ಅಮೆರಿಕದಲ್ಲಿ ರೈಲು ಢಿಕ್ಕಿ: ಬನ್ನೂರಿನ ವಿದ್ಯಾರ್ಥಿ ಸಾವು
Team Udayavani, Dec 13, 2022, 1:02 AM IST
ಪುತ್ತೂರು : ಅಮೆರಿಕದ ಐಯೋವಾದಲ್ಲಿ ರೈಲು ಅಪಘಾತಕ್ಕೀಡಾಗಿ ಪುತ್ತೂರು ಬನ್ನೂರಿನ ನಿವಾಸಿ ವಿದ್ಯಾರ್ಥಿ ಮೃತಪಟ್ಟ ಘಟನೆ ಡಿ. 9ರಂದು ನಡೆದಿದೆ.
ಬನ್ನೂರು ನಿವಾಸಿ, ಮೈಸೂರಿನಲ್ಲಿ ಹಿರಿಯ ಹೊಟೇಲ್ ಉದ್ಯಮಿಯಾಗಿದ್ದ ಅನಂತಕೃಷ್ಣ ರಾವ್ ಅವರ ಪುತ್ರ ಟಿ.ಎ. ಸುಬ್ರಹ್ಮಣ್ಯ ಪಡ್ಡಿಲ್ಲಾಯ (30) ಮೃತಪಟ್ಟ ವಿದ್ಯಾರ್ಥಿ. ಅವರು ಮದ್ರಾಸ್ ಐಐಟಿ ವಿದ್ಯಾರ್ಥಿಯಾಗಿದ್ದು, ಅಮೆರಿಕದಲ್ಲಿ ಎರಡು ವರ್ಷಗಳಿಂದ ಉನ್ನತ ವ್ಯಾಸಂಗ ಮಾಡುತ್ತಿದ್ದರು.
ಡಿ. 9ರಂದು ಅವರಿಗೆ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಮೃತರು ತಂದೆಯನ್ನು ಅಗಲಿದ್ದಾರೆ.