ಭಾವೈಕ್ಯತೆ ಆಂದೋಲನ ಆರಂಭಿಸಲು ಉ.ಕ. ಪ್ರೇರಣೆ


Team Udayavani, Jan 27, 2018, 6:20 AM IST

Ibrahim-Sutar-Padma-Shri-Aw.jpg

ಧಾರವಾಡ: “ತಂತಿಯೊಳಗ ಕರೆಂಟ್‌ ಐತಿ. ಅದನ್ನ ಮುಟ್ಟಿದ್ರ ಶಾಕ್‌ ಹೊಡಿತೇತಿ. ಲೈಟ್‌ನೊಳಗೂ ಕರೆಂಟ್‌ ಐತಿ. ಅದನ್ನ ಮುಟ್ಟಿದ್ರ ಶಾಕ್‌ ಹೊಡಿಯೋ ದಿಲ್ಲ. ಹಂಗಾದ್ರ ಅದು ಕರೆಂಟ್‌ ಅಲ್ಲೇನೋ? ಹಂಗಾದ್ರ ತಂತಿಯೊಳಗೆ ಬೆಳಕು ಬರೋದಿಲ್ಲ. ಬಲ್ಬಿನೊಳಗ ಬೆಳಕು ಬರತದಲ್ಲಾ? ತಂತಿಯೊಳಗ ಕರೆಂಟ್‌ ಐತಿ ಕಾಣೋದಿಲ್ಲ. ಬಲ್ಬನೊಳಗ ಕರೆಂಟ್‌ ಕಾಣತೈತಿ. ದೇವರು ಇಲ್ಲ ಅಂತೀರಲ್ಲ. ತಂತಿಯೊಳಗ ಕರೆಂಟ್‌ ಇದ್ದಂಗ ದೇವರು ಅದಾನು. ಆದರ ನೋಡುವುದಕ್ಕ ನಮ್ಮ ಮನಸ್ಸಿನೊಳಗಿನ ಆಧ್ಯಾತ್ಮದ ಬಲುº ಹೊತ್ತಬೇಕು.’

-ಇಂತಹ ಸಾವಿರಾರು ತರ್ಕಗಳಿಗೆ ವೇದಿಕೆಯ ಮೇಲಿಂದಲೇ ಉತ್ತರಗಳನ್ನು ನೀಡುತ್ತ, ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಜನಪ್ರಿಯರಾದವರು ಭಾವೈಕ್ಯತೆಯ ಹರಿಕಾರ ಮತ್ತು ಹಿರಿಕಾರ ಇಬ್ರಾಹಿಂ ಸುತಾರ್‌ ಅವರು.

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅವರು  “ಉದಯವಾಣಿ’ಯೊಂದಿಗೆ ಮಾತನಾಡಿ ತಮ್ಮ ಹರ್ಷ ಹಂಚಿಕೊಂಡರು. ನಾನು ಯಾವುದೋ ಒಂದು ಮೂಲೆಯಲ್ಲಿದ್ದವನು. ಆದರೆ ಇಂದು ದೇಶದ ಸರ್ಕಾರವೇ ನನ್ನನ್ನು ಗುರುತಿಸಿದ್ದು ಹೆಮ್ಮೆ ಎನಿಸುತ್ತದೆ. ಒಂದು ವೇಳೆ ನಾನು ಉತ್ತರ ಕರ್ನಾಟಕದಲ್ಲಿ ಹುಟ್ಟದೇ ಈ ದೇಶದ ಬೇರೆ ಯಾವ ಭಾಗದಲ್ಲಿ ಹುಟ್ಟಿದ್ದರೂ ಬಹುಶಃ ನನಗೆ ಇಂತಹ ಭಾಗ್ಯ ಸಿಕ್ಕುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಕಾರಣ ಉತ್ತರ ಕರ್ನಾಟಕದಲ್ಲಿ ಶತ ಶತಮಾನಗಳಿಂದಲೂ ಶರಣರು, ಸೂಫಿ ಸಂತರು ಒಟ್ಟಿಗೆ ಬದುಕಿಕೊಂಡು ಬಂದಿದ್ದಾರೆ. ಇದೇ ನನ್ನನ್ನು ಭಾವೈಕ್ಯತೆ ಆಂದೋಲನ ಆರಂಭಿಸಲು ಪ್ರೇರಣೆ ನೀಡಿತು.

ಹಳ್ಳಿಯ ಜನರಿಗೆ ಅವರದೇ ಭಾಷೆಯಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ತುಂಬಬೇಕು ಎನ್ನುವ ಬಯಕೆ ಹೆಚ್ಚಿತು. ಹೀಗಾಗಿ ಸ್ಥಳೀಯ ವಿಶೇಷ ಸಂವಹನ ಕಲೆ ರೂಢಿಸಿಕೊಂಡೆ. 1970ರ ದಶಕದಲ್ಲಿಯೇ ಭಾವೈಕ್ಯ ಸಂಗೀತ ಮೇಳ ರಚಿಸಿಕೊಂಡು ಶರಣರ ತತ್ವಗಳನ್ನು ಆಧರಿಸಿ ಅಧ್ಯಾತ್ಮ, ಸಾಮಾಜಿಕ ಸಮಾನತೆ, ಹಿಂದೂ -ಮುಸ್ಲಿಂ ಭಾವೈಕ್ಯತೆ ಹೀಗೆ ಅನೇಕ ವಿಚಾರಗಳನ್ನು ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಪ್ರವಚನ ಮತ್ತು ಉರುಸ್‌ಗಳ ಸಂದರ್ಭದಲ್ಲಿ ನೀಡಲು ಆರಂಭಿಸಿದೆ. ಆರಂಭದಲ್ಲಿ ದೊಡ್ಡ ವಿರೋಧ ಬಂದರೂ ನಂತರ ಎಲ್ಲರೂ ನನ್ನ ಪ್ರವಚನಕ್ಕೆ ಬೆಂಬಲವಾಗಿ ನಿಂತು ಪೋಷಿಸಿದರು ಎನ್ನುತ್ತಾರೆ ಇಬ್ರಾಹಿಂ ಸುತಾರ್‌ ಸಾಹೇಬ್ರು.

ಬಸವಾನಂದರ ಕೃಪೆ: ಇಬ್ರಾಹಿಂ ಸುತಾರ್‌ ಅವರು ಹುಟ್ಟಿದ್ದು 1940ರಲ್ಲಿ ಬಾಗಲಕೋಟೆ ಜಿಲ್ಲೆ  ಮುಸ್ಲಿಂ ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟಗಳನ್ನು ಅನುಭವಿಸುತ್ತಲೇ ದೊಡ್ಡವರಾದ ಅವರಿಗೆ ಸಮಾಜದಲ್ಲಿ ಹಿಂದೂ-ಮುಸ್ಲಿಂರ ಮಧ್ಯೆ ಇರುವ ಕಂದಕ ನೋಡಿ ಬೇಸರವಾಗುತ್ತದೆ. ಈ ಎರಡೂ ಸಮುದಾಯಗಳನ್ನು ಒಗ್ಗಟ್ಟಿನಿಂದ ನಡೆಯುವಂತೆ ಮಾಡುವುದು ಹೇಗೆ ಎನ್ನುವ ಪ್ರಶ್ನೆ ಕಾಡಿತು. ಆಗ ಅವರಿಗೆ ಹೊಳೆದಿದ್ದೆ ಆಧ್ಯಾತ್ಮಗಳ ತರ್ಕ ಮತ್ತು ಭಾವೈಕ್ಯತೆ.

ಮಹಾಲಿಂಗಪುರದ ಬಸವಾನಂದ ಸ್ವಾಮೀಜಿಗಳ ಸಂಘ ಅವರಿಗೆ ವಚನ ಸಾಹಿತ್ಯ ಮತ್ತು ತತ್ವಶಾಸ್ತ್ರಗಳನ್ನು ಸರಿಯಾಗಿ ಅಧ್ಯಯನ ಮಾಡಲು ಕಲಿಸಿ ಕೊಟ್ಟಿತು. ಆ ಮಠಕ್ಕೆ ಬರುವ ಶರಣರೊಂದಿಗೆ ಧಾರ್ಮಿಕ ವಿಚಾರಗಳ ಜಿಜ್ಞಾಸೆ, ಪರಸ್ಪರ ತತ್ವ ವಿಮರ್ಶೆ ಮಾಡುತ್ತಲೇ ಆಧ್ಯಾತ್ಮಿಕವಾಗಿಯೂ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು. ಇದೇ ಸಂದರ್ಭದಲ್ಲಿ ಸಮಾಜಕ್ಕೆ ಅಂಟಿಕೊಂಡಿದ್ದ ಕೋಮುವಾದದ ಪಿಡುಗಿಗೆ ಔಷಧಿ ಸಿದಟಛಿಪಡಿಸಿಕೊಂಡ ಇಬ್ರಾಹಿಂ ಸುತಾರರು, ತರ್ಕಶಾಸ್ತ್ರ ಪ್ರವೀಣರೂ ಆದರು. 

ಇಬ್ರಾಹಿಂ ಸುತಾರ್‌ ಅವರು ಸೂಫಿ ಸಂತರ ಪರಂಪರೆಯನ್ನು ಇಂದಿಗೂ ಜೀವಂತವಾಗಿಟ್ಟುಕೊಂಡು ಅದನ್ನು 21ನೇ ಶತಮಾನಕ್ಕೆ ಕೊಂಡೊಯ್ಯಲು ಕೊಂಡಿಯಾದರು. ಬಸವಣ್ಣನವರ ವಚನಗಳಲ್ಲಿನ ಸಾರವನ್ನು ಜಾನಪದೀಯ ಭಾಷೆ ಮತ್ತು ತಾರ್ಕಿಕ ಉದಾಹರಣೆಯ ಮೂಲಕ ತಿಳಿ ಹಾಸ್ಯದಲ್ಲಿ ಹೇಳುವುದರಲ್ಲಿ ಸುತಾರ್‌ ಅವರು ನಿಸ್ಸೀಮರು.

ಹೀಗಾಗಿ ಅವರು ಉತ್ತರ ಕರ್ನಾಟಕದ ಲಿಂಗಾಯತ ಮಠಗಳ ಜಾತ್ರೆ, ಪ್ರವಚನದಲ್ಲಿ ತಮ್ಮ ವಿದ್ವತ್ತನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ದೇವರು ಒಬ್ಬನೇ, ಎಲ್ಲಾ ಧರ್ಮಗಳ ಸಾರವೂ ಒಂದೇ ಎಂದು ನಾನು ಹಳ್ಳಿ ಹಳ್ಳಿಗಳಲ್ಲಿ ನಿಂತು ಮಾತನಾಡಲು ಆರಂಭಿಸಿದಾಗ ಅವರು ಕೂಡ ಪರಿವರ್ತನೆಯಾದರು. ನಾನು ಧೈರ್ಯದಿಂದ ಶರಣರ ತತ್ವಗಳನ್ನು,ಸೂμಗಳ ತತ್ವಗಳನ್ನು ಹಳ್ಳಿಯ ಮುಗ್ಧ ಜನರಲ್ಲಿ ತುಂಬಿದೆ. ಅದು ನನಗೆ ಫಲ ಕೊಟ್ಟಿತು. ಒಡೆದ ಮನಸ್ಸುಗಳು ಮತ್ತೆ ಬೆಸುಗೆಯಾದವು. ಅದೇ ನನ್ನ ಜೀವನದ ಸಾರ್ಥಕ ಕ್ಷಣ ಎನಿಸಿತು.
–  ಇಬ್ರಾಹಿಂ ಸುತಾರ್‌, ಭಾವೈಕ್ಯತೆಯ ಸೂಫಿ ಸಂತ

– ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.