ಬ್ಯಾಂಕ್‌ ಕೆಲಸ ಬಿಟ್ಟು ಪಿಎಚ್‌ಡಿಯಲ್ಲಿ ಚಿನ್ನ ಗೆದ್ದ ಪವಿತ್ರಾ


Team Udayavani, Jun 18, 2019, 7:21 AM IST

hubali-tdy-2..

ಪತಿ, ಮಗಳ ಜತೆ ಪವಿತ್ರಾ ಭಟ್.

ಧಾರವಾಡ: ಕಲಿತ ಬಳಿಕ ಕೆಲಸ ಸಿಕ್ಕರೆ ಸಾಕು ಅನ್ನುವ ಜನರೇ ಜಾಸ್ತಿ. ಅದರಲ್ಲೂ ಬ್ಯಾಂಕ್‌ ಕೆಲಸವೆಂದರೆ ಯಾರಾದರೂ ಬಿಡುತ್ತಾರಾ? ಸಾಧ್ಯವೇ ಇಲ್ಲ. ಆದರೆ ಇಲ್ಲೊಬ್ಬರು ಕಲಿಯುವ ಸಲುವಾಗಿ ಬ್ಯಾಂಕ್‌ ಕೆಲಸಕ್ಕೆ ಗುಡ್‌ಬೈ ಹೇಳಿ ಚಿನ್ನದ ಪದಕದೊಂದಿಗೆ ಪಿಎಚ್‌ಡಿ ಮಾಡಿ ತಾವಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾರೆ.

ಹೊನ್ನಾವರದ ಕರ್ಜಿದ ಮೂಲದ, ಈಗ ಪತಿಯೊಂದಿಗೆ ಧಾರವಾಡದಲ್ಲಿ ನೆಲೆಸಿರುವ ಪವಿತ್ರಾ ಭಟ್ ಅವರೇ ಈ ಸಾಧಕರು. ಕೃಷಿ ವಿವಿಯ 32ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ವಿಭಾಗದ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು ಸೈ ಅನ್ನಿಕೊಂಡಿದ್ದಾರೆ.

ಕೃಷಿ ವಿವಿಯಲ್ಲಿ ಬಿಎಸ್ಸಿ ಮಾಡಿ 7 ಚಿನ್ನದ ಪದಕ ಪಡೆದಿದ್ದ ಪವಿತ್ರಾ ಅವರು, ಬ್ಯಾಂಕ್‌ ಪರೀಕ್ಷೆ ಬರೆದು ಅದರಲ್ಲೂ ಸಫಲರಾಗಿ ಕೆಲಸವೂ ಸಿಕ್ಕಿತು. ಧಾರವಾಡದ ಲೈನ್‌ಬಜಾರ್‌ನಲ್ಲಿ ಇರುವ ಕೆವಿಜಿ ಬ್ಯಾಂಕ್‌ ಶಾಖೆಯ ಸಹಾಯಕ ವ್ಯವಸ್ಥಾಪಕಿ ಆಗಿ ಮೂರೂವರೆ ವರ್ಷ ಕಾಲ ಕೆಲಸ ಮಾಡಿದ ಬಳಿಕ ಸಂತೃಪ್ತಿಯ ಕೊರತೆ ಮನಸ್ಸಲ್ಲಿತ್ತು. ಹೀಗಾಗಿ ಪಿಎಚ್‌ಡಿ ಕೈಗೊಂಡು ಮುಂದೆ ಪ್ರೊಫೆಸರ್‌ ಆಗುವ ಕನಸು ಹೊತ್ತು ಬ್ಯಾಂಕ್‌ ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿ ವಿವಿಯಲ್ಲಿ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರ ಕೈಗೊಂಡಿದ್ದರು.

ಕುಟುಂಬ ನಿರ್ವಹಣೆಗೂ ಸೈ: ಪವಿತ್ರಾ ಅವರು ಪಿಎಚ್‌ಡಿ ಕೈಗೊಂಡಾಗ ಅವರ ಮಗಳು ಶ್ರೀರಕ್ಷಾಗೆ ಬರೀ ಮೂರು ವರ್ಷ. ಇಂತಹ ಸಮಯದಲ್ಲಿ ಕುಟುಂಬ ನಿರ್ವಹಣೆ ಜೊತೆಗೆ ಅಧ್ಯಯನದಲ್ಲೂ ತೊಡಗಿಸಿಕೊಂಡು ಸೈ ಅನ್ನಿಸಿಕೊಂಡರು. ಅವರ ಶ್ರಮದ ಹಿಂದೆ ಪತಿ ಶಶಿಧರ ದೀಕ್ಷಿತ ಅವರ ಸಹಕಾರವೂ ಇದೆ. ಪತ್ನಿಯ ಇಷ್ಟದಂತೆ ಕಲಿಯಲು ಸಹಕಾರ ನೀಡಿದ ಅವರು, ಪಿಎಚ್‌ಡಿ ಕೆಲಸದಲ್ಲೂ ಸಹಕಾರ ನೀಡಿದ್ದಾರೆ. ಸದ್ಯ ಮಗಳು ಶ್ರೀರಕ್ಷಾ 2ನೇ ವರ್ಗದಲ್ಲಿ ಕಲಿಯುತ್ತಿದ್ದು, ಮಗಳ ಪಾಲನೆ ಜೊತೆಗೆ ಮುಂದೆ ಪ್ರೊಫೆಸರ್‌ ಆಗಲು ಕನಸು ಹೊಂದಿದ್ದಾರೆ.

ವಯೋಮಿತಿ ನಿಗದಿ ಆತಂಕ: ಪ್ರೊಫೆಸರ್‌ ಆಗಲೇಬೇಕೆಂಬ ಕನಸು ಹೊತ್ತು ಪಿಎಚ್‌ಡಿ ಮುಗಿಸಿರುವ ಪವಿತ್ರಾ ಅವರಿಗೆ ಕರ್ನಾಟಕದಲ್ಲಿ ನಿಗದಿ ಮಾಡಿರುವ ವಯೋಮಿತಿ ಆತಂಕಕ್ಕೆ ದೂಡುವಂತೆ ಮಾಡಿದೆ. ಪಿಎಚ್‌ಡಿ ಮಾಡುವಾಗ 40ಕ್ಕೆ ಇದ್ದ ವಯೋಮಿತಿ ಈಗ 35ಕ್ಕೆ ರಾಜ್ಯ ಸರ್ಕಾರ ಇಳಿಸಿದೆ. ಸದ್ಯ 34 ವಯಸ್ಸಿನ ಪವಿತ್ರಾ ಅವರಿಗೆ ಇನ್ನೊಂದೇ ವರ್ಷದಲ್ಲಿ ತಮ್ಮ ಕನಸು ನನಸು ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಪ್ರೊಫೆಸರ್‌ ಆಗುವ ಕನಸು ನನಸಾಗಿ ಉಳಿಯಲಿದೆ.

ಬೇರೆ ರಾಜ್ಯದಲ್ಲಿ 40ಕ್ಕೆ ಇರುವ ವಯೋಮಿತಿ ಕರ್ನಾಟಕದಲ್ಲಿ ಮಾತ್ರ 35ಕ್ಕೆ ಇಳಿಸಿದ್ದು, ನಮ್ಮಂತವರಿಗೆ ಹಿನ್ನಡೆ ಆಗಲಿದೆ. ಇನ್ನೂ ಒಂದು ವರ್ಷ ಅವಕಾಶ ಇದ್ದು, ಅಷ್ಟರೊಳಗೆ ಕೆಲಸ ಸಿಕ್ಕರೆ ಮಾಡುವೆ. ಇಲ್ಲವಾದರೆ ನಾನು ಪಿಎಚ್‌ಡಿ ಕೈಗೊಂಡಿರುವ ವಿಷಯ ಮುಂದಿಟ್ಟುಕೊಂಡು ಧಾರವಾಡದಲ್ಲಿಯೇ ಮಕ್ಕಳು ಮತ್ತು ಪೋಷಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಪ್ತ ಸಮಾಲೋಚನಾ ಕೇಂದ್ರ ತೆರೆಯುವೆ ಎನ್ನುತ್ತಾರೆ ಪವಿತ್ರಾ.

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.