ರಾಜಿ ಸಂಧಾನ: ಹುಲ್ಲಂಬಿ ವ್ಯಾಜ್ಯ ಇತ್ಯರ್ಥ
Team Udayavani, Mar 12, 2019, 7:45 AM IST
ಕಲಘಟಗಿ: ಹುಲ್ಲಂಬಿಯ ಒಂದೇ ಕುಟುಂಬದ 68 ಸದಸ್ಯ ವಾದಿ-ಪ್ರತಿವಾದಿಗಳಿಗೆ ಸಂಬಂಧಿಸಿದ ಆಸ್ತಿ ವ್ಯಾಜ್ಯ ಪಟ್ಟಣದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಸುಖಾಂತ್ಯಗೊಂಡಿದೆ.
ಹಿರಿಯ ದಿವಾಣಿ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ಅವರು ಕಕ್ಷಿಗಾರರ ಮನವೊಲಿಸುವುದರೊಂದಿಗೆ ರಾಜಿ ಸಂಧಾನದ ಮೂಲಕ ಪ್ರಕರಣ ಬಗೆಹರಿಸಲಾಯಿತು.
ತಾಲೂಕಿನ ಹುಲ್ಲಂಬಿ ಗ್ರಾಮದ 68 ಜನ ರಕ್ತ ಸಂಬಂಧಿಗಳು ತಮ್ಮ ಹಿರಿಯರ ಆಸ್ತಿಯ ವಾಟಿಗೆ ಸಂಬಂಧಿಸಿ ವ್ಯಾಜ್ಯ ಹೂಡಿದ್ದರು. ಅಜ್ಜ-ಮುತ್ತಜ್ಜರ ಕಾಲದಿಂದ ಪ್ರಕರಣ ನಡೆಯುತ್ತಿತ್ತು. ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಸಲಹೆ-ಸೂಚನೆಗೆ ಕುಟುಂಬ
ಸದಸ್ಯರು ತಮ್ಮ ಸಹಮತಿ ನೀಡಿ ರಾಜಿ ಸಂಧಾನಕ್ಕೆ ಮುಂದಾದರು.
ಅದಾಲತ್ನ ರಾಜಿ ಸಂಧಾನದಲ್ಲಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ದಾಖಲಿತಗೊಂಡು ಪ್ರತಿದಿನವೂ ವಿಚಾರಣೆಗೊಳಪಡುತ್ತಿರುವ 19 ಪ್ರಕರಣಗಳು ಮತ್ತು ವಿವಾದ ಪೂರ್ವ 14 ಪ್ರಕರಣಗಳನ್ನೂ ಇತ್ಯರ್ಥ ಪಡಿಸಲಾಯಿತು. ಅಲ್ಲದೇ ಮೋಟಾರ್ ವಾಹನ ಕಾಯ್ದೆಯಡಿ ದಾಖಲಾದ ನಾಲ್ಕು ಪ್ರಕರಣಗಳಿಂದ 4.90 ಲಕ್ಷ ರೂ. ಪರಿಹಾರವನ್ನು ನೊಂದ ಕಕ್ಷಿಗಾರರಿಗೆ
ನೀಡುವಂತೆ ರಾಜಿ ಸಂಧಾನದಲ್ಲಿ ಬಗೆಹರಿಸಲಾಯಿತು.
ಇನ್ನುಳಿದಂತೆ ವಿವಿಧ ವಿವಾದ ಪೂರ್ವ ಪ್ರಕರಣಗಳಲ್ಲಿ ಅರ್ಜಿದಾರರು ಮತ್ತು ಎದುರುದಾರರು ನ್ಯಾಯಾಧೀಶರ ಮತ್ತು ನ್ಯಾಯವಾದಿಗಳ ಸಲಹೆ ಮೇರೆಗೆ ರಾಜಿ ಮಾಡಿಕೊಂಡು ಒಟ್ಟೂ 13 ಲಕ್ಷ ರೂ. ನೀಡುವಂತೆ ಬಗೆಹರಿಸಲಾಯಿತು.
ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಿ.ಗಿರಿಗೌಡ ಅವರು ಒಟ್ಟೂ 88 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು. ಅವುಗಳಲ್ಲಿ 13 ಮೂಲ ದಾವೆ ಪ್ರಕರಣ, 1 ದರಖಾಸ್ತ ಪ್ರಕರಣ, 5 ಐಪಿಸಿ ಪ್ರಕರಣ, 15 ಎನ್ಐ ಆ್ಯಕ್ಟ್
ಪ್ರಕರಣಗಳು, 16 ಕ್ರಿಮಿನಲ್ ಮಿಸಲೇನಿಯಸ್ ಪ್ರಕರಣಗಳು ಮತ್ತು 37 ಕ್ರಿಮಿನಲ್ ಪೆಟಿ ಕೇಸ್ಗಳನ್ನು ಇತ್ಯರ್ಥ ಪಡಿಸಲಾಯಿತು. ರಾಜಿ ಸಂಧಾನದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಂ. ಉತ್ತೂರ ಸೇರಿದಂತೆ ನ್ಯಾಯವಾದಿಗಳು, ನ್ಯಾಯಾಲಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ