ಭೂತಾಯಿ ಜ್ವರ ತಗ್ಗಿಸಲು ಪುಟ್ಟ ಹೆಜ್ಜೆ 


Team Udayavani, Mar 22, 2019, 10:52 AM IST

22-march-20.jpg

ಹುಬ್ಬಳ್ಳಿ: ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಪರಿಹಾರ ಕ್ರಮದ ಗಂಭೀರ ಚಿಂತನೆ ಇಲ್ಲವಾಗುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆಯುವ, ಭೂ ತಾಯಿ ಜ್ವರ ತಗ್ಗಿಸಲು ಪರಿಹಾರ ಕ್ರಮಗಳ ಬಗ್ಗೆ ಮಾ.24ರಂದು ಚಿಂತನ-ಮಂಥನ ನಡೆಯಲಿದೆ. ಹಸಿರು ಕರ್ನಾಟಕ ಪಕ್ಷ ಬೀಜ ಬಿತ್ತನೆ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್‌ ವೇದಿಕೆಯಾಗಲಿದೆ.

ಭೂಮ್ತಾಯಿಗೆ ಜ್ವರ ಹೆಚ್ಚಿಸುವ ಸ್ಥಿತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ ಎಂಬ ಪರಿಸರ ವಿಜ್ಞಾನಿಗಳ ಎಚ್ಚರಿಕೆ ನೀಡಿಯಾಗಿದೆ. ಇಷ್ಟಾದರೂ ಯಾವುದೇ ರಾಜಕೀಯ ಪಕ್ಷಗಳು ಪರಿಸರ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ವಿಚಾರಕ್ಕೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡುತ್ತಿಲ್ಲ. ರಾಜಕೀಯ ಪಕ್ಷಗಳ ಮೇಲೆ ಒತ್ತಡ ತರುವ, ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಸಮಾನ ಮನಸ್ಕ ಪರಿಸರ ಪ್ರೇಮಿಗಳು ಮುಂದಡಿ ಇರಿಸಿದ್ದಾರೆ.

ಪರಿಸರ ಕಾಳಜಿ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಕಣ್ಣು ತೆರೆಸಬೇಕು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪರಿಸರ ಕಾಳಜಿಗೆ ತಮ್ಮ ನಿಲುವೇನೆಂಬುದನ್ನು ಸ್ಪಷ್ಟಪಡಿಸಬೇಕೆಂಬ ನಿಟ್ಟಿನಲ್ಲಿ ಧಾರವಾಡದ ಡಾ| ಸಂಜೀವ ಕುಲಕರ್ಣಿ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ.24ರಂದು ಸಂಜೆ 4:00ಗಂಟೆಗೆ ಚಿಂತನಾ ಸಭೆಯೊಂದಿಗೆ ರಾಜ್ಯದ ಗಮನ ಸೆಳೆಯುವ ಯತ್ನಕ್ಕೆ ಮುಂದಾಗಿದ್ದಾರೆ. ಪರಿಸರ ಪ್ರೇಮಿಗಳಾದ ನಾಗೇಶ ಹೆಗಡೆ, ಅನಿತಾ ಪೈಲೂರು, ರೂಪಾ ಹಾಸನ, ವೆಂಕಟೇಶಮೂರ್ತಿ, ಡಾ| ಮೀನಾಕ್ಷಿ ಭರತ್‌ ಇನ್ನಿತರರು ಸಾಥ್‌ ನೀಡಲಿದ್ದಾರೆ.

ಮೈ ನಡುಗಿಸುತ್ತಿದೆ ಭವಿಷ್ಯದ ಕರಾಳತೆ: ಪರಿಸರ ವಿಜ್ಞಾನಿಗಳ ಪ್ರಕಾರ ಕಳೆದ 250-300 ವರ್ಷಗಳಲ್ಲಿ ಭೂಮಿಯ ಸರಾಸರಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿದ್ದು, ಇನ್ನು ಒಂದು ಡಿಗ್ರಿ ತಾಪಮಾನ ಹೆಚ್ಚಾದರೆ ಭವಿಷ್ಯದಲ್ಲಿ ಜೀವಸಂಕುಲಕ್ಕೆ ಬಹುದೊಡ್ಡ ಕುತ್ತು ಎದುರಾಗಲಿದೆ ಎಂಬುದಾಗಿದೆ. ಹವಾಮಾನದ ತೀವ್ರತರ ಬದಲಾವಣೆ, ಮಳೆ ಕೊರತೆ-ಬರ ಹೆಚ್ಚಳದಿಂದ ಕೃಷಿ ಸಂಕಷ್ಟಕ್ಕೆ ಸಿಲುಕಿದೆ. ಕೃಷಿಕರ ನಗರ ವಲಸೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಲಸೆ ಪ್ರಮಾಣ ಹೆಚ್ಚುತ್ತ ಸಾಗಿದರೆ ಭವಿಷ್ಯದಲ್ಲಿ ಕೃಷಿ ಕಾಯಕ ದೊಡ್ಡ ಅಪಾಯಕ್ಕೆ ಸಿಲುಕಲಿದ್ದು, ಆಹಾರ ಭದ್ರತೆ ಎದುರಾಗಲಿದೆ.

ದೇಶದಲ್ಲಿ 1947ರಲ್ಲಿ ಶೇ. 22ರಷ್ಟು ಇದ್ದ ಅರಣ್ಯ ಪ್ರದೇಶ ಇದೀಗ ಶೇ.8ಕ್ಕೆ ಕುಸಿದಿದೆ. ಒಂದು ಕಡೆ ಅರಣ್ಯ ನಾಶವಾಗುತ್ತಿದ್ದರೆ, ಕೃಷಿ ಜಮೀನುಗಳ ಬದುವುಗಳು, ಬದುವಿನ ಮೇಲಿನ ಮರಗಳು ಮಾಯವಾಗಿವೆ. ಫ‌ಲವತ್ತಾದ ಮಣ್ಣು ಕೊಚ್ಚಿ ಹೋಗುತ್ತಿದೆ. ಸಣ್ಣ ನದಿಗಳು ಬತ್ತುತ್ತಿವೆ. ದೊಡ್ಡ ನದಿಗಳಲ್ಲೂ ನೀರಿನ ಹರಿವು ಗಣನೀಯವಾಗಿ ತಗ್ಗತೊಡಗಿದೆ. ಬರದ ಸಮಸ್ಯೆ ಒಂದು ಕಡೆಯಾದರೆ, ಕೆಲವೇ ಗಂಟೆಗಳಲ್ಲಿ ಬೀಳುವ ಜೋರಾದ ಮಳೆ ಮತ್ತೂಂದು ರೀತಿಯ ಅನಾಹುತ ಸೃಷ್ಟಿಸುತ್ತಿದೆ. ಇದಕ್ಕೆ ಪರಿಹಾರ ಭಾಗವಾಗಿ ದೇಶ-ವಿಶ್ವದ ಅನೇಕ ಕಡೆಗಳಲ್ಲಿ ಯತ್ನಗಳು ನಡೆಯುತ್ತಿವೆ. ಇದಕ್ಕೆ ಪೂರಕರವಾಗಿ ಕರ್ನಾಟಕದಲ್ಲೂ ಪರಿಹಾರ ಕ್ರಮದಯತ್ನಕ್ಕೆ ಶ್ರೀಕಾರ ಹಾಕಲಾಗುತ್ತಿದೆ.

ಪರಿಸರ ಕಾಳಜಿ ಕುರಿತ ಪಟ್ಟಿ ಬಿಡುಗಡೆ?: 
ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ರಾಜಕೀಯ ಪಕ್ಷಗಳ ಮೇಲೆ ಯಾವೆಲ್ಲ ಬೇಡಿಕೆಗಳೊಂದಿಗೆ ಒತ್ತಡ ತರಬೇಕು, ಏನೆಲ್ಲ ಅಂಶಗಳೊಂದಿಗೆ ಪರಿಸರ ಕಾಳಜಿ ಪಟ್ಟಿ ಬಿಡುಗಡೆ ಮಾಡಬೇಕೆಂಬುದರ ಚಿಂತನೆ ನಡೆದು ಮಹತ್ವದ ತೀರ್ಮಾನಗಳು ಹೊರ ಬೀಳುವ ಸಾಧ್ಯತೆ ಇದೆ. ಪ್ರತಿ ಗ್ರಾಮದಲ್ಲಿ ಮರ, ನೀರು ಮತ್ತು ಮಣ್ಣು ಬಳಗ ಹಾಗೂ ಕಾಂಪೋಸ್ಟ್‌ ತಯಾರಿಕಾ ಘಟಕ ಸ್ಥಾಪಿಸಬೇಕು, ಗ್ರಾಮದವರೇ ಅವುಗಳ ನಿರ್ವಹಣೆ ಮಾಡುವಂತಿರಬೇಕು, ಮನುಷ್ಯರ ಮಲ-ಮೂತ್ರಗಳನ್ನೂ ಕಾಂಪೋಸ್ಟ್‌ ಮಾಡಿ ಕೃಷಿ ಭೂಮಿಗೆ ಸೇರಿಸುವ ನಿಟ್ಟಿನಲ್ಲಿ ಇಕೋಸ್ಯಾನ್‌ ಮತ್ತು ಕಾಂಪೋಸ್ಟ್‌ ಶೌಚಾಲಯ ಮಾದರಿಗಳ ಬಗ್ಗೆ ಹೆಚ್ಚಿನ ಸಂಶೋಧನೆ, ಪ್ರಚಾರ ಕೈಗೊಳ್ಳಬೇಕು. ವಾಯುಮಾಲಿನ್ಯ ಪ್ರಮಾಣ ದರ್ಶಕಗಳ ಅಳವಡಿಕೆ ಇನ್ನಿತರ ಬೇಡಿಕೆಗಳೊಂದಿಗೆ ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆಯಲ್ಲಿ ಇವುಗಳ ಸೇರ³ಡೆಗೆ ಒತ್ತಾಯಿಸಲಾಗುತ್ತದೆ.

ಬೇಸಿಗೆ ಮುನ್ನವೇ ಸಾವಿರಾರು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಇದನ್ನು ಯಾವ ರೀತಿಯ ಪ್ರಗತಿ ಎಂದು ಪರಿಗಣಿಸಬೇಕು. ಪರಿಸರ ಕಾಳಜಿ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಉದಾಸೀನತೆ ಬದಲು ದೂರಗಾಮಿ ಪರಿಹಾರ ಯೋಜನೆ ಹೊಂದಬೇಕಿವೆ. ಮುಂದಿನ 25 ವರ್ಷಗಳ ಅಜೆಂಡಾ ತಯಾರಿಸಬೇಕಿದೆ. ಪ್ರಕೃತಿ ವೇದನೆ ಕೇಳಿಸಿಕೊಳ್ಳುವ, ಪರಿಸರ ಕಾಳಜಿಗೆ ಆದ್ಯತೆಯ ಸಂವೇದನೆ ರಾಜಕಾರಣಿಗಳಲ್ಲಿ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯೊಂದು ಇರಿಸಲಾಗುತ್ತಿದೆ.
. ಡಾ| ಸಂಜೀವ ಕುಲಕರ್ಣಿ,
  ಪರಿಸರ ಪ್ರೇಮಿ

ಅಮರೇಗೌಡ ಗೋನವಾರ 

ಟಾಪ್ ನ್ಯೂಸ್

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.