ವೇಣೂರು: ಟೆಂಪೋ ಚಕ್ರಕ್ಕೆ ಸಿಲುಕಿದ ಬೈಕ್; ಪ್ರಾಧ್ಯಾಪಕ ಪಾರು
Team Udayavani, Mar 19, 2022, 11:07 AM IST
ವೇಣೂರು: ಬೈಕ್ ಮತ್ತು 407 ಟೆಂಪೋ ನಡುವೆ ಢಿಕ್ಕಿ ಹೊಡೆದ ಪರಿಣಾಮ ಕಾಲೇಜಿನ ಪ್ರಾಧ್ಯಾಪಕ ಗಾಯಗೊಂಡ ಘಟನೆ ಮುದ್ದಾಡಿ ರಸ್ತೆಯಲ್ಲಿ ನಡೆದಿದೆ.
ಬಂಟ್ವಾಳ ತಾಲ್ಲೂಕಿನ ನೈನಾಡು ಪಿಲತಬೆಟ್ಟು ಗ್ರಾಮದ ಮಿತ್ತೊಟ್ಟು ನಿವಾಸಿ, ಮೂಡಬಿದಿರೆ ರೋಟರಿ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರದೀಪ ಭಟ್ (28) ಗಾಯಾಳು.
ಪ್ರದೀಪ ಭಟ್ ನಯನಾಡು ಕಡೆಯಿಂದ ಕರ್ತವ್ಯಕ್ಕೆ ಬರುತ್ತಿದ್ದ ವೇಳೆ ವೇಣೂರು ಸಮೀಪದ ಕಾಮೆಟ್ಟು ಬಳಿಯ ತಿರುವಿನಲ್ಲಿ ಎದುರಿನಿಂದ ಬಂದ ಟೆಂಪೋ ಢಿಕ್ಕಿ ಹೊಡೆದಿದೆ.
ಇದನ್ನೂ ಓದಿ:ಭೀಕರ ಬಸ್ ಅಪಘಾತ: ಐವರು ಸಾವು; 30 ಅಧಿಕ ಮಂದಿ ಗಂಭೀರ
ಟೆಂಪೋ ಢಿಕ್ಕಿ ಹೊಡೆದ ಪರಿಣಾಮ ಸವಾರ ಬೈಕಿನಿಂದ ಎಸೆಯಲ್ಪಟ್ಟಿದ್ದಾರೆ. ಹೆಲ್ಮೆಟ್ ಧರಿಸಿದ್ದರಿಂದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಕ್ ಟೆಂಪೋ ಅಡಿಗೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.