ಮನೆಯೆದುರು ನಾಯಿ ಶೌಚ: ಸ್ವಚ್ಛತೆ ಶಿಕ್ಷೆ
Team Udayavani, Aug 14, 2017, 12:41 PM IST
ಹುಬ್ಬಳ್ಳಿ: ತಾವು ಸಾಕುವ ನಾಯಿಯನ್ನು ಬೆಳಗ್ಗೆ, ಸಂಜೆ ವೇಳೆ ವಾಯುವಿಹಾರ ನೆಪದಲ್ಲಿ ಕರೆದೊಯ್ದು ಇನ್ನೊಬ್ಬರ ಮನೆ ಮುಂದೆ ಶೌಚ, ಮೂತ್ರ ಮಾಡಿಸುವ ಜನ ಅನೇಕರಿದ್ದಾರೆ. ಇಂತಹ ಕಾಟದಿಂದ ರೋಸಿ ಹೋದ ನಾಗರಿಕರೊಬ್ಬರು ಮನೆ ಮುಂದೆ ಇಂತಹ ಕಾರ್ಯಕ್ಕೆ “ಎಚ್ಚರಿಕೆ ಫಲಕ’ ಹಾಕಿದ್ದು, ಮನೆ ಮುಂದೆ ನಾಯಿ ಶೌಚ ಮಾಡಿಸುವವರಿಂದಲೇ ಅದನ್ನು ಎತ್ತಿ ಹಾಕಿಸುವ ಮೂಲಕ ಬುದ್ಧಿ ಕಲಿಸಿದ್ದಾರೆ!
ಇಲ್ಲಿನ ಅಶೋಕ ನಗರದ ಉದ್ಯಾನವನ ಎದುರಿನ ನಿವಾಸಿ ಗಣೇಶ ಜರತಾರಘರ ಎನ್ನುವವರ ಮನೆ ಇದ್ದು, ಅನೇಕರು ತಮ್ಮ ನಾಯಿಗಳನ್ನು ತೆಗೆದುಕೊಂಡು ಬಂದು ಅವರ ಹೊರಗೋಡೆಗೆ ಹೊಂದಿಕೊಂಡಂತೆ ಶೌಚ ಹಾಗೂ ಮೂತ್ರ ಮಾಡಿಸುತ್ತಿದ್ದರು. ಈ ಬಗ್ಗೆ ಹೇಳಿದರೂ ಕೇಳುವವರಿಲ್ಲವಾಗಿತ್ತು.
ಇದರ ದುರ್ನಾತದಿಂದ ಮನೆಯವರು ಹೊರಗೆ ಕುಳಿತುಕೊಳ್ಳುವುದಕ್ಕೆ, ಮಧ್ಯಾಹ್ನ ವೇಳೆ ವಾಹನ ನಿಲ್ಲಿಸುವುದಕ್ಕೂ ಸಾಧ್ಯವಾಗದ ಸ್ಥಿತಿ ಇತ್ತು. ಇದರಿಂದ ರೋಸಿ ಹೋದ ಜರತಾರಘರ ಅವರು ಮನೆಯ ಮುಂದೆ ಎಚ್ಚರಿಕೆ ನೋಟಿಸ್ ಅಂಟಿಸಿದ್ದಾರಲ್ಲದೆ, ನೋಟಿಸ್ ಅಂಟಿಸಿದ ಮೇಲೂ ಕೆಲವರು ತಮ್ಮದೇ ಕಾರ್ಯಕ್ಕೆ ಮುಂದಾದಾಗ ಒಬ್ಬರನ್ನು ಹಿಡಿದು ಅವರ ನಾಯಿ ಮಾಡಿದ ಶೌಚವನ್ನು ಅವರ ಕೈಯಿಂದಲೇ ಎತ್ತಿ ಹಾಕಿಸಿದ್ದಾರೆ.
ಕೆಲವೊಂದು ಬಾರಿ ಬಡಿಗೆ ಹಿಡಿದು ಕಾವಲು ನಿಲ್ಲುವ ಸ್ಥಿತಿ ಅನುಭವಿಸಿದ್ದೇವೆ. ಬೆಳಗ್ಗೆ ನಾವು ಮನೆ ಒಳಗೆ ಇದ್ದಾಗ ಕೆಲವರು ನಾಯಿ ಮಲ-ಮೂತ್ರ ಮಾಡಿಸಿ ಜಾಗ ಖಾಲಿ ಮಾಡಿಸುತ್ತಿದ್ದರು. ಇದರ ತಡೆಗೆ ಎಚ್ಚರಿಕೆ ನೋಟಿಸ್ ಅಂಟಿಸಬೇಕಾಯಿತು. ಒಬ್ಬರಿಂದ ಅವರ ಕೈಯಿಂದಲೇ ನಾಯಿ ಮಲ ಎತ್ತಿಸಿದಾಗಿನಿಂದ ಮನೆ ಮುಂದೆ ಹೊಲಸು ಮಾಡುವುದು ನಿಂತಿದೆ ಎಂಬುದು ಗಣೇಶ ಜರತಾರಘರ ಅವರ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
MUST WATCH
ಹೊಸ ಸೇರ್ಪಡೆ
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ