ನಿಜಗುಣ ಶಿವಯೋಗಿಗಳು ಜ್ಞಾನದ ಸಂಪತ್ತು
Team Udayavani, Nov 22, 2019, 10:46 AM IST
ಹುಬ್ಬಳ್ಳಿ: ಜ್ಞಾನಕ್ಕೆ ಇನ್ನೊಂದು ಹೆಸರೇ ಶ್ರೀ ನಿಜಗುಣ ಶಿವಯೋಗಿಗಳು ಎಂದರೆ ತಪ್ಪಾಗಲಾರದು ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಮಂಗಳವಾರ ಪೇಟೆಯ ರುದ್ರಾಕ್ಷಿಮಠದಲ್ಲಿ ಗುರುವಾರ ನಡೆದ ಶ್ರೀ ನಿಜಗುಣ ಶಿವಯೋಗಿಗಳ 71ನೇ ಜಯಂತ್ಯುತ್ಸವ ಹಾಗೂ ನಿಜಗುಣರ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ದೇಹಕ್ಕೆ ಸಾವಿದೆ. ಆದರೆ ಜ್ಞಾನಕ್ಕೆ ಎಂದಿಗೂ ಸಾವು ಇಲ್ಲ ಎನ್ನುವುದನ್ನು ಶರಣರು ಹೇಳಿದ್ದಾರೆ. ಕನ್ನಡಕ್ಕೆ ಷಟ್ ಶಾಸ್ತ್ರಗಳನ್ನು ಬರೆದವರು ನಿಜಗುಣ ಶಿವಯೋಗಿಗಳು. ಹಲವಾರು ತತ್ವಜ್ಞಾನಿಗಳು ಬಂದು ಹೋಗಿದ್ದಾರೆ, ಆದರೆ ಜ್ಞಾನದ ಸಂಪತ್ತು ಎಂದರೆ ಅದು ನಿಜಗುಣ ಶಿವಯೋಗಿಗಳು ಮಾತ್ರ ಎಂದರು.
ಕಳೆದ 71 ವರ್ಷಗಳಲ್ಲಿ ನಿರಂತರವಾಗಿ ನಿಜಗುಣ ಶಾಸ್ತ್ರದ ದಾಸೋಹ ಉಣಬಡಿಸುತ್ತಿರುವುದು ಒಂದು ಸದ್ಗುರು ಸಿದ್ಧಾರೂಢಸ್ವಾಮಿ ಮಠ, ಇನ್ನೊಂದು ರುದ್ರಾಕ್ಷಿಮಠ. ಇವೆರಡು ಮಠಗಳಲ್ಲಿ ನಿಜಗುಣ ಶಾಸ್ತ್ರಗಳನ್ನು ಸತತವಾಗಿ ಉಣಬಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಪಾಟೀಲ ಪುಟ್ಟಪ್ಪ ಎಂದರೆ ನಡೆದಾಡುವ ಗ್ರಂಥಾಲಯ, ಅಪಾರವಾದ ಜ್ಞಾನ ಸಂಪತ್ತು ಹೊಂದಿರುವರು. ಇತಿಹಾಸವನ್ನು ಅರೆದು ಕುಡಿದವರು ಎಂದರೆ ಅದು ಡಾ| ಪಾಟೀಲ ಪುಟ್ಟಪ್ಪನವರು. ಅಂತಹ ವ್ಯಕ್ತಿಗೆ ನಿಜಗುಣ ಪ್ರಶಸ್ತಿ ನೀಡಿರುವುದು ಸಂಸತ ತಂದಿದೆ ಎಂದರು.
ನಿಜಗುಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ| ಪಾಟೀಲ ಪುಟ್ಟಪ್ಪ, ನಾಡಿನ ಹೆಸರಾಂತ ಮಠಗಳಲ್ಲಿ ರುದ್ರಾಕ್ಷಿ ಮಠವೂ ಒಂದಾಗಿದೆ. ಮೂರುಸಾವಿರ ಮಠದ ಮುಂಚಿನ ಮಠ ಎಂದರೆ ಅದು ರುದ್ರಾಕ್ಷಿ ಮಠವಾಗಿದೆ. ರುದ್ರಾಕ್ಷಿ ಮಠದ ತೊಲೆಗಳು, ಕಂಬಗಳಲ್ಲಿ ನಿಜಗುಣ ಶಿವಯೋಗಿಗಳ ಜ್ಞಾನ ಅಡಕವಾಗಿದೆ. ಇಂತಹ ಹೆಸರಾಂತ ಮಠದಲ್ಲಿ ಸನ್ಮಾನ ಸ್ವೀಕರಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಲಿಂಗಯ್ಯನವರ ಗಲಗಲಿಮಠ ಉಪನ್ಯಾಸ ನೀಡಿದರು. ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಉಮಾ ಪಂಚಾಂಗಮಠ, ಪ್ರೊ| ಎಸ್.ಕೆ. ಜಂಗ್ಲೆಪ್ಪಗೌಡ್ರ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಹಂದಿಗುಂದ ಶ್ರೀಗಳು, ಗುಳೇದಗುಡ್ಡ ಒಪ್ಪತ್ತೇಶ್ವರ ಶ್ರೀಗಳು, ಪ್ರೊ| ಕೆ.ಎಸ್. ಕೌಜಲಗಿ ಮೊದಲಾದವರು ಇದ್ದರು. ಶ್ರೀ ನಿಜಗುಣ ಶಿವಯೋಗಿಗಳ ತೊಟ್ಟಿಲೋತ್ಸವ ನಡೆಯಿತು. ನಂತರ ಓಣಿಯ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ