ಅನಧಿಕೃತ ಲೇಔಟ್‌ ಮಾಲೀಕರೇ ಜೋಕೆ

|ಮತ್ತೆ 120 ಲೇಔಟ್‌ ಮಾಲೀಕರಿಗೆ ಹುಡಾ ನೋಟಿಸ್‌

Team Udayavani, Nov 14, 2020, 2:56 PM IST

ಅನಧಿಕೃತ ಲೇಔಟ್‌ ಮಾಲೀಕರೇ ಜೋಕೆ

ಹುಬ್ಬಳ್ಳಿ: ಅವಳಿನಗರದಲ್ಲಿ ಅನಧಿಕೃತ ಲೇಔಟ್‌ಗಳು ತಲೆ ಎತ್ತುತ್ತಿದ್ದು, ಇಂಥವುಗಳ ಉತಾರದಲ್ಲಿ ಕರ್ನಾಟಕ ಭೂ ಸುಧಾರಣೆ (ಕೆಎಲ್‌ಆರ್‌) ಕಾಯ್ದೆ ಅಡಿ ಸರ್ಕಾರದ ಹೆಸರು ನಮೂದಿಸಲು ಚಿಂತನೆ ನಡೆದಿದೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಡಾದಿಂದ ಇತ್ತೀಚೆಗೆ ಸರ್ವೇ ಮಾಡಿದಾಗ ಅವಳಿನಗರದಲ್ಲಿ ಸುಮಾರು 177 ಅನಧಿಕೃತ ಲೇಔಟ್‌ಗಳಿದ್ದು, ಈಗಾಗಲೇ ಇವುಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಅವರು ಇವನ್ನು ಅಧಿಕೃತಗೊಳಿಸಿಕೊಳ್ಳದಿದ್ದರೆ ಕಂದಾಯ ಇಲಾಖೆಯ ಕೆಎಲ್‌ಆರ್‌ ಕಾಯ್ದೆಯಡಿ ಸರ್ಕಾರದ ಹೆಸರು ನಮೂದಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

ಹುಡಾದಿಂದ ಈ ಮೊದಲು 57 ಅನಧಿಕೃತ ಲೇಔಟ್‌ಗಳಿಗೆ ನೀಡಲಾಗಿದ್ದ ನೋಟಿಸ್‌ನಲ್ಲಿ 42 ಲೇಔಟ್‌ಗಳವರು ನಿಯಮಾವಳಿ ಅನುಸಾರ ಶೇ.45 ನಾಗರಿಕ ಬಳಕೆ ನಿವೇಶನ (ಸಿಎ ಲ್ಯಾಂಡ್‌), ಶೇ. 10 ಗಾರ್ಡನ್‌ ಹಾಗೂ 9 ಮೀಟರ್‌ರಸ್ತೆ ಬಿಡದೆ ಲೇಔಟ್‌ ನಿರ್ಮಿಸಿದ್ದರಿಂದ ಅವುಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ತಿಂಗಳ ಹಿಂದೆ ಮತ್ತೆ ಸರ್ವೇ ಮಾಡಿದಾಗ 120 ಅನಧಿಕೃತ ಲೇಔಟ್‌ಗಳು ಕಂಡುಬಂದಿದ್ದು, ಅವುಗಳಿಗೂ ನೋಟಿಸ್‌ ನೀಡಲಾಗಿದೆ. ಇನ್ನು 8-10 ದಿನಗಳೊಳಗೆ ಅನಧಿಕೃತ ಲೇಔಟ್‌ಗಳ ಮೇಲೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದರು.

ಲಾಟರಿ ಎತ್ತಿ ಆಯ್ಕೆ: ಹುಡಾದಿಂದ ಲಕಮನಹಳ್ಳಿ ಹಾಗೂ ತಡಸಿನಕೊಪ್ಪದಲ್ಲಿ ನಿರ್ಮಿಸಿದ ಬಡಾವಣೆಗಳಲ್ಲಿನ ನಿವೇಶನಗಳ ಹಂಚಿಕೆಗೆ ಆಹ್ವಾನಿಸಲಾಗಿತ್ತು. ಕಮನಹಳ್ಳಿ ಬಡಾವಣೆಗೆ 328 ಅರ್ಜಿಗಳು ಬಂದಿದ್ದು, 62 ಅರ್ಜಿದಾರರಿಗೆ ಹಾಗೂ ತಡಸಿನಕೊಪ್ಪ ಬಡಾವಣೆಗೆ 3178 ಅರ್ಜಿಗಳು ಬಂದಿದ್ದು, 275 ಅರ್ಜಿದಾರರಿಗೆ ಮುಂದಿನ ತಿಂಗಳು ಲಾಟರಿ ಎತ್ತಿ ಹಂಚಿಕೆ ಮಾಡಲಾಗುವುದು. ಹುಡಾ ವ್ಯಾಪ್ತಿಯಲ್ಲಿ ಅಂದಾಜು 1200 ಬಿಡಿ ಮತ್ತು ಮೂಲೆ ನಿವೇಶನಗಳಿದ್ದು, ತಿಂಗಳಿಗೊಮ್ಮೆ 100 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಕಳೆದ ತಿಂಗಳು ನಡೆಸಿದ 196 ಬಿಡಿ ಮತ್ತು ಮೂಲೆ ನಿವೇಶನಗಳಿಗೆ ಹುಡಾದಿಂದ 7 ಕೋಟಿ ರೂ.ಗಿಂತ ಅಧಿಕ ಬಿಡ್‌ ನಿರೀಕ್ಷಿಸಲಾಗಿತ್ತು. ಆದರೆ 10 ಕೋಟಿಗೂ ಅಧಿಕ ಬಿಡ್‌ಗೆ ಹಂಚಿಕೆಯಾಗಿವೆ ಎಂದು ತಿಳಿಸಿದರು.

2019ರಲ್ಲಿ ಸರ್ಕಾರದಿಂದ ಅವಳಿನಗರದ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ)ಗೆ ಅನುಮೋದನೆ ಆಗಿದ್ದು, ಇದರಲ್ಲಿನ ಸಣ್ಣ-ಪುಟ್ಟ ಬದಲಾವಣೆಗಾಗಿ ಪರಿಷ್ಕರಣೆಗೆ ಅನುಮೋದನೆ ಸಿಕ್ಕಿದೆ.ಜಿಐಎಸ್‌ ಆಧಾರಿತ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲಾಗುತ್ತಿದ್ದು, ಇಜಿಐಎಸ್‌ಕಂಪನಿಗೆ ಟೆಂಡರ್‌ ಆಗಿದೆ. ಅದು ಭೂಮಿ ಬಳಕೆ ಜೊತೆ ನೀರು, ಒಳಚರಂಡಿ ಸೇರಿಮೂಲಸೌಕರ್ಯ ಹಾಗೂ ಆಸ್ತಿ ತೆರಿಗೆ ಬಗ್ಗೆ ಜಿಐಎಸ್‌ ಆಧಾರಿತ ಮೂಲ ನಕ್ಷೆ ಸರ್ವೇ ಮಾಡುತ್ತದೆ. ಆಸ್ತಿ ತೆರಿಗೆಗೆ ಸಂಬಂಧಿಸಿ ಪಾಲಿಕೆಯಲ್ಲಾದ ತಪ್ಪುಗಳನ್ನುಸರಿಪಡಿಸಲಾಗುವುದು. ಕಂಪನಿಸರ್ವೇಯನ್ನು 2021ರ ಮಾರ್ಚ್‌ ತಿಂಗಳಲ್ಲಿ ಪೂರ್ಣಗೊಳಿಸಲಿದೆ. ಆಗ ಪರಿಷ್ಕೃತ 3ನೇ ಹಂತದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲಿಂದ ಅನುಮೋದನೆ ಸಿಕ್ಕು ಜಾರಿಯಾದರೆ ಆಗ ಮುಂದಿನ 10 ವರ್ಷಗಳ ವರೆಗೆಯಾವುದೇ ಬದಲಾವಣೆ ಆಗುವುದಿಲ್ಲ ಎಂದರು.

ಹುಡಾದಿಂದ ಇದುವರೆಗೆ ಒಟ್ಟು 359 ನಾಗರಿಕ ಬಳಕೆ ನಿವೇಶನ ಹಂಚಿಕೆ ಮಾಡಲಾಗಿದೆ. 10-15 ವರ್ಷದಿಂದ ಅವನ್ನು ಬಳಸಿಕೊಂಡಿಲ್ಲ. ಬಳಸದ ನಿವೇಶನಗಳನ್ನು ಹಿಂಪಡೆಯಲು ನೋಟಿಸ್‌ ನೀಡಲಾಗುವುದು. ನಾಗೇಶ ಕಲಬುರ್ಗಿ, ಹುಡಾ ಅಧ್ಯಕ್ಷ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.