ತೋಕೂರು -ಉಡುಪಿ ನಡುವೆ ವಿದ್ಯುತ್ ಚಾಲಿತ ರೈಲು ಯಶಸ್ವೀ ಓಡಾಟ
Team Udayavani, Jan 13, 2020, 10:20 PM IST
ಸುರತ್ಕಲ್: ವಿದ್ಯುತ್ ಚಾಲಿತ ರೈಲು ಓಡಾಟದಲ್ಲಿ ಕೊಂಕಣ ರೈಲ್ವೇ ಮಹತ್ವದ ಸಾಧನೆ ಮಾಡಿದೆ. ಸೋಮವಾರ ಸುರತ್ಕಲ್ ಸಮೀಪದ ತೋಕೂರಿನಿಂದ ಉಡುಪಿಯ ವರೆಗೆ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿದೆ.
ಪ್ರಯಾಣಿಕರ ಸಮಯ ಉಳಿತಾಯ, ಇಂಧನ ಮಿತವ್ಯಯಕ್ಕಾಗಿ ವಿದ್ಯುದೀಕರಣವನ್ನು ತ್ವರಿತವಾಗಿ ಪೂರ್ಣಗೊಳಿಸುವ ಕಾರ್ಯದಲ್ಲಿ ಕೊಂಕಣ ರೈಲ್ವೇ ನಿರತವಾಗಿದೆ. ತೋಕೂರಿನಿಂದ ಕುಂದಾಪುರದ ಬಿಜೂರು ವರೆಗೆ ವಿದ್ಯುದೀಕರಣ ಪೂರ್ಣಗೊಂಡಿದೆ. ಈ ಮಾರ್ಗದ ತೋಕೂರು -ಉಡುಪಿ ನಡುವೆ 48 ಕಿ.ಮೀ. ದೂರವಿದ್ದು, ರೈಲು ತೋಕೂರಿನಿಂದ ಸಂಜೆ 4.05 ಗಂಟೆಗೆ ಪ್ರಯಾಣ ಆರಂಭಿಸಿ 6.10 ನಿಮಿಷಕ್ಕೆ ಉಡುಪಿ ತಲುಪಿತು. ಪ್ರಾಯೋಗಿಕ ಯಾನದ ವೇಳೆ ಇಲಾಖೆಯ ಎಂಜಿನಿಯರ್ಗಳು, ಹಿರಿಯ ಅಧಿ ಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ