ರುಂಡ, ಮುಂಡ ಸಿಕ್ಕಿತು; ಆರೋಪಿಗಳು ಸಿಗಲೇ ಇಲ್ಲ!


Team Udayavani, Nov 13, 2018, 2:50 AM IST

crime-follow-600.jpg

ನರಿಮೊಗರು: ಸರ್ವೆ ಗ್ರಾಮದ ಭಕ್ತಕೋಡಿ ರೆಂಜಿಲಾಡಿಯಲ್ಲಿ 2015ರ ಡಿಸೆಂಬರ್‌ 14ರಂದು ಒಂದು ತಲೆಬುರುಡೆ ಪತ್ತೆಯಾಗಿತ್ತು. ಅಲ್ಲೇ ಪಕ್ಕದ ಬೊಟ್ಯಾಡಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಕೈ-ಕಾಲುಗಳ ಭಾಗವೂ ಕೊಳೆತ ಸ್ಥಿತಿಯಲ್ಲಿ ಸಿಕ್ಕಿತ್ತು. ದೇಹವು ಕೊಳೆತು ಎಲುಬುಗಳಷ್ಟೇ ಉಳಿದಿದ್ದವು. ಈ ದೇಹದ ಹೊಟ್ಟೆ ಹಾಗೂ ಉಳಿದ ಭಾಗಗಳೂ ಕೊಳೆತ ಸ್ಥಿತಿಯಲ್ಲಿ ಇದರ ಮರುದಿನ ಸೊರಕೆ ಪರನೀರಿನಲ್ಲಿ ಪತ್ತೆಯಾಗಿದ್ದವು.

ಮೂರು ತುಂಡುಗಳಾಗಿ ದೇಹ ಸಿಕ್ಕಿ ಮೂರು ವರ್ಷಗಳಾದರೂ ಈ ಪ್ರಕರಣವಿನ್ನೂ ನಿಗೂಢವಾಗಿಯೇ ಉಳಿದಿರುವುದು ವಿಶೇಷ. ಆ ದೇಹ ಯಾರದು? ಗಂಡಸೋ ಅಥವಾ ಹೆಂಗಸೋ ಎಂಬ ಕುರುಹು ಕೂಡ ಸಿಕ್ಕಿಲ್ಲ. ಕೊಳೆತ ದೇಹದ ಜತೆಗೆ ಒಂದು ಬೆಲ್ಟ್ ಸಿಕ್ಕಿದ್ದು, ಈ ಆಧಾರದಲ್ಲಿ ಅದು ಗಂಡಸಿನ ಮೃತದೇಹವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದರು. ರುಂಡ ಹಾಗೂ ಕೈಕಾಲುಗಳು ಪತ್ತೆಯಾದ ಸ್ಥಳದಿಂದ ಸುಮಾರು 2.5 ಕಿ.ಮೀ. ದೂರದ ಸೊರಕೆ ಪರನೀರಿನಲ್ಲಿ ಶವ ಕೊಳೆತ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಗುಡ್ಡದಲ್ಲಿ ರುಂಡ, ಕೈ ಹಾಗೂ ತುದಿಭಾಗವಿಲ್ಲದ ಕಾಲುಗಳು ಪತ್ತೆಯಾಗಿದ್ದವು. ಇವೂ ಪೂರ್ಣವಾಗಿ ಕೊಳೆತಿದ್ದ ಕಾರಣ ಶವದ ಗುರುತು ಹಿಡಿಯುವುದೇ ಅಸಾಧ್ಯವಾಯಿತು. ಆದರೆ, ಯಾವುದೋ ಕಾರಣಕ್ಕೆ ಈ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ ಅಥವಾ ಕೊಂದ ಬಳಿಕ ಗುರುತು ಸಿಗಬಾರದೆಂದೇ ಶವದ ಭಾಗಗಳನ್ನು ಬೇರೆ ಬೇರೆ ಕಡೆ ಎಸೆದು, ಆರೋಪಿಗಳು ವ್ಯವಸ್ಥಿತವಾಗಿ ಪರಾರಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿತ್ತು.ರುಂಡ ಹಾಗೂ ಕೈ ಕಾಲುಗಳ ಎಲುಬುಗಳು ಪತ್ತೆಯಾದ ಬಳಿಕ ಸಮೀಪದ ಪೊದೆಯಲ್ಲಿ ಪುಡಿಯಾದ ಬಳೆ, ಬೆಳ್ಳಿಯ ಕರಿಮಣಿ ಸರ ಹಾಗೂ ಸೀರೆ ಸಿಕ್ಕಿದ್ದವು. ಆದ ಕಾರಣ ಶವ ಮಹಿಳೆಯದ್ದಾಗಿರಬಹುದು ಎಂಬ ಸಂಶಯವೂ ವ್ಯಕ್ತವಾಯಿತು. ಆದರೆ, ಮುಂಡ ಪತ್ತೆಯಾದಲ್ಲಿ ಬೆಲ್ಟ್ ಸಿಕ್ಕಿದ್ದು, ಕೊಳೆತ ಶವ ಗಂಡಸಿನದ್ದಾಗಿರಬಹುದು ಎಂಬ ಅಂಶ ದ್ವಂದ್ವಕ್ಕೆ ಒಳಗಾಗುವಂತೆ ಮಾಡಿತ್ತು. ಮಹಿಳೆಯ ಬಟ್ಟೆ ಹಾಗೂ ಬೆಲ್ಟ್ ಅನ್ನು ತನಿಖೆಯ ದಾರಿ ತಪ್ಪಿಸಲೆಂದೇ ಇಡಲಾಗಿದೆಯೇ ಎಂಬ ಸಂಶಯವೂ ಪೊಲೀಸರನ್ನು ಕಾಡಿತ್ತು. 

ವಿಧಿ ವಿಜ್ಞಾನ ತಂಡ, ಎಸ್ಪಿ ಭೇಟಿ
ಮೃತದೇಹದ ತಲೆಬುರುಡೆ ಮತ್ತು ಕೈ ಕಾಲುಗಳ ಎಲುಬುಗಳು ಪತ್ತೆಯಾದ ಸ್ಥಳಕ್ಕೆ ಅಪರಾಧ ವಿಧಿ ವಿಜ್ಞಾನ ಪ್ರಯೋಗಾಲದ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ತಲೆಬುರುಡೆ ಹಾಗೂ ಕೈಕಾಲುಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದರು. ಸ್ಥಳಕ್ಕೆ ಅಂದಿನ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಎಸ್‌. ಡಿ. ಶರಣಪ್ಪ, ಹೆಚ್ಚುವರಿ ಎಸ್‌ಪಿ ವಿನ್ಸೆಂಟ್‌ ಶಾಂತಕುಮಾರ್‌ ಭೇಟಿ ನೀಡಿದ್ದರು. ಎಎಸ್ಪಿ ಸಿ.ಬಿ. ಋಷ್ಯಂತ್‌, ಪುತ್ತೂರು ಗ್ರಾಮಾಂತರ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಬಿ.ಎಸ್‌. ರವಿ ಅವರೂ ಹಾಜರಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಎಲುಬುಗಳನ್ನು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿದ ಬಳಿಕ ಶವ ಗಂಡಸಿನದ್ದು ಅಥವಾ ಹೆಂಗಸಿನದ್ದೇ ಎಂಬ ಕುರಿತು ಹಾಗೂ ಇತರ ಮಾಹಿತಿಗಳು ಸ್ಪಷ್ಟವಾಗುವ ವಿಶ್ವಾಸ ವ್ಯಕ್ತವಾಗಿತ್ತು. ಆದರೆ, ಬಳಿಕ ವಿಧಿ ವಿಜ್ಞಾನ ವರದಿ ಬಂದ ಯಾವುದೇ ಮಾಹಿತಿ ಇಲ್ಲ

ವಿಕೃತ ಕೊಲೆ
ಮೇಲ್ನೋಟಕ್ಕೆ ಇದೊಂದು ಇದೊಂದು ಕೊಲೆ ಪ್ರಕರಣದಂತೆ ಕಂಡು ಬರುತ್ತಿದ್ದು, ಕೊಲೆಯಾದ ವ್ಯಕ್ತಿ ಯಾರು? ಶವವನ್ನು ಛಿದ್ರಗೊಳಿಸಿ ಇಲ್ಲಿಗೆ ತಂದು ಬಿಸುಟು ಹೋದವರು ಯಾರು? ಇದು ತಂಡದ ಕೃತ್ಯವೇ ಎಂಬ ಪ್ರಶ್ನೆಗಳು ಮೂಡಿದ್ದವು. ದೇಹದಿಂದ ರುಂಡ ಹಾಗೂ ಕೈ, ಕಾಲುಗಳ ಭಾಗವನ್ನು ಕಡಿದು ಪ್ರತ್ಯೇಕಿಸಿರುವುದು ಕೊಲೆ ಮಾಡಿರುವವರ ವಿಕೃತ ಮನೋಭಾವವನ್ನು ವ್ಯಕ್ತಪಡಿಸಿತ್ತು ಹಾಗೂ ದ್ವೇಷದಿಂದ ಆಗಿರಬಹುದಾದ ಕೊಲೆ ಸಾಧ್ಯತೆಯನ್ನು ತೆರೆದಿಟ್ಟಿತ್ತು.ಆದರೆ ಪ್ರಕರಣ ನಡೆದು ಮೂರು ವರ್ಷಗಳೇ ಆದರೂ ಕೊಲೆಯ ರಹಸ್ಯ ಇನ್ನೂ ಹೊರಬಂದಿಲ್ಲ. ಪೊಲೀಸ್‌ ಇಲಾಖೆ ಈ ಕುರಿತು ತೀವ್ರವಾದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪತ್ತೆ ಆಗಿಲ್ಲ
ಸರ್ವೆಯಲ್ಲಿ ಪ್ರತ್ಯೇಕವಾಗಿ ಮೃತದೇಹದ ಭಾಗಗಳು ಪತ್ತೆಯಾದ ಪ್ರಕರಣಗಳ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಮೃತದೇಹದ ಗುರುತು ಸಿಗದೇ ಇರುವುದರಿಂದ, ಕೊಲೆಗೈದ ಆರೋಪಿಯ ಪತ್ತೆಯೂ ಆಗಿಲ್ಲ. ಮೃತದೇಹದ ಗುರುತು ಪತ್ತೆಗಾಗಿ ದೇಹದ ಭಾಗಗಳನ್ನು ಫೋರೆನ್ಸಿಕ್‌ 
ಟೆಸ್ಟ್‌ ಗೆ ಕಳುಹಿಸಲಾಗಿದೆ.
– ಶಕ್ತಿವೇಲು, ಇ. ಉಪನಿರೀಕ್ಷಕ, ಪುತ್ತೂರು ಗ್ರಾಮಾಂತರ ಠಾಣೆ

— ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.