ತಾಲೂಕು ಕಚೇರಿಗೆ ಜಾಗ ಗುರುತಿಸಿದ್ರೆ ಮಂಜೂರಾತಿ ಯತ್ನ


Team Udayavani, Jul 12, 2017, 12:41 PM IST

hub3.jpg

ಹುಬ್ಬಳ್ಳಿ: ರಾಜ್ಯ ಸರ್ಕಾರವು ಹುಬ್ಬಳ್ಳಿ ತಾಲೂಕನ್ನು ಹುಬ್ಬಳ್ಳಿ ಶಹರ ತಾಲೂಕು ಹಾಗೂ ಗ್ರಾಮೀಣ ತಾಲೂಕೆಂದು ವಿಂಗಡಿಸಿದೆ. ಹೊಸ ತಾಲೂಕು ಕಚೇರಿಗಾಗಿ ಸೂಕ್ತ ಜಾಗ ಗುರುತಿಸಿದರೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜಾಗ ಕೊಡಿಸಲು ಯತ್ನಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. 

ಇಲ್ಲಿನ ಆದರ್ಶ ನಗರದ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ಕಂದಾಯ ಇಲಾಖೆ ಹುಬ್ಬಳ್ಳಿ ನಗರ ಹೊಸ ತಾಲೂಕು ರಚನೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶಿರಗುಪ್ಪಿ ಮತ್ತು ಛಬ್ಬಿ ಹೋಬಳಿಯವರಿಗೆ ಅನುಕೂಲವಾಗುವ ಜಾಗದಲ್ಲಿ ಕಚೇರಿ ಆರಂಭಿಸಬೇಕು.

ಸರ್ಕಾರಿ ಜಾಗಗಳನ್ನು ಗುರುತಿಸಿ ಸೂಕ್ತ ಜಾಗದಲ್ಲಿ ಕಚೇರಿ ನಿರ್ಮಾಣವಾಗುವಂತಾಗಬೇಕು ಎಂದರು.  ಪ್ರಸ್ತುತ ನಗರದಲ್ಲಿರುವ ಮಿನಿ ವಿಧಾನಸೌಧದಲ್ಲಿ ಇನ್ನೊಂದು ತಹಶೀಲ್ದಾರ ಕಚೇರಿ ಮಾಡಲು ಸಾಧ್ಯವಿಲ್ಲ. ಅದು ತೀರಾ ಇಕ್ಕಟ್ಟಾಗಿದೆ. ಗದಗ, ಕೊಪ್ಪಳ ನಗರಗಳ ಮಿನಿ ವಿಧಾನಸೌಧಕ್ಕೆ ಹೋಲಿಸಿದರೆ ಇದು ತೀರಾ ಚಿಕ್ಕದಾಗಿದೆ.

ನಗರದ ಕೋರ್ಟ್‌ ನೂತನ ಕಟ್ಟಡಕ್ಕೆ ಸ್ಥಳಾಂತರವಾಗುತ್ತಿರುವುದರಿಂದ ಆ ಜಾಗ ದೊರೆತರೆ ಬೃಹತ್‌ ಕಟ್ಟಡ ನಿರ್ಮಿಸಿ ಎರಡೂ ತಹಶೀಲ್ದಾರ ಕಚೇರಿಗಳನ್ನು ಅಲ್ಲಿ ಮಾಡಬಹುದು ಎಂದು ಹೇಳಿದರು. ಹುಬ್ಬಳ್ಳಿ ತಾಲೂಕನ್ನು ಉತ್ತರ ಹಾಗೂ ದಕ್ಷಿಣ ಎಂದು ವಿಭಜಿಸುವ ಕುರಿತು ಕೂಡ ಚಿಂತನೆ ನಡೆದಿದೆ.

ಆದರೆ ಇನ್ನು ಯಾವುದನ್ನೂ ನಿರ್ಧರಿಸಿಲ್ಲ. ಗ್ರಾಮೀಣ ಭಾಗವನ್ನು ಹಾಗೂ ನಗರ ಭಾಗವನ್ನು ಪ್ರತ್ಯೇಕಿಸುವುದು ಉತ್ತಮ ಸಲಹೆಯಾಗಿದೆ ಎಂದರು. ಮಾಜಿ ಮಹಾಪೌರ ಡಾ| ಪಾಂಡುರಂಗ ಪಾಟೀಲ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಪ್ರತ್ಯೇಕಿಸುವುದರಿಂದ ಜನರ ಬೇಡಿಕೆಗೆ ಸ್ಪಂದಿಸಲು ಅನುಕೂಲವಾಗುತ್ತದೆ. 

ಕೆಲವು ವಾರ್ಡ್‌ಗಳಲ್ಲಿ ಗ್ರಾಮಗಳಿವೆ. ಅವುಗಳನ್ನು ಪ್ರತ್ಯೇಕಿಸಬೇಕು. ಹುಬ್ಬಳ್ಳಿ ಶಹರ ಪ್ರತ್ಯೇಕ ತಾಲೂಕು ಮಾಡಿದ್ದು ಸ್ವಾಗತಾರ್ಹ. ಅನೇಕ ವರ್ಷಗಳ ಬೇಡಿಕೆ ಈಗ ಈಡೇರಿದೆ. ಸಿಬ್ಬಂದಿ ಸಂಖ್ಯೆ ಹೆಚ್ಚುವುದರಿಂದ ಜನರಿಗೆ ಅನುಕೂಲವಾಗುವುದು ಎಂದರು. 

ಹುಬ್ಬಳ್ಳಿ ಶಹರ ತಾಲೂಕಿಗೆ 25 ಗ್ರಾಮಗಳು: ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಮಾತನಾಡಿ, ಇದು ಪ್ರಸ್ತಾವನೆಯಾಗಿದೆ. ಸರಕಾರಿ ಅಧಿಸೂಚನೆ ನಂತರ ಇದಕ್ಕೆ ರಾಜ್ಯ ಸರ್ಕಾರದ ಅಂಕಿತ ಸಿಗಬೇಕಿದೆ. ಪ್ರಸ್ತಾವನೆಯಲ್ಲಿ ಹುಬ್ಬಳ್ಳಿ ಶಹರ ತಾಲೂಕಿನ ವ್ಯಾಪ್ತಿಗೆ 25 ಗ್ರಾಮಗಳನ್ನು ಸೇರಿಸಲಾಗಿದೆ. 

ಹಳೆಯ ತಾಲೂಕಿನಲ್ಲಿ 48 ಗ್ರಾಮಗಳು ಇರಲಿವೆ. ಪ್ರಸ್ತಾವನೆ ಸಂದರ್ಭದಲ್ಲಿಯೇ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಹ ಸೇರಿಸಿ ಕಳಿಸಲಾಗುವುದು ಎಂದು ಹೇಳಿದರು. ಹುಬ್ಬಳ್ಳಿ ತಾಲೂಕಿನಲ್ಲಿ ಹುಬ್ಬಳ್ಳಿ ಅಲ್ಲದೆ ಛಬ್ಬಿ, ಶಿರಗುಪ್ಪಿ ಹೋಬಳಿಗಳಿವೆ. ಯಾವುದೇ ಹೋಬಳಿಯ ವ್ಯಾಪ್ತಿಯನ್ನು ಬದಲಾವಣೆ ಮಾಡದೇ ತಾಲೂಕು ರಚನೆ ಮಾಡಲು ಸೂಚಿಸಲಾಗಿದೆ.

ಎರಡೂ ತಾಲೂಕುಗಳ ಕೇಂದ್ರಗಳು ಹುಬ್ಬಳ್ಳಿಯಲ್ಲಿಯೇ ಇರುವುದರಿಂದ ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಸಭೆಯಲ್ಲಿ ಪಾಲಿಕೆ ಸದಸ್ಯರಾದ ಪ್ರಫ‌ುಲ್‌ಚಂದ್ರ ರಾಯನಗೌಡರ, ದಶರಥ ವಾಲಿ, ಮಲ್ಲಿಕಾರ್ಜುನ ಹೊರಕೇರಿ ಇದ್ದರು. ತಹಶೀಲ್ದಾರ ಶಶಿಧರ ಮಾಡ್ಯಾಳ ವಂದಿಸಿದರು. 

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.