ತಾಪಂ ಸದಸ್ಯರ ಸಾಮೂಹಿಕ ಗೈರು: ಸಭೆ ಮುಂದೂಡಿದ ಅಧ್ಯಕ್ಷೆ
ಜಗಳೂರು: ತಾಪಂ ಸಭೆಯಲ್ಲಿ ಅಧ್ಯಕ್ಷೆ ಮಂಜುಳಾ ಮಾತನಾಡಿದರು
Team Udayavani, Feb 6, 2021, 2:45 PM IST
ಜಗಳೂರು: ತಾಲೂಕು ಮಟ್ಟದ·ಅಧಿಕಾರಿಗಳು ಸಭೆಗೆ ಸಮರ್ಪಕ ಮಾಹಿತಿಒದಗಿಸುತ್ತಿಲ್ಲ. ಅನುಪಾಲನ ವರದಿಮಂಡಿಸುತ್ತಿಲ್ಲ ಎಂದು ಅಸಮಾಧಾನಗೊಂಡ ತಾಪಂ ಸದಸ್ಯರು ಸಾಮೂಹಿಕವಾಗಿಗೈರು ಹಾಜರಾಗುವುದರ ಮೂಲಕ ಸಭೆಬಹಿಷ್ಕರಿಸಿದ ಘಟನೆ ತಾಪಂ ಸಭಾಂಗಣದಲ್ಲಿಜರುಗಿತು.
ಪಟ್ಟಣದ ತಾಪಂ ಸಭಾಂಗಣದಲ್ಲಿತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾದಾಗಸಭೆಗೆ ಬೆರಳಣಿಕೆಯಷ್ಟು ತಾಲೂಕು ಮಟ್ಟದಅ ಧಿಕಾರಿಗಳು ಮಾತ್ರ ಹಾಜರಿದ್ದರು. ಇಒಮತ್ತು ಅಧ್ಯಕ್ಷರು, ಸದಸ್ಯರಿಗಾಗಿ ಸುಮಾರುಒಂದೂವರೆ ತಾಸು ಕಾಯ್ದರು ಸಹ ಒಬ್ಬಸದಸ್ಯರು ಸಭೆಯ ಹತ್ತಿರ ಸುಳಿಯಲಿಲ್ಲ.ಆದರೆ ಅಧ್ಯಕ್ಷೆ ಮಂಜುಳಾ ಅವರಸಂಧಾನದ ನಂತರ ಸಭಗೆ ಸದಸ್ಯರು ಸಭೆಗೆಆಗಮಿಸಿದರು.
ಸದಸ್ಯ ಮಾರೇನಹಳ್ಳಿ ಬಸವರಾಜ್ಮಾತನಾಡಿ, ಹಿಂದಿನ ಸಭೆಯಲ್ಲಿಚರ್ಚಿತ ಸಮಸ್ಯೆಗಳನ್ನು ಅ ಧಿಕಾರಿಗಳುಬಗೆಹರಿಸದೇ ಸಭೆಗೆ ಹಾಜರಾಗುತ್ತಾರೆ.ಕಳೆದ 5 ವರ್ಷಗಳಿಂದ ಇದೇ ಸಮಸ್ಯೆಇದೆ. ಗ್ರಾಮೀಣ ಪ್ರದೇಶಗಳಲ್ಲಿ ಹಲವಾರುಸಮಸ್ಯೆಗಳಿದ್ದು, ಮತ ನೀಡಿದಂತಹ ಜನರುಸಮಸ್ಯೆಗಳ ಬಗ್ಗೆ ನಮ್ಮನ್ನು ಕೇಳುತ್ತಾರೆ.ಆದರೆ ಅ ಧಿಕಾರಿಗಳು ಕೆಲಸ ಮಾಡುವುದಿಲ್ಲಎಂದು ದೂರಿದರು.
ಸದಸ್ಯ ಶಂಕರ್ ನಾಯ್ಕ ಮಾತನಾಡಿ,ಪಿಡಿಒಗಳೂ 15 ನೇ ಹಣಕಾಸು ಯೋಜನೆದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳುಗಬ್ಬು ನಾರುತ್ತಿವೆ ಎಂದರು.ಅಧ್ಯಕ್ಷೆ ಮಂಜುಳಾ ಮಾತನಾಡಿ,ಕಳೆದ 5 ವರ್ಷಗಳಿಂದ ಅಧಿ ಕಾರಿಗಳೂಅನುಪಾಲನ ವರದಿ ನೀಡುತ್ತಿಲ್ಲ. ಸದಸ್ಯರಸಮಸ್ಯೆ ಆಲಿಸುತ್ತಿಲ್ಲ. ಹಾಗಾಗಿ ಸಭೆಯನ್ನುಮುಂದೂಡಲಾಗುವುದು ಎಂದು ಸಭೆಮುಂದೂಡಿದರು.
ಇಒ ಮಲ್ಲಾ ನಾಯ್ಕ ಮಾತನಾಡಿ,ಮುಂದಿನ ಸಭೆಗೆ ತಪ್ಪದೇ ಅಧಿ ಕಾರಿಗಳುಅನುಪಾಲನಾ ವರದಿ ತರಬೇಕು ಎಂದು
ಸೂಚಿಸಿದರು. ತಾಪಂ ಸ್ಥಾಯಿ ಸಮಿತಿಸಿದ್ದೇಶ್ ಸೇರಿದಂತೆ ತಾಲೂಕು ಮಟ್ಟದಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ