ಭಾರತೀಯ ಸಂಸ್ಕೃತಿ ಮಹೋತ್ಸವ ಸಂಪನ್ನ
Team Udayavani, Jan 19, 2018, 12:50 PM IST
ಹುಬ್ಬಳ್ಳಿ: ಪ್ರೇಕ್ಷಕರ ಕೊರತೆ ನಡುವೆಯೂ ಭಾರತೀಯ ಸಂಸ್ಕೃತಿಯ ಹಿರಿಮೆ, ಜನಪದ ಸಾಂಸ್ಕೃತಿಕ ಸೊಗಡು ವಿಜೃಂಭಿಸಿತು. ದೇಶದ ವಿವಿಧ ರಾಜ್ಯದ ಬುಡಕಟ್ಟು ಹಾಗೂ ಜಾನಪದ ನೃತ್ಯ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಭಾರತೀಯ ಸಂಸ್ಕೃತಿ ಮಹೋತ್ಸವ ಅಂಗವಾಗಿ ಇಲ್ಲಿನ ನೆಹರು ಮೈದಾನದಲ್ಲಿ ಎರಡು ದಿನ ಕಾಲ ಆಯೋಜಿಸಿದ್ದ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಕೋಲಾಟ, ವೀರಗಾಸೆ ನೃತ್ಯ ಗಮನ ಸೆಳೆಯಿತು.
ಮಿಜೋರಾಂನ ಚಿರೋ ನೃತ್ಯ-ಅಲ್ಲಿನ ಬುಡಕಟ್ಟು ಸಂಪ್ರದಾದಲ್ಲಿ ಮದುವೆ ವೇಳೆ ಕೈಗೊಳ್ಳುವ ನೃತ್ಯ ಪ್ರದರ್ಶಿಸಲಾಯಿತು. ಪಂಜಾಬ್ನ ಬಾಂಗ್ರಾ ನೃತ್ಯ ಆಕರ್ಷಣೀಯವಾಗಿತ್ತು. ತೆಲಂಗಾಣದ ಕಲಾವಿದರು ಮಥುರಾದಿಂದ ತೆಲಂಗಾಣದ ಅದಿಲಾಬಾದ್ ಜಿಲ್ಲೆಯವರೆಗೆ
ರಾಮ ಕೃಷ್ಣ ಲೀಲಾ ಸಾರುವ ಮಾಥುರಿ ನೃತ್ಯ ಹಾಗೂ ಉತ್ತರಾಖಂಡದಲ್ಲಿ ಬುಡಕಟ್ಟು ಜನಾಂಗ ಧಾರ್ಮಿಕ ಕಾರ್ಯ, ಮಗುವಿನ ಜನನ ಹಾಗೂ ಮದುವೆ ಸಂದರ್ಭದಲ್ಲಿ ಕೈಗೊಳ್ಳುವ ಜೋಡಾ ಚಪೇಲಿ ನೃತ್ಯ ಗಮನ ಸೆಳೆಯಿತು.
ಅಸ್ಸಾಂನ ಬಾಗೂಂಬಾ, ಗುಜರಾತ್ನ ಸಿದ್ದಿ ದಮಾಲ, ಹಿಮಾಚಲ ಪ್ರದೇಶದ ಗದ್ದಾ ಡ್ಯಾನ್ಸ್, ತಮಿಳುನಾಡಿನ ಕರಗಂ ಕವಣಿ ಅಲ್ಲದೆ ಮಹಾರಾಷ್ಟ್ರ ಇನ್ನಿತರ ರಾಜ್ಯಗಳ ಕಲಾವಿದರು ಜಾನಪದ ನೃತ್ಯ ಪ್ರದರ್ಶಿಸಿದರು. ದೇಶದ ವಿವಿಧ ರಾಜ್ಯಗಳಿಂದ ಕಲಾ ತಂಡಗಳು ಆಗಮಿಸಿದ್ದವು. ವಿಶೇಷವಾಗಿ ಆಯಾ ರಾಜ್ಯಗಳ ಬುಡಕಟ್ಟು ಹಾಗೂ ಜಾನಪದ ಸಂಸ್ಕೃತಿ, ಸಾಂಸ್ಕೃತಿಕ ಸೊಬಗು ಬಿಂಬಿಸುವ ನೃತ್ಯದ ಪರಿಚಯ ಮಾಡಿದ್ದರು.
ಹೆಚ್ಚಿನ ಹಣ ನೀಡಿ ಸಿನಿಮಾ ನೋಡಲು ಹೋಗುವ ಜನರು ಉಚಿತವಾಗಿ ಜೀವಂತಿಕೆಯುಳ್ಳ ಕಲೆ ಬಿಂಬಿಸುವ ಕಾರ್ಯಕ್ರಮಕ್ಕೆ ನಿರಾಸಕ್ತಿ ತೋರಿದರೋ ಅಥವಾ ಆಯೋಜಕರು ಸಮರ್ಪಕ ಪ್ರಚಾರ ಕೈಗೊಳ್ಳಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಪ್ರೇಕ್ಷಕರ ಸಾಥ್ ಇಲ್ಲವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್