ಎಸ್ಎಸ್ಎಲ್ಸಿ ಪರೀಕ್ಷೆ; 120 ಕೇಂದ್ರ, 22,561 ವಿದ್ಯಾರ್ಥಿಗಳು!
Team Udayavani, Jun 19, 2021, 11:38 AM IST
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು, ಶೈಕ್ಷಣಿಕ ಹಬ್ ಖ್ಯಾತಿಯ ದಾವಣಗೆರೆ ಜಿಲ್ಲೆಯ 120 ಕೇಂದ್ರಗಳಲ್ಲಿ 22,561 ವಿದ್ಯಾರ್ಥಿಗಳು ಮುಂದಿನ ಜುಲೈ ತಿಂಗಳ ಮೂರನೇ ವಾರದಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಮಹಾಮಾರಿ ಕೊರೊನಾ ಹಾವಳಿ, ಲಾಕ್ಡೌನ್ ಜಾರಿಯ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಳಂಬವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾದ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದಾಗಬಹುದು ಎಂಬ ಲೆಕ್ಕಾಚಾರವೂ ಇತ್ತು. ಆದರೆ, ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗಿರುವ ವಿದ್ಯಾರ್ಥಿಗಳು 9ನೇ ತರಗತಿ ಪರೀಕ್ಷೆಬರೆದಿಲ್ಲ. ಆಂತರಿಕ, ಪೂರ್ವ ಸಿದ್ಧತಾ ಪರೀಕ್ಷೆ ನಡೆಯದೇ ಇರುವುದು ಇನ್ನಿತರ ಕಾರಣದಿಂದ ಕೊನೆಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆದಿದೆ.
22,561 ವಿದ್ಯಾರ್ಥಿಗಳು: ಜಿಲ್ಲೆಯ 444 ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಒಟ್ಟು 22,561 ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಸಿದ್ದಾರೆ. ದಾವಣಗೆರೆ ದಕ್ಷಿಣ ವಲಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ 6343 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಚನ್ನಗಿರಿಯಲ್ಲಿ 3711, ದಾವಣಗೆರೆ ಉತ್ತರದಲ್ಲಿ 3484, ಹರಿಹರದಲ್ಲಿ 3016, ಹೊನ್ನಾಳಿಯಲ್ಲಿ 2963, ಜಗಳೂರಿನಲ್ಲಿ 3044 ವಿದ್ಯಾರ್ಥಿಗಳು ಇದ್ದಾರೆ.
1983 ಕೊಠಡಿ: ಸುರಕ್ಷಿತ ಮತ್ತು ಸುಲಲಿತವಾಗಿ ಪರೀಕ್ಷೆಗಳನ್ನು ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ 1983 ಕೇಂದ್ರಗಳಲ್ಲಿ ಸಿದ್ಧತೆ ನಡೆಯುತ್ತಿದೆ. ಚನ್ನಗಿರಿಯಲ್ಲಿ 325, ದಾವಣಗೆರೆ ಉತ್ತರದಲ್ಲಿ 311, ದಾವಣಗೆರೆದಕ್ಷಿಣದಲ್ಲಿ 551, ಹರಿಹರದಲ್ಲಿ 266 ಹೊನ್ನಾಳಿಯಲ್ಲಿ 261, ಜಗಳೂರಿನಲ್ಲಿ 269 ಕೊಠಡಿಗಳ ಗುರುತಿಸಲಾಗಿದೆ.
ಹೆಚ್ಚುವರಿ 40 ಕೇಂದ್ರ: ಮಹಾಮಾರಿ ಕೊರೊನಾದ ಅಲೆಯ ನಡುವೆಯೂಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿದ್ಯಾರ್ಥಿಯ ಸುರಕ್ಷತೆ ಮತ್ತು ಕೋವಿಡ್ ಮಾರ್ಗಸೂಚಿ ಅನುಸರಿಸಬೇಕಾದ ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿ 6 ಅಡಿ ಅಂತರಕಾಪಾಡಿಕೊಳ್ಳಬೇಕಾಗಿದೆ. ಹಾಗಾಗಿ 40ಕ್ಕೂ ಹೆಚ್ಚುವರಿ ಕೇಂದ್ರಗಳನ್ನು ಗುರುತಿಸಲಾಗಿದೆ.
ಪ್ರಾರಂಭಿಕ ಹಂತದಲ್ಲಿ ಜಿಲ್ಲೆಯ 80 ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಬೇಕಿತ್ತು. ಕೊರೊನಾಕಾರಣಕ್ಕೆ 40 ಹೆಚ್ಚುವರಿ ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ 16 ಕೇಂದ್ರಗಳಿಗೆಹೆಚ್ಚುವರಿಯಾಗಿ 7, ದಾವಣಗೆರೆ ಉತ್ತರದಲ್ಲಿ 14 ಕೇಂದ್ರಗಳ ಜತೆಗೆ 4,ದಾವಣಗೆರೆ ದಕ್ಷಿಣದಲ್ಲಿ 21 ಕೇಂದ್ರಗಳಜತೆಗೆ ಹೆಚ್ಚುವರಿಯಾಗಿ 21,ಹರಿಹರದಲ್ಲಿ 10 ಕೇಂದ್ರಗಳ ಜತೆಗೆ 7, ಹೊನ್ನಾಳಿಯಲ್ಲಿ 10 ಕೇಂದ್ರಗಳ ಜತೆಗೆ 6 ಮತ್ತು ಜಗಳೂರಿನಲ್ಲಿ 9 ಕೇಂದ್ರಗಳ ಜತೆಗೆ ಹೆಚ್ಚುವರಿಯಾಗಿ 5 ಕೇಂದ್ರಗಳನ್ನು ಗುರುತಿಸಲಾಗಿದೆ.
ಕೊರೊನಾ, ಲಾಕ್ಡೌನ್ ನಿಂದ ಸರಿಯಾಗಿ ಶಾಲೆಗಳು ನಡೆದಿಲ್ಲ. ಪಾಠ-ಪ್ರವಚನ ಸಹಪೂರ್ಣವಾಗಿಯೇ ಇಲ್ಲ. ಈ ಎಲ್ಲ ಕಾರಣದಿಂದ ಕಳೆದ ಸಾಲುಗಳಂತೆ ವಿವರಣಾತ್ಮಕ ಪ್ರಶ್ನೆ ಪತ್ರಿಕೆಗಳ ಬದಲಿಗೆಸರಳೀಕೃತ, ಬಹು ಆಯ್ಕೆ ಮಾದರಿ ಪರೀಕ್ಷೆಗೆ ಇಲಾಖೆ ಸಜ್ಜಾಗಿದೆ. ವಿದ್ಯಾರ್ಥಿ ಸಮುದಾಯಕ್ಕೆ ಹೊಸ ಪದ್ಧತಿಯಲ್ಲಿ ನಡೆಯುವ ಪರೀಕ್ಷೆ ಸಮಸ್ಯೆ ತಂದೊಡ್ಡುವಂತಿದ್ದರೂ ಪರೀಕ್ಷೆ ಎದುರಿಸಬೇಕಾಗಿದೆ.
-ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್