ಮಾನವೀಯತೆಯ ವೈದ್ಯ ಜನರಿಗೆ ದೇವರು: ಸಾಣೇಹಳ್ಳಿ ಶ್ರೀ
Team Udayavani, Jan 26, 2017, 12:30 PM IST
ದಾವಣಗೆರೆ: ಹೃದಯ ವಿಶಾಲತೆ- ಶ್ರೀಮಂತಿಕೆಯಿಂದ ರೋಗಿಗಳಿಗೆ ಸಲಹೆ, ಚಿಕಿತ್ಸೆ ನೀಡುವ ವೈದ್ಯರು ದೇವರಿಗೆ ಸಮಾನವಾಗುತ್ತಾರೆ ಎಂದು ಸಾಣೇಹಳ್ಳಿ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ತರಳಬಾಳು ಸಭಾಭವನದಲ್ಲಿ ಬುಧವಾರ ಸಂಜೆ ಎನ್.ಜಿ. ಪುಟ್ಟಸ್ವಾಮಿ ಮತ್ತು ಸ್ನೇಹ ಬಳಗದಿಂದ ಡಾ| ಎಚ್. ಗುರುಪಾದಪ್ಪ, ಡಾ| ಉಪಾಸಿ, ಡಾ| ವಸಂತ್ಕುಮಾರ್, ಡಾ| ಶ್ರೀನಿವಾಸ್, ಡಾ| ಅಲಿ ಅವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವೈದ್ಯರು ರೋಗಿಗಳನ್ನು ಪ್ರೀತಿ, ವಿಶ್ವಾಸದಿಂದ ಕಾಣುವಂತೆ ರೋಗಿಗಳು, ಸಾರ್ವಜನಿಕರು ಸಹ ವೈದ್ಯರನ್ನುಅದೇ ರೀತಿ ಕಾಣಬೇಕು ಎಂದರು. ಜನರು ವೈದ್ಯರನ್ನು ದೇವರಂತೆ ಕಾಣುವಂತಾಲು ಹೃದಯ ವಿಶಾಲತೆ, ಮಾನವೀಯ ಕಳಕಳಿಯಿಂದಇರಬೇಕು.
ಹಣ, ಸ್ವಾರ್ಥ, ಸಂಕುಚಿತ ಮನೋಭಾವ ಇದ್ದವರು ಜನರಿಗೆ ದೆವ್ವದಂತೆ ಕಾಣುತ್ತಾರೆ. ಸಮಯ ಯಾರ ಕೈಯಲ್ಲೂ ಇರುವುದಿಲ್ಲ. ಇರಲಿಕ್ಕೆ ಸಾಧ್ಯವೂ ಇಲ್ಲ. ಹಾಗಾಗಿ ಕೊನೆಯ ಉಸಿರುತನಕ ಪ್ರತಿಯೊಬ್ಬರೂ ಸಾರ್ಥಕ ಕೆಲಸದ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಇಂದಿನ ವಾತಾವರಣದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇರಬೇಕಾದ ಜಾಗದಲ್ಲಿ ಭೀತಿ, ಹಣದ ವ್ಯಾಮೋಹ ಕಂಡು ಬರುತ್ತಿದೆ. ಇದರಿಂದಾಗಿ ಮನಸ್ಸು ವಿಕಾರವಾಗುತ್ತಿದೆ. ಜಗತ್ತಿನಲ್ಲಿ ಯಾರು ಪ್ರೀತಿಯನ್ನು ಬಂಡವಾಳ ಮಾಡಿಕೊಂಡು ಜೀವನ ನಡೆಸುವರೋ ಅಂಥಹರು ಸದಾ ಸಂತೋಷದಿಂದ ಇರುತ್ತಾರೆ ಎಂದು ತಿಳಿಸಿದರು.
ಪ್ರಸ್ತುತ ವಾತಾವರಣದಲ್ಲಿ ನಾವೆಲ್ಲರೂ ಮಕ್ಕಳಲ್ಲಿ ಕನ್ನಡ ಸಂಸ್ಕೃತಿಯನ್ನ ಬೆಳೆಸುವ ಮೂಲಕ ಅವರನ್ನು ಸುಸಂಸ್ಕೃತರನ್ನಾಗಿ ರೂಪಿಸಬೇಕು. ಕನ್ನಡ ಸಂಸ್ಕೃತಿ ಎಂಬುದು ಜೀವನದ ದಾರಿದೀಪ ಎಂಬುದನ್ನು ಮರೆಯಬಾರದು. ಕನ್ನಡದ ಜೊತೆಗ ಆಂಗ್ಲ ಭಾಷೆಯನ್ನು ಕಲಿಸಬೇಕು.
ಅಂತೆಯೇ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಇತರರು ಇದ್ದರು. ಡಾ| ಎಚ್. ಗುರುಪಾದಪ್ಪ, ಡಾ| ಉಪಾಸಿ, ಡಾ| ವಸಂತ್ಕುಮಾರ್, ಡಾ| ಶ್ರೀನಿವಾಸ್, ಡಾ| ಅಲಿ ಅವರನ್ನು ಅಭಿನಂದಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ