Dharwad: ಶ್ರಾವಣ ಮನುಷ್ಯನ ಉದ್ಧಾರಕ್ಕೆ ಸಾಕ್ಷಿಯಾಗಲಿ-ಶಿವಾಚಾರ್ಯ ಸ್ವಾಮೀಜಿ
6ರಿಂದ 8 ಗಂಟೆವರೆಗೆ ಶಿವಾಲಯದಲ್ಲಿ ಶಿವನಿಗೆ ನಿರಂತರ ರುದ್ರಾಭಿಷೇಕ
Team Udayavani, Aug 18, 2023, 10:15 AM IST
ಧಾರವಾಡ: ಶ್ರಾವಣ ಮಾಸ ಮನುಷ್ಯನ ಉದ್ಧಾರಕ್ಕೆ, ಸಾರ್ಥಕತೆಗೆ ಸಾಕ್ಷಿಯಾಗಬೇಕು ಮತ್ತು ಜೀವನಕ್ಕೆ ಸನ್ಮಾರ್ಗ ತೋರಬೇಕು
ಎಂದು ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೊಪ್ಪದಕೇರಿ ಶಿವಾಲಯದಲ್ಲಿ ಶಿವಾಲಯ ಸೇವಾ ಸಮಿತಿಯು ಶ್ರಾವಣ ಮಾಸದ ನಿಮಿತ್ತ ಆಯೋಜಿಸಿರುವ ಆಧ್ಯಾತ್ಮಿಕ
ಪ್ರವಚನದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಧುನಿಕ ಜೀವನದಲ್ಲಿ ಮನುಷ್ಯ ಸಂಸ್ಕೃತಿ, ಸಂಸ್ಕಾರ, ಧರ್ಮದಿಂದ ವಿಮುಖನಾಗಿ, ವಿಕಾರವಾದ ಮನಸ್ಸು ಹೊಂದುತ್ತಿದ್ದಾನೆ. ಭಕ್ತರಿಂದ, ಧರ್ಮಾಧಿಕಾರಿಗಳಿಂದ ನಿರಂತರ ಧರ್ಮ ಸೇವೆ ನೆರವೇರಬೇಕು. ಧರ್ಮದಿಂದ ಮಾತ್ರ ಸಮಾಜ ಉಳಿಯಲು ಸಾಧ್ಯವಿದೆ. ಶ್ರಾವಣ ಮಾಸದಲ್ಲಿ ಆಲಿಸಿದ ಜ್ಞಾನ, ಆಚರಿಸಿದ ನೀತಿ, ಆಚಾರಗಳನ್ನು ಭಾದ್ರಪದ ಮಾಸದಲ್ಲಿ ಗಟ್ಟಿಗೊಳಿಸಿ, ವರ್ಷಪೂರ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿವಾಲಯ ಸೇವಾ ಸಮಿತಿ ಅಧ್ಯಕ್ಷ ಡಾ| ಎಸ್.ಆರ್.ರಾಮನಗೌಡರ ಪ್ರಾಸ್ತಾವಿಕ ಮಾತನಾಡಿ, ಶ್ರಾವಣ ಅಂಗವಾಗಿ ಶಿವಾಲಯ ಸೇವಾ ಸಮಿತಿಯಿಂದ ಪ್ರತಿದಿನ ಬೆಳಗ್ಗೆ 6ರಿಂದ 8 ಗಂಟೆವರೆಗೆ ಶಿವಾಲಯದಲ್ಲಿ ಶಿವನಿಗೆ ನಿರಂತರ ರುದ್ರಾಭಿಷೇಕ,
ಮಹಾಮಂಗಳಾರತಿ ಮಾಡಲಾಗುತ್ತದೆ.
ಆಧ್ಯಾತ್ಮಿಕ ಪ್ರವಚನ ನಿರಂತರವಾಗಿ ಒಂದು ತಿಂಗಳು ನಡೆಯುತ್ತದೆ ಎಂದು ತಿಳಿಸಿದರು. ಶಿವಾಲಯ ಸೇವಾಸಮಿತಿ ಕಾರ್ಯದರ್ಶಿ ಬಸವರಾಜ ಕೌಜಲಗಿ ಸ್ವಾಗತಿಸಿದರು. ಶಿವಾನಿ ಚೌಕಿಮಠ ಪ್ರಾರ್ಥಿಸಿದರು. ಶ್ರೀಕಾಂತ ಪುರ್ಲಿ ನಿರೂಪಿಸಿದರು. ಪ್ರೊ| ಬಸಯ್ಯ ಶಿರೋಳ ವಂದಿಸಿದರು. ಸಿ.ಎಸ್. ಪಾಟೀಲ, ಬಸವರಾಜ ಕಡಕೋಳ, ಬಸವರಾಜ ಕಂಚನಹಳ್ಳಿ, ಜಯಶ್ರೀ
ಪಾಟೀಲ, ಪ್ರೇಮಲತಾ ಸೇರಿದಂತೆ ಎಂ.ಬಿ. ನಗರ ಹಾಗೂ ಕೊಪ್ಪದಕೇರಿ ಗಣ್ಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?