ಧಾರಾನಗರಿ ತಲುಪಿದ ಪುಸ್ತಕ ಪ್ರಚಾರ ಯಾತ್ರೆ
Team Udayavani, Sep 21, 2018, 4:38 PM IST
ಧಾರವಾಡ: ನಗರದಲ್ಲಿ ಸೆ. 22ರಿಂದ ಆರಂಭಗೊಳ್ಳಲಿರುವ ಕೃಷಿ ಮೇಳದಲ್ಲಿ ರೈತರಿಗೆ ಅನುಕೂಲವಾಗುವಂತೆ ಸಿದ್ಧಪಡಿಸಿರುವ ನುಡಿಮುತ್ತುಗಳ ಪುಸ್ತಕವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ವಿಜಯಪುರದಿಂದ ಧಾರವಾಡದವರೆಗೆ ಸ್ಕೂಟರ್ ಮೇಲೆ ಪುಸ್ತಕ ಪ್ರಚಾರ ಯಾತ್ರೆ ಆರಂಭಿಸಿದ್ದ ವಿಜಯಪುರ ಜಿಲ್ಲೆ ಹೂವಿನ ಹಿಪ್ಪರಗಿ ಗ್ರಾಮದ ಭೀಮರಾಯ ಹೂಗಾರ ಗುರುವಾರ ಧಾರವಾಡ ತಲುಪಿದ್ದಾರೆ.
ಬಿಕಾಂ ಪದವೀಧರರಾದ ಹೂಗಾರ ಅವರು ಬುಧವಾರ ಬೆಳಗ್ಗೆ 7 ಗಂಟೆಗೆ ವಿಜಯಪುರದಿಂದ ಹೊರಟು ರಾತ್ರಿ 7 ಗಂಟೆಗೆ ಧಾರವಾಡ ತಲುಪಿದ್ದಾರೆ. ಗುರುವಾರ ಇಡೀ ದಿನ ನಗರದಲ್ಲಿ ಪ್ರಚಾರ ನಡೆಸಿದರು.’ರೈತರ ಅಭಿವೃದ್ಧಿಗಾಗಿ ಸಾವಿರ ನುಡಿಮುತ್ತುಗಳು’ ಎಂಬ ಪುಸ್ತಕ ಸಿದ್ಧಪಡಿಸಿದ್ದು, ಸೆ.22ರಿಂದ ನಗರದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಈ ಪುಸ್ತಕ ಮಾರಾಟ ಮಾಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ. ಕೇವಲ ಪುಸ್ತಕ ಪ್ರಚಾರ ಮಾತ್ರವಲ್ಲದೆ ಕೃಷಿ ವಿವಿಯ ವಿವಿಧ ವಿಭಾಗದ ಡೀನ್ಗಳನ್ನು ಭೇಟಿ ಸಹ ಮಾಡಿ ಚರ್ಚಿಸಲಿದ್ದಾರೆ.
ರಾಜ್ಯದ ವಿವಿಧೆಡೆ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಿಗೆ ಸಹ ಸ್ಕೂಟರ್ ಮೇಲೆ ತೆರಳಿ ಜನಜಾಗೃತಿ ಕೆಲಸ ಮಾಡಿರುವ ಭೀಮರಾಯ ಅವರು ಬರೆದ ಸ್ವಚ್ಛ ಭಾರತ ಪುಸ್ತಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನಾ ಪತ್ರ ಬರೆದಿದ್ದಾರೆ.
ರೈತರು ಎದುರಿಸುತ್ತಿರುವ ಸಮಸ್ಯೆಗಳ ಆಧಾರದ ಮೇಲೆ ಸಾವಿರ ನುಡಿಮುತ್ತುಗಳನ್ನು ಬರೆದಿದ್ದು, ಇದರಿಂದ ರೈತರಲ್ಲಿ ಜಾಗೃತಿ ಮೂಡಲಿದೆ ಎಂಬುದು ಆಶಯ. 2019ರ ಜನವರಿ ತಿಂಗಳಲ್ಲಿ ಪುಸ್ತಕ ಪ್ರಚಾರಾರ್ಥ ವಿಜಯಪುರದಿಂದ ದೆಹಲಿವರೆಗೆ ಸ್ಕೂಟರ್ನಲ್ಲಿ ಯಾತ್ರೆ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇನೆ.
. ಭೀಮರಾಯ
ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
MUST WATCH
ಹೊಸ ಸೇರ್ಪಡೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು