ಗ್ರಾಮಸ್ಥರಿಂದ ತುಂಬಿತು ಉಮಿಲಾಯಿ ಕಿರುನದಿ

ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ

Team Udayavani, Jan 4, 2021, 1:14 PM IST

ಗ್ರಾಮಸ್ಥರಿಂದ ತುಂಬಿತು ಉಮಿಲಾಯಿ ಕಿರುನದಿ

ವೇಣೂರು, ಜ. 3:  ಪ್ರತೀ ವರ್ಷದಂತೆ ಈ ವರ್ಷವೂ ಕುಕ್ಕೇಡಿ ಗ್ರಾಮದ ಉಮಿಲಾಯಿ ಪರಿಸರದ ಕಿರುನದಿ ತುಂಬಿ ತುಳುಕುತ್ತಿದೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ವರದಾನವಾಗುವ ಈ ನದಿಯಲ್ಲಿ ನೀರಿರಲು ಕಾರಣ ಕುಕ್ಕೇಡಿ ಮತ್ತು ಗರ್ಡಾಡಿಯ ಗ್ರಾಮಸ್ಥರು.

ತಾಲೂಕಿನಲ್ಲಿ ಕೆಲವು ಕಿಂಡಿ ಅಣೆ ಕಟ್ಟುಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿ ಬೇಸಗೆಯಲ್ಲಿ ಜೀವ ಕಳೆದುಕೊಳ್ಳುತ್ತವೆ. ಆದರೆ ಉಮಿಲಾಯಿ ಪರಿಸರದ ಕಿರುನದಿಗೆ ಗ್ರಾಮಸ್ಥರೇ ಹಲಗೆ ಅಳವಡಿಸಿ ಶ್ರಮದಾನದ ಮೂಲಕ ನೀರಿಂಗಿಸುವ ಕಾರ್ಯದಲ್ಲಿ ನಿರತರಾಗಿ ಜಲ ಸಮೃದ್ಧಿ ಪಡೆದುಕೊಂಡಿದ್ದಾರೆ.

2013ರಲ್ಲಿ ಉಮಿಲಾಯಿ ಪರಿಸರದ ಉಪನದಿಗೆ ಜನರ ಬೇಡಿಕೆಯಂತೆ ಕಿರು ಸೇತುವೆ ನಿರ್ಮಿಸಿ ಹಲಗೆ ಅಳವ ಡಿಸಲಾಗಿತ್ತು. ಅಂದಿನಿಂದ ಸತತ 7 ವರ್ಷಗಳಿಂದ ಈ ಕಿಂಡಿ ಅಣೆಕಟ್ಟಿಗೆ ಕುಕ್ಕೇಡಿ-ಗರ್ಡಾಡಿ ಗ್ರಾಮಸ್ಥರು ಹಲಗೆ ಅಳವಡಿಸುತ್ತಾ ಬರುತ್ತಿದ್ದು, ಪರಿಸರದಲ್ಲಿ ಅಂತರ್ಜಲದ ಮಟ್ಟ ವೃದ್ಧಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

1 ಕಿ.ಮೀ.ನಷ್ಟು ನೀರು ಸಂಗ್ರಹ :

15 ಕಿಂಡಿಗಳಿರುವ ಈ ಕಿರುಸೇತುವೆಯಡಿ ಸುಮಾರು 10 ಅಡಿ ಎತ್ತರಕ್ಕೆ ಹಲಗೆ ಅಳವಡಿಸಿ ನೀರನ್ನು ತಡೆಯಲಾಗುತ್ತದೆ. ಒಂದು ಕಿಂಡಿಗೆ ಸರಿಸುಮಾರು 24 ಹಲಗೆ ಬೇಕಾಗುತ್ತವೆ. ಒಂದು ಅಡಿಯಷ್ಟು ಜಾಗವನ್ನು ಬಿಟ್ಟು ಎರಡು ಬದಿಗಳಲ್ಲಿ ಹಲಗೆ ಇಳಿಸಲಾಗುತ್ತದೆ. ಮಧ್ಯ ಭಾಗಕ್ಕೆ ಮಣ್ಣುತುಂಬಿಸಿ ನೀರನ್ನು ಪೂರ್ಣವಾಗಿ ತಡೆಯಲಾಗುತ್ತದೆ. ನದಿಯ ಸುಮಾರು 1 ಕಿ.ಮೀ.ನಷ್ಟು ಉದ್ದಕ್ಕೆ ನೀರು ನಿಲ್ಲುವುದು ವಿಶೇಷ.

ಮಾದರಿ ಕಾರ್ಯ :  ಕುಕ್ಕೇಡಿ-ಗರ್ಡಾಡಿ ಗ್ರಾಮದ25ರಿಂದ 30 ಗ್ರಾಮಸ್ಥರುಶ್ರಮದಾನದಲ್ಲಿ ಪ್ರತೀ ವರ್ಷ ಪಾಲ್ಗೊಂಡು ನದಿಯ ಅಣೆಕಟ್ಟಿಗೆಹಲಗೆ ಅಳವಡಿಸುವ ಜವಾಬ್ದಾರಿ ತೆಗೆದುಕೊಂಡು ಮಾದರಿಯಾಗಿದ್ದಾರೆ. ಈ ಅಣೆಕಟ್ಟಿನಿಂದ ಕೇವಲ ನದಿ ಬದಿಯ ಕೃಷಿ ಭೂಮಿಗಳಿಗೆಮಾತ್ರವಲ್ಲದೆ ಕುಕ್ಕೇಡಿ ಮತ್ತು ಗರ್ಡಾಡಿ ಗ್ರಾಮದ 30ಕ್ಕೂ ಅಧಿಕ ಕುಟುಂಬಗಳಿಗೆಅನುಕೂಲವಾಗಿದೆ. ಮಾತ್ರವಲ್ಲದೆ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಳಕ್ಕೂಕಾರಣವಾಗಿದೆ. ಕಟ್ಟ ನಿರ್ಮಿಸಲುಹಲಗೆಯ ಬೇಡಿಕೆ ಇಟ್ಟಾಗ ಈಹಿಂದಿನ ಶಾಸಕ ವಸಂತ ಬಂಗೇರ ತಮ್ಮ ನಿಧಿಯಿಂದ ಅನುದಾನ ಒದಗಿಸಿದ್ದಾರೆ.ಈಗಿನ ಶಾಸಕ ಹರೀಶ್‌ ಪೂಂಜ ಅವರೂನಮ್ಮ ಕಾರ್ಯವನ್ನು ಶ್ಲಾಘಿಸಿ ಹಲಗೆಗೆಅನುದಾನವನ್ನು ಒದಗಿಸಿಕೊಟ್ಟಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

 

– ವಿಶೇಷ ವರದಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.