ತಪ್ಪಿಗೆ ದಂಡ ಕಟ್ಟಲೇ ಬೇಕು
Team Udayavani, May 27, 2017, 1:35 PM IST
ದಾವಣಗೆರೆ: ಮನಸೋ ಇಚ್ಚೆ ಸ್ಪೀಡ್… ಹೆಲ್ಮೆಟ್ ಧರಿಸದಿರುವುದು… ಟ್ರಾಫಿಕ್ ಸಿಗ್ನಲ್ ಬಿದ್ದಿದ್ದರೂ ಕಾರು, ಬೈಕ್ ಚಲಾಯಿಸಿಕೊಂಡು ಹೋಗುವುದು…ಒಳಗೊಂಡಂತೆ 43 ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಾಗ ಇನ್ನೇಲೆ ಪೊಲೀಸರು ತಡೆಯುವುದಿಲ್ಲ. ಸ್ಥಳದಲ್ಲೇ ದಂಡ ವಸೂಲಿಗೆ ರಶೀದಿ ಹರಿಯವುದೂ ಇಲ್ಲ.!
ಹಾಂಗಾದ್ರೆ ನಮ್ಮೂರಲ್ಲಿ ಸಂಚಾರಿ ನಿಯಮಗಳನ್ನೆಲ್ಲಾ ರದ್ದು ಪಡಿಸಿದ್ರಾ ಎಂದೇನೂ ಭಾವಿಸದಿರಿ. ಇನ್ಮೆàಲೆ ವಾಹನ ಸವಾರರು-ಚಾಲಕರು ಮಾಡುವ ಸಂಚಾರಿ ನಿಯಮ ಉಲ್ಲಂಘನೆಗೆ ಮನೆ ಬಾಗಿಲಿಗೆ ನೋಟಿಸ್ ಬಂದೇ ಬರುತ್ತದೆ. ಮಾಡಿದ ತಪ್ಪಿಗೆ ದಂಡ ಕಟ್ಟಲೇಬೇಕಾಗುತ್ತದೆ!.
ನೋಟಿಸ್ ಕೈ ಸೇರುತ್ತಿದ್ದಂತೆ ಬಂಧಿತ ಸ್ಥಳಕ್ಕೆ ಹೋಗಿ ಸಮಾಜಾಯಿಸಿ ನೀಡಬೇಕಾಗುತ್ತದೆ. ಒಂದೊಮ್ಮೆ ಸುಳ್ಳು ಹೇಳಿದರೆ, ನಿಯಮ ಉಲ್ಲಂಘಿಸಿದ್ದನ್ನು ಸಾಕ್ಷ ಸಮೇತ ನಿಮಗೆ ತೋರಿಸಲಾಗುತ್ತದೆ. ನ್ಯಾಯಾಲಯಕ್ಕೆ ತೆರಳಿ ದಂಡ ಕಟ್ಟಬೇಕಾಗುತ್ತದೆ. ಅದೂ ಒಂದು ವಾರದ ಒಳಗೆ.
ಸಿಗ್ನಲ್ ಜಂಪ್ ಮಾಡಿದ್ದು, ಹೆಲ್ಮೆಟ್ ಇಲ್ಲದೆ, ಮನಸೋ ಇಚ್ಛೆ ಸ್ಪೀಡ್ನಲ್ಲಿ ಬೈಕ್ ಓಡಿಸಿದ್ದು… ಎಲ್ಲವೂ ಪೊಲೀಸರಿಗೆ ಹೆಂಗೆ ಗೊತ್ತಾಯಿತು ಎಂದು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಆದರೆ, ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ಸಂಬಂಧಿಸಿದಂತೆ ನೋಟಿಸ್ ಬರುವುದು. ಸಾಕ್ಷ ಸಮೇತ ದಾಖಲಾಗುವುದು. ಇದೆಲ್ಲಾ ಸಾಧ್ಯವಾಗುವುದು ಟ್ರಾಫಿಕ್ ಎನ್ಫೋಸ್ಮೆಂಟ್ ಆಟೋಮೇಷನ್ ಸೆಂಟರ್ನಿಂದ.
ದಾವಣಗೆರೆಯಲ್ಲಿ ಶುಕ್ರವಾರದಿಂದ ಕಾರ್ಯಾರಂಭ ಮಾಡಿರುವ ಟ್ರಾಫಿಕ್ ಎನ್ಫೋರ್ಸ್ಮೆಂಟ್ ಆಟೋಮೇಷನ್ ಸೆಂಟರ್ ಸಂಚಾರ ನಿಯಮ ಉಲ್ಲಂಘನೆಯ ಪ್ರತಿಯೊಂದನ್ನು ದಾಖಲಿಸಿ, ಸಂಬಂಧಿತರಿಗೆ ನೋಟಿಸ್ ರವಾನೆ ಮಾಡುತ್ತದೆ. ಹಾಗಾಗಿ ಇನ್ನು ಮುಂದೆ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಿದರೆ ಒಳ್ಳೆಯದು.
ಏನಿದು ಸೆಂಟರ್…. ಟ್ರಾಫಿಕ್ ಎನ್ಫೋರ್ಸ್ಮೆಂಟ್ ಆಟೋಮೇಷನ್ ಸೆಂಟರ್ ಸುಗಮ ಸಂಚಾರಕ್ಕೆ ಕಂಡುಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ. ಎಲ್ಲಿಯೇ ಆಗಲಿ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಸಂಚಾರಿ ಪೊಲೀಸರು ಡಿಜಿಟಲ್ ಕ್ಯಾಮೆರಾ ಮೂಲಕ ಸೆರೆ ಹಿಡಿದು, ಸಂಬಂಧಿತ ಠಾಣೆಗಳ ಮೂಲಕ ಟ್ರಾಫಿಕ್ ಎನ್ ಫೋರ್ಸ್ಮೆಂಟ್ ಆಟೋಮೇಷನ್ ಸೆಂಟರ್ಗೆ ಮಾಹಿತಿ ರವಾನಿಸುತ್ತಾರೆ.
ಪೊಲೀಸ್ ಇಲಾಖೆಯಲ್ಲಿರುವ ಡೇಟಾ ಬೇಸ್ ಆಧಾರದಲ್ಲಿ ಸಂಬಂಧಿತ ವಾಹನ ಮಾಲಿಕರು, ಆರ್ಸಿ ಹೊಂದಿದವರಿಗೆ ನೋಟಿಸ್ ಕಳಿಸಿಕೊಡಲಾಗುತ್ತದೆ. ಅವರು ಟ್ರಾಫಿಕ್ ಎನ್ಫೋಸ್ಮೆಂಟ್ ಆಟೋಮೇಷನ್ ಸೆಂಟರ್ಗೆ ಬಂದು ನೋಟಿಸ್ ಗೆ ಉತ್ತರ ನೀಡಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘಿ ಸಿದ್ದಲ್ಲಿ ನ್ಯಾಯಾಲಯದಲ್ಲಿ ದಂಡ ಕಟ್ಟಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್