ಗಮನ ಸೆಳೆದ ಜೋಡೆತ್ತಿನ ಗಾಡಿ ಸ್ಪರ್ಧೆ
Team Udayavani, Apr 30, 2018, 5:09 PM IST
ಚಿಕ್ಕೋಡಿ: ಉಮರಾಣಿ ಗ್ರಾಮದ ಭಾವೇಶ್ವರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಜೋಡೆತ್ತಿನ ಗಾಡಿ ಸ್ಪರ್ಧೆ ಹಾಗೂ ಜೋಡು ಕುದುರೆ ಗಾಡಿ ಸ್ಪರ್ಧೆ ನೋಡುಗರ ಗಮನ ಸೆಳೆದವು.
ಸ್ಪರ್ಧೆಗಳಿಗೆ ಅಪ್ಪಾಸಾಬಗೌಡಾ ಪಾಟೀಲ ಮತ್ತು ಜಾತ್ರಾ ಕಮಿಟಿ ಮುಖಂಡರು ಚಾಲನೆ ನೀಡಿದರು. ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಉಮರಾಣಿ ಗ್ರಾಮದ ಕರೆಪ್ಪಾ ದಶರಥ ಕರೆನ್ನವರ ಅವರ ಗಾಡಿ ಪ್ರಥಮ, ಕರ್ನಾಳವರ ಗಾಡಿ ದ್ವಿತೀಯ, ಉಮರಾಣಿ ಗ್ರಾಮದ ರಾಜು ಕರೆನ್ನವರ ಗಾಡಿ ತೃತೀಯ ಹಾಗೂ ಆಲಕನೂರಿನ ಪರಸು ಸಿದ್ರಾಮ ಕರಿಗಾರವರ ಗಾಡಿ ನಾಲ್ಕನೇ ಬಹುಮಾನ ಪಡೆದುಕೊಂಡವು.
ಜೋಡು ಕುದುರೆ ಗಾಡಿ ಸ್ಪರ್ಧೆಯಲ್ಲಿ ಉಮರಾಣಿ ಗ್ರಾಮದ ರಾಜು ಕರೆನ್ನವರ ಗಾಡಿ ಪ್ರಥಮ, ಕರೆಪ್ಪಾ ಕರೆನ್ನವರ ಗಾಡಿ ದ್ವಿತೀಯ ಹಾಗೂ ಅಬ್ದುಲಾಟದ ಗಾಡಿ ತೃತೀಯ ಬಹುಮಾನ ಪಡೆದುಕೊಂಡವು. ಜಾತ್ರಾ ಮಹೋತ್ಸವದ ಅಂಗವಾಡಿ ವಿವಿಧ ಸಂಘಟನೆಗಳಿಂದ ವಾಲಿಬಾಲ್ ಪಂದ್ಯಾವಳಿ, ಕಬಡ್ಡಿ ಪಂದ್ಯಾವಳಿ ಮತ್ತು ಕ್ರಿಕೆಟ್ ಪಂದ್ಯಾಳಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಸ್ಪರ್ಧಾ ವಿಜೇತರಿಗೆ ಜಾತ್ರಾ ಕಮಿಟಿ ಸದಸ್ಯರಾದ ಪರಗೌಡ ಪಾಟೀಲ, ಕೇದಾರಿಗೌಡ ಪಾಟೀಲ, ಮಹಾದೇವಗೌಡ ಪಾಟೀಲ, ಲಕ್ಷ್ಮಣ ಅಂಬಲೆ, ಸಿದಗೌಡ ಪಾಟೀಲ, ಈಶ್ವರಗೌಡ ಪಾಟೀಲ ಮತ್ತು ಗ್ರಾಪಂ ಸದಸ್ಯರಾದ ಎಂ.ಎನ್.ಅಡಿಸೇರಿ, ಡಿ.ಎಂ. ಭೀಮನಾಯಿಕ, ಎಸ್.ವೈ. ಪಾಟೀಲ, ಲಕ್ಷ್ಮಣ ಪೂಜೇರಿ,ಬಸಗೌಡ ಪಾಟೀಲ, ಮಹೇಶ ಪಾಟೀಲ, ಜಯಾನಂದ ವಂಟೆಮುತ್ತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ