ದಾವಣಗೆರೆ : ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ, ವಿದ್ಯುತ್ ಉಪಕರಣಗಳಿಗೆ ಹಾನಿ
Team Udayavani, Apr 28, 2022, 10:26 PM IST
ದಾವಣಗೆರೆ : ಸಿಡಿಲು ಹೊಡೆದ ಪರಿಣಾಮ ತೆಂಗಿನಮರಕ್ಕೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಗುರುವಾರ ರಾತ್ರಿ ನಗರದ ಪಿ.ಜೆ. ಬಡಾವಣೆ ೪ನೇ ಮೇನ್ನ ಜೈನ್ ಶಾಲೆ ಬಳಿ ಸಂಭವಿಸಿದೆ.
ಗುಡುಗಿನ ಭಾರಿ ಸದ್ದಿನ ಆರ್ಭಟದ ಮಧ್ಯೆ ತೆಂಗಿನ ಮರಕ್ಕೆ ಸಿಡಿಲು ಹೊಡೆಯಿತು. ಈ ವೇಳೆ ಮರಕ್ಕೆ ಹೊತ್ತಿಕೊಂಡ ಬೆಂಕಿಯಿಂದಾಗಿ ಸುತ್ತಲಿನ ಮನೆಯವರು ಗಾಬರಿಗೊಂಡು ಮನೆಯಿಂದ ಹೊರ ಬಂದರು.
ಕೂಡಲೇ ಸ್ಥಳಕ್ಕೆ ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿತು. ಸಿಡಿನ ಹೊಡೆತಕ್ಕೆ ವಿದ್ಯುತ್ ಸರಬರಾಜಿನಲ್ಲಿ ಏರಿಳಿತವಾಗಿ ಆ ಭಾಗದ ಕೆಲವು ಮನೆಗಳಲ್ಲಿನ ಟಿವಿ ಸೆಟ್ ಬಾಕ್ಸ್, ಯುಪಿಎಸ್, ಫ್ರಿಡ್ಜ್ ಸೇರಿದಂತೆ ಕೆಲವು ಉಪಕರಣಗಳು ಸಹ ಹಾಳಾಗಿವೆ.
ಇದನ್ನೂ ಓದಿ : ಇಫ್ತಾರ್ ಕೂಟ : ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ