ಸ್ಕೂಟರ್ ಗೆ ಢಿಕ್ಕಿ ಹೊಡೆದ ಬುಲೆಟ್ ಟ್ಯಾಂಕರ್: ಚಿಕಿತ್ಸೆ ಫಲಿಸದೆ ಸ್ಕೂಟರ್ ಸವಾರ ಸಾವು
Team Udayavani, Jul 11, 2021, 5:06 PM IST
ಬೈಕಂಪಾಡಿ: ಬೈಕಂಪಾಡಿ ಮೇಲ್ಸೇತುವೆ ಬಳಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಯುವಕನೋರ್ವನನ್ನು ಬುಲೆಟ್ ಟ್ಯಾಂಕರ್ ಢಿಕ್ಕಿ ಹೊಡೆದು ದೂರದವರೆಗೆ ಎಳೆದುಕೊಂಡು ಹೋದ ಪರಿಣಾಮ ಸಾವಿಗೀಡಾದ ಘಟನೆ ನಡೆದಿದೆ.
ದೊಡ್ಡತೋಟ ಬಳಿಯ ಮೇರ್ಕಜೆ ಪುರುಷೋತ್ತಮ ಎಂಬವರ ಪುತ್ರ ತೇಜಸ್(28) ಮೃತಪಟ್ಟ ಯುವಕ.
ಇದನ್ನೂ ಓದಿ: ಯಾದಗಿರಿ: 5 ದಿನಗಳಿಂದ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ
ಮಂಗಳೂರಿನ ಕುಳಾಯಿ ಬಳಿ ಬ್ಯಾಟರಿ ಅಂಗಡಿಯಲ್ಲಿ ಇಲೆಕ್ನಿಷಿಯನ್ ಆಗಿ ಉದ್ಯೋಗ ಮಾಡುತ್ತಿದ್ದು ಶನಿವಾರ ರಾತ್ರಿ ಸ್ಕೂಟರ್ ನಲ್ಲಿ ಮರಳುತ್ತಿದ್ದಾಗ ಘಟನೆ ನಡೆದಿದೆ.
ಬುಲೆಟ್ ಟ್ಯಾಂಕರ್ ನ ಹಿಂದಿನ ಒಂದು ಬದಿಯ ಕಬ್ಬಣದ ಪೈಪ್ ತೇಜಸ್ ರವರ ಕಾಲಿನ ಮಧ್ಯೆ ಸಿಲುಕಿ ರಸ್ತೆಯಲ್ಲಿ ವಾಹನ ಸಮೇತ ಎಳೆಯಿತೆನ್ನಲಾಗಿದೆ. ಇದರಿಂದ ಸೊಂಟದ ಕೆಳಭಾಗ ಗಂಭೀರ ಗಾಯಗೊಂಡ ತೇಜಸ್ ರವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ತಂದು ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ವಿಪರೀತ ರಕ್ತಸ್ರಾವದಿಂದ ಆರೋಗ್ಯದಲ್ಲಿ ಏರುಪೇರಾಗಿ ಜು.11 ರಂದು ಮುಂಜಾನೆ ಕೊನೆಯುಸಿರೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ