ಅಂತೂ ಕೆಂಪಗೆರಿ ಜಲಾಶಯಕ್ಕೆ ಹರಿದು ಬಂದಳು ಗಂಗ


Team Udayavani, Aug 10, 2018, 5:29 PM IST

10-agust-21.jpg

ನರಗುಂದ: ಕಳೆದ ಒಂದೂವರೆ ತಿಂಗಳಿಂದ ತನ್ನ ಒಡಲು ಬರಿದಾಗಿಸಿಕೊಂಡು ಪಟ್ಟಣದ ಜನತೆಗೆ ಕುಡಿವ ನೀರಿನ ಹಾಹಾಕಾರ ಸೃಷ್ಟಿಸಿದ್ದ ಪಟ್ಟಣದ ಕೆಂಪಗೆರಿ ಜಲಾಶಯ ಒಡಲಾಳಕ್ಕೆ ಅಂತೂ ಗಂಗಾಮಾತೆ (ನೀರು) ಬಂದು ಸೇರುತ್ತಿದೆ. ಮಲಪ್ರಭಾ ಕಾಲುವೆಗೆ ನೀರು ಹರಿಸಲಾಗಿದ್ದು, ಪಟ್ಟಣದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲಾಡಳಿತಕ್ಕೆ ಪುರಸಭೆ ಮೂಲಕ ತೀವ್ರ ಒತ್ತಡ ಮಧ್ಯೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಕುಡಿವ ನೀರಿಗಾಗಿ ಮಲಪ್ರಭಾ ನರಗುಂದ ಶಾಖಾ ಕಾಲುವೆಗೆ ನೀರು ಹರಿಸಲು ಅನುಮತಿ ನೀಡಿದ್ದರಿಂದ ಮಂಗಳವಾರ ಕಾಲುವೆಗೆ ನೀರು ಹರಿಬಿಡಲಾಗಿದೆ. ಗುರುವಾರ ಸಂಜೆಗೆ ಕಾಲುವೆ ನೀರು ಕೆಂಪಗೆರಿ ಒಡಲು ಸೇರಿಕೊಳ್ಳುತ್ತಿದೆ. 

ತಪ್ಪಿದ ಹಾಹಾಕಾರ: ಇಡೀ ಪಟ್ಟಣಕ್ಕೆ ಕುಡಿವ ನೀರಿನ ಏಕೈಕ ಮೂಲ ಕೆಂಪಗೆರಿ ಜಲಾಶಯ. ಇದು ಒಂದೂವರೆ ತಿಂಗಳ ಹಿಂದೆಯೇ ಖಾಲಿಯಾಗಿತ್ತು. ಪರಿಣಾಮ ಪುರಸಭೆ ವ್ಯಾಪ್ತಿಯ ಒಂದಷ್ಟು ಕೊಳವೆ ಬಾವಿ ಮತ್ತು ಜಲಾಶಯದಲ್ಲಿ ಅಳಿದುಳಿದ ನೀರನ್ನೇ ಪಂಪ್‌ ಸೆಟ್‌ನಿಂದ ಎತ್ತಿ ಕುಡಿಯಲು ಪೂರೈಸಲಾಗಿತ್ತು.

ಹೀಗಾಗಿ ರಾಡಿ ನೀರು, ಕೊಳವೆ ಬಾವಿ ಸವಳು ನೀರು ಕುಡಿವ ದುರ್ಗತಿಗೆ ಜನತೆ ರೋಷಿ ಹೋಗಿದ್ದರು. ಪುರಸಭೆ ತಹಶೀಲ್ದಾರ್‌ ಮೂಲಕ 3 ಬಾರಿ ಜಿಲ್ಲಾ ಧಿಕಾರಿಗೆ ಕಾಲುವೆ ನೀರು ಹರಿಸುವಂತೆ ಪತ್ರ ರವಾನಿಸಿತ್ತು. ಈ ಮಧ್ಯೆ ಶಾಸಕ ಸಿ.ಸಿ. ಪಾಟೀಲ ಕೂಡ ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನಿಸಿ ಕೂಡಲೇ ಕಾಲುವೆಗೆ ನೀರು ಹರಿಸುವಂತೆ ಒತ್ತಡ ಹೇರಿದ್ದರು.

ಪ್ರತಿ 15 ದಿನಕ್ಕೊಮ್ಮೆ ಕುಡಿವ ನೀರು ಪಡೆಯುತ್ತಿದ್ದ ಪಟ್ಟಣದ ಜನತೆ ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಹೇಗೋ ಕೆಂಪಗೆರಿ ಜಲಾಶಯಕ್ಕೆ ಕಾಲುವೆ ನೀರು ಸೇರುತ್ತಿರುವುದು ಜನತೆ ನಿರಾಳವಾಗುವಂತಾಗಿದೆ. ಆರೇಳು ತಿಂಗಳಿಗೆ ಸಾಕಾಗುವಷ್ಟು ನೀರು ಕೆರೆಯಲ್ಲಿ ಸಂಗ್ರಹವಾಗುವ ನಿರೀಕ್ಷೆ ಕಂಡು ಬಂದಿದೆ.

ಅಡ್ಡಗಟ್ಟಿ ನೀರು: ನವಿಲುತೀರ್ಥ ರೇಣುಕಾ ಜಲಾಶಯದಿಂದ ಕಾಲುವೆಗೆ ನೀರು ಬಿಡಲಾಗಿದ್ದು, ಮಲಪ್ರಭಾ ಕಾಲುವೆಯಿಂದ ಸೋಮಾಪುರ ಕಾಲುವೆ ಮೂಲಕ ಕೆರೆಗೆ ನೀರು ಸೇರುತ್ತಿದೆ. ಹೀಗಾಗಿ ಸೋಮಾಪುರ ಕಾಲುವೆ ಗೇಟ್‌ ಬಳಿ ಮಲಪ್ರಭಾ ಶಾಖಾ ಕಾಲುವೆ ಮಣ್ಣಿನಿಂದ ಅಡ್ಡಗಟ್ಟಿ ನೀರು ತಿರುವಿಕೊಳ್ಳಲಾಗಿದೆ. ಪುರಸಭೆ ಕಾವಲುಗಾರರನ್ನು ನೇಮಿಸಿದೆ.

10 ದಿನ ಲಭ್ಯ: ಕೆಂಪಗೆರಿ ಜಲಾಶಯ ತುಂಬಿಸಲು ಆ.7ರಿಂದ 10 ದಿನ ಅಂದರೆ ಆ.16ರವರೆಗೆ ಕಾಲುವೆಗೆ ದಿನಕ್ಕೆ 300 ಕ್ಯುಸೆಕ್‌ ನೀರು ಬಿಡಲಾಗಿದೆ. ಕಾಲುವೆ ನೀರನ್ನು ದುರ್ಬಳಕೆ ಮಾಡಿಕೊಳ್ಳದಂತೆ ಪುರಸಭೆಯಿಂದ ಮೂರು ಸಿಬ್ಬಂದಿ ತಂಡ ರಚಿಸಲಾಗಿದ್ದು, ಹಗಲು ರಾತ್ರಿ ಪಾಳಿಯಲ್ಲಿ ಕಾಲುವೆ ನೀರು ಸಮರ್ಪಕವಾಗಿ ಜಲಾಶಯ ಸೇರಲು ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾರಾಯಣ ಪೇಂಡ್ಸೆ ತಿಳಿಸಿದರು.

ಆರು ತಿಂಗಳ ನಿರೀಕ್ಷೆ
ಕೆಂಪಗೆರಿ ಜಲಾಶಯ 19 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಾಲುವೆಗೆ ಹರಿಸಿದ ನೀರು ಸಮರ್ಪಕವಾಗಿ 10 ದಿನಗಳು ಜಲಾಶಯ ಸೇರಿದರೆ ಸುಮಾರು 16 ಅಡಿ ನೀರು ಸಂಗ್ರಹಿಸಿಕೊಳ್ಳಬಹುದು. ಮೇಲಾಗಿ 16 ಅಡಿ ಮಾತ್ರ ಸಂಗ್ರಹಕ್ಕೆ ಅವಕಾಶ ಇದೆ. ಕಾರಣ ಹೆಚ್ಚು ನೀರು ಸಂಗ್ರಹವಾದರೆ ಜಲಾಶಯದಲ್ಲಿ ಸೋರಿಕೆ ಉಂಟಾಗುತ್ತದೆ ಎಂಬುದು ಅಧಿಕಾರಿಗಳ ನಿಲುವು.

ರೈತರು ಸಹಕರಿಸಲಿ
ನರಗುಂದ ಪಟ್ಟಣಕ್ಕೆ ಕುಡಿವ ನೀರಿಗಾಗಿ ಕಾಲುವೆಗೆ ನೀರು ಬಿಡಲಾಗಿದೆ. ಕಾಲುವೆ ಮೇಲ್ಭಾಗದ ರೈತರು ಕಾಲುವೆ ನೀರು ಬಳಸಿಕೊಳ್ಳದಂತೆ ಸಹಕರಿಸಬೇಕು.
ನಾರಾಯಣ ಪೇಂಡ್ಸೆ, ಪುರಸಭೆ ಮುಖ್ಯಾಧಿಕಾರಿ

ಸಿದ್ಧಲಿಂಗಯ್ಯ ಮಣ್ಣೂರಮಠ 

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.