ಅಗತ್ಯಕ್ಕಿಂತ ಹೆಚ್ಚು ಔಷಧಗಳ ಖರೀದಿ ಕೊರತೆಗೆ ಕಾರಣ
Team Udayavani, Apr 3, 2020, 11:37 AM IST
ಮಂಗಳೂರು: ಲಾಕ್ಡೌನ್ ಮುಂದು ವರಿದರೆ ಔಷಧ ಸಿಗದಿರಬಹುದು ಎಂಬ ಆತಂಕದಿಂದ ಜನರು ಈಗ ಅಗತ್ಯ ಇಲ್ಲದಿದ್ದರೂ ಹೆಚ್ಚುವರಿ ಔಷಧಗಳನ್ನು ಖರೀದಿಸಿ ಇಡುತ್ತಿರುವುದು ಮೆಡಿಕಲ್ ಶಾಪ್ ಸಿಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಹಲವು ಮೆಡಿಕಲ್ಗಳಲ್ಲಿ ಔಷಧ ಕೊರತೆಗೆ ಇದೂ ಒಂದು ಕಾರಣವಾಗುತ್ತಿದೆ.
ಎ. 14ರ ಬಳಿಕ ಲಾಕ್ಡೌನ್ ವಿಸ್ತರಣೆ ಇಲ್ಲ ಎಂದು ಕೇಂದ್ರ ಸರಕಾರವೇ ಸ್ಪಷ್ಟಪಡಿಸಿದ್ದರೂ ಜನ ಸಾಮಾನ್ಯರಲ್ಲಿ ಆತಂಕ ದೂರವಾಗಿಲ್ಲ. ಕೆಲವರು ಮೂರು, ಆರು ತಿಂಗಳಿಗೆ ಬೇಕಾದಷ್ಟು ಔಷಧವನ್ನು ಒಮ್ಮೆಲೇ ಪಡೆದುಕೊಳ್ಳುತ್ತಿದ್ದಾರೆ.
ದಯವಿಟ್ಟು ಅಗತ್ಯಕ್ಕಿಂತ ಹೆಚ್ಚುವರಿ ಔಷಧ ಪಡೆದು ಕೊಳ್ಳಬೇಡಿ; ಇದರಿಂದ ನಿಜಕ್ಕೂ ಅಗತ್ಯವುಳ್ಳವರಿಗೆ ಸಿಗದೆ ಇರುವ ಸಾಧ್ಯತೆ ಇರುತ್ತದೆ ಎಂದು ಔಷಧ ಅಂಗಡಿಗಳ ಮಾಲಕರು ಮನವಿ ಮಾಡಿದ್ದಾರೆ.
ಕೊರತೆ ಇಲ್ಲ
ಜಿಲ್ಲೆಯಲ್ಲಿ ಸದ್ಯ ಮಾಸ್ಕ್, ಸ್ಯಾನಿಟೈಸರ್ಗಳು ಅಗತ್ಯವಿರುವಷ್ಟು ಪೂರೈಕೆಯಾಗುತ್ತಿವೆ. ಔಷಧಗಳ ಕೊರತೆಯೂ ಇಲ್ಲ. ಆದರೆ ಕೆಲವು ಗ್ರಾಮೀಣ ಭಾಗಗಳಲ್ಲಿ ನಿರ್ದಿಷ್ಟ ಬ್ರ್ಯಾಂಡ್ನ ಔಷಧ
ವನ್ನೇ ಕೇಳುತ್ತಿದ್ದಾರೆ. ಇತರ ಬ್ರ್ಯಾಂಡ್ನ ಔಷಧ ಕೂಡ ಅದೇ ಔಷಧೀಯ ಗುಣ ಹೊಂದಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಆದಾಗ್ಯೂ ಎಲ್ಲ ವಿಧದ ಔಷಧಗಳ ಪೂರೈಕೆಗೆ ಸಕಲ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ಡಯಾಬಿಟೀಸ್, ಹೈಪರ್ ಟೆನ್ಶನ್ ಮೊದಲಾದವುಗಳ ಔಷಧಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura ವಿದ್ಯಾರ್ಥಿ ಶವ ಬೀಚ್ನಲ್ಲಿ ಪತ್ತೆ
Kapu ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು
Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ
Congress ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಠಾಣೆ ಎದುರು BJP ಶಾಸಕರ ಪ್ರತಿಭಟನೆ
CM ವಿರುದ್ಧ ನಕಲಿ ಪೋಸ್ಟ್: ವಿಕ್ರಮ್ ಹೆಗ್ಡೆ, ಗಿಳಿಯಾರ್ ಬಂಧನಕ್ಕೆ ತಾತ್ಕಾಲಿಕ ತಡೆ