೆಳೆ ಮಳೆಗಾಲದ ಹೊತ್ತಿಗೆ ಸಿಗುವಂತಾಗುತ್ತದೆ. ಇದು ಫಸಲು- ಆದಾಯದ ಮೇಲೆ ಪರಿಣಾಮ ಬೀಳುತ್ತದೆ ಎನ್ನುತ್ತಾರೆ ಕೃಷಿಕರು. ಚಳಿ ತಡವಾದರೆ ತರಕಾರಿ ಬೆಳೆಗಳ ಮೇಲೆಯೂ ದುಷ್ಪರಿಣಾಮ ತಪ್ಪಿದ್ದಲ್ಲ.

ಸದ್ಯ ಆಗಾಗ ಮಳೆ ಸುರಿಯುತ್ತಿರುವುದರಿಂದ ಚಳಿಯಲ್ಲಿ ನಿರಂತರತೆ ಇಲ್ಲ. ನವೆಂಬರ್‌ ಅಂತ್ಯದ ವರೆಗೂ ಇದೇ ರೀತಿಯ ವಾತಾವರಣ ಇರಬಹುದು. ಬಳಿಕ ಚಳಿ ತೀವ್ರವಾಗುವ ಸಾಧ್ಯತೆಯಿದೆ.ಸಾಯಿಶೇಖರ್‌ ಕರಿಕಳ,ಹವ್ಯಾಸಿ ಹವಾಮಾನ ವಿಶ್ಲೇಷಕರು

ಟಾಪ್ ನ್ಯೂಸ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.