ಮೊದಲ ಚುನಾವಣೆ ನೆನಪು; ಆಗ ರೂಪಾಯಿಗಲ್ಲ, ಅಭ್ಯರ್ಥಿಗೇ ಆದ್ಯತೆ!


Team Udayavani, Jan 24, 2023, 6:15 AM IST

ಮೊದಲ ಚುನಾವಣೆ ನೆನಪು; ಆಗ ರೂಪಾಯಿಗಲ್ಲ, ಅಭ್ಯರ್ಥಿಗೇ ಆದ್ಯತೆ!

ಎಸ್‌.ಎ. ರವೀಂದ್ರನಾಥ್‌, ಶಾಸಕರು
ದಾವಣಗೆರೆ: ಆವಾಗಿನ್‌ ಎಲೆಕ್ಷನ್‌ಗಳಿಗೂ ಇವತ್ತಿನ ಎಲೆಕ್ಷನ್‌ಗೂ ಬಹಳ ಬದಲಾವಣೆ ಆಗಿವೆ. ಆವಾಗ ರೂಪಾಯಿಗಿಂತಲೂ ಪಾರ್ಟಿ, ಯಾರು ನಿಂತಿದ್ದಾರೆ ಅಂತ ನೋಡಿ ಜನ ಅವರಾಗಿಯೇ ಬಂದು ವೋಟ್‌ ಹಾಕುತ್ತಿದ್ದರು. ಈಗ ಅಂಗಿಲ್ಲ. ರೂಪಾಯಿಗೇ ಬಹಳ ವ್ಯಾಲ್ಯೂ ಇರೋದು ಕಂಡು ಬರುತ್ತಿದೆ.
ಇದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿರಿಯ ಶಾಸಕ ಎಸ್‌.ಎ. ರವೀಂದ್ರನಾಥ್‌ ಮೊದಲ ಚುನಾವಣೆ ಬಗ್ಗೆ ಹಂಚಿಕೊಂಡ ಅಭಿಪ್ರಾಯ.

ನಾನು ಜನಸಂಘದ ಅನಂತರ ಬಿಜೆಪಿಯಲ್ಲೇ ಇದ್ದೇನೆ. 1983ರಲ್ಲಿ ನಾನು ಮೊದಲ ಚುನಾವಣೆಗೆ ನಿಂತಾಗ ಬಹಳ ದುಡ್ಡೇನು ಖರ್ಚು ಆಗಿರಲಿಲ್ಲ. ನಾನು ಈಗಲೂ ರೊಕ್ಕ ಖರ್ಚು ಮಾಡಲ್ಲ. ಆದರೆ ಒಂದಂತೂ ನಿಜ, ಆಗಿನದ್ದಕ್ಕೂ ಇವಾಗಿನದ್ದಕ್ಕೂ ಬಹಳ ಚೇಂಜ್‌ ಆಗಿದೆ. ಜನರೂ ಬದಲಾಗಿದ್ದಾರೆ.

ನಾನು ಫಸ್ಟ್‌ ಎಲೆಕ್ಷನ್‌ಗೆ ನಿಂತಾಗ ಇವತ್ತಿ ನಂತೆ ಅಬ್ಬರ ಇರಲಿಲ್ಲ. ಆದರೆ ಎಲೆಕ್ಷನ್‌ ಜೋಶ್‌ ಬಹಳ ಇರೋದು. ದಿನಪೂರ್ತಿ ಪ್ರಚಾರ ಮಾಡೋದು. ಖಾರಾ, ಮಂಡಕ್ಕಿ, ಮೆಣಸಿನಕಾಯಿ, ಟೀ… ಅದರಲ್ಲೇ ಎಲ್ಲ ಮುಗಿದು ಹೋಗೋದು. ಯಾರು ಸಹ ದುಡ್ಡಿಗೆ ಡಿಮ್ಯಾಂಡ್‌ ಮಾಡುತ್ತಿರಲಿಲ್ಲ. ಪಾರ್ಟಿ ಫಂಡ್‌ ಅಂತಾನೇ ಬರುತ್ತಿರಲಿಲ್ಲ. ಹಣದ್ದು ಅಷ್ಟೊಂದು ಅಗತ್ಯನೂ ಇರುತ್ತಿರಲಿಲ್ಲ. ಆದರೆ ಈಗ ಎಲೆಕ್ಷನ್‌ ಮಾಡಬೇಕು ಅಂದರೆನೇ ಕೋಟಿಗಟ್ಟಲೆ ದುಡ್ಡು ಇರಬೇಕು ಅನ್ನುವಂತಾ ಗಿದೆ. ಎಲ್ಲದ್ದಕ್ಕೂ ರೂಪಾಯಿ ಇದ್ದರೆನೇ ನಡೆಯೋದು. ನಮ್‌ ಪಾರ್ಟೀಲಿ ಅಂತಹ ದುಡ್ಡಿನ ಮಾತಿಲ್ಲ. ನಮ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಖರ್ಚು ಮಾಡುತ್ತಾರೆ.

ನಮ್‌ ಮೊದಲ ಎಲೆಕ್ಷನ್‌ ಮತ್ತೆ ಮಾಡೋಕೆ ಆಗಲ್ಲ. ನಮ್‌ ನಾಯಕರು ಪ್ರಚಾರ ಮಾಡಿದರೆ ಸಾಕು ಅನ್ನುವ ಕಾಲ ಇತ್ತು. ಹೀಗಾಗಿ ಮಾಯ ಕೊಂಡದಲ್ಲಿ ಸತತ ಮೂರು ಬಾರಿ ಗೆಲ್ಲುವುದಕ್ಕೆ ಸಾಧ್ಯ ಆಯಿತು. ಈಗ ನಾವು ನಿಧಾನವಾಗಿ ಬದಲಾಗಿದೀವಿ. ಅಂದರೆ ರೊಕ್ಕ ಖರ್ಚು ಮಾಡುವುದರಲ್ಲಿ ಅಲ್ಲ. ನನ್‌ ಹತ್ತಿರ ಬೇರೆ ಪಾರ್ಟಿಯ ವರಂತೆ ಕೋಟಿಗಟ್ಟಲೆ ದುಡ್ಡು ಇಲ್ಲ. ಜನರ ಪ್ರೀತಿ, ಅಭಿಮಾನ, ವಿಶ್ವಾಸದಿಂದ ಗೆಲ್ಲುತ್ತಿದ್ದೇನೆ.

ನನ್‌ ಪ್ರಕಾರ ಎಲೆಕ್ಷನ್‌ನಲ್ಲಿ ಹಣದ ಪ್ರಭಾವ ಕಡಿಮೆ ಆಗಬೇಕು. ಪಾರ್ಟಿ ತತ್ವ, ಸಿದ್ಧಾಂತ, ಜನರಿಗೆ ಮಾಡೋ ಕೆಲಸ ಮುಖ್ಯ ಆಗಬೇಕು. ಜನ ಮಾತ್ರ ಅಲ್ಲ, ನಮ್ಮಂತಹ ರಾಜಕಾರಣಿಗಳು ಸಹ ಬದಲಾಗಬೇಕು. ದುಡ್ಡು ಖರ್ಚು ಮಾಡಿದರೆ ಗೆದ್ದೇ ಗೆಲ್ಲುತ್ತೇವೆ ಎಂಬ ಮನೋಭಾವ ಬದಲಾಯಿಸಿಕೊಳ್ಳಬೇಕು. ಜನ ನಮ್ಮಿಂದ ಏನು ಬಯಸುತ್ತಾರೋ ಆ ರೀತಿಯಲ್ಲಿ ಕೆಲಸ ಮಾಡಿ ಗೆದ್ದು ಬರುವಂತೆ ಇರಬೇಕು. ಆದರೆ ಇವತ್ತಿನ ಪರಿಸ್ಥಿತಿ ನೋಡಿದರೆ ಅದು ಬಹಳ ಕಷ್ಟ ಅನ್ನಿಸುವಂತಿದೆ. ಮುಂದೆ ಎಲ್ಲವೂ ಬದಲಾಗಬಹುದು ಎಂಬ ಆಶಾಭಾವನೆ 76 ವರ್ಷದ ಮಾಜಿ ಸಚಿವ ರವೀಂದ್ರನಾಥ್‌ ಅವರದ್ದಾಗಿದೆ.

-ರಾ.ರವಿಬಾಬು

 

ಟಾಪ್ ನ್ಯೂಸ್

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sfsdf

ಸಿದ್ದರಾಮಯ್ಯ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿ: ಮಾಜಿ ಸಚಿವ ದಿವಾಕರ ಬಾಬು

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ: ಅಮಿತ್ ಶಾ

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ ಮೋದಿ ಕೈ ಬಲಪಡಿಸಿ: ಅಮಿತ್ ಶಾ

ವರುಣಾ ಸೇರಿ ಪ್ರಮುಖ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ: ಶಾ ಭೇಟಿ ಬಗ್ಗೆ ವಿಜಯೇಂದ್ರ

ವರುಣಾ ಸೇರಿ ಪ್ರಮುಖ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ: ಶಾ ಭೇಟಿ ಬಗ್ಗೆ ವಿಜಯೇಂದ್ರ

Sunil vallapure

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸುನೀಲ್ ವಲ್ಲಾಪುರೆ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್‌ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ

ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್‌ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ

mangalore acc

ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್‌ ಡಿಕ್ಕಿ : ಬಾಲಕ ಮೃತ್ಯು

1-ewr-ew-rwer

ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ನೇಕಾರ ಸಮ್ಮಾನ್‌ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ

ನೇಕಾರ ಸಮ್ಮಾನ್‌ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ

ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ

ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.