ಪಿಂಚಣಿ ಬಾಕಿ ಹಣ ಬಿಟ್ಹಾಕಿ


Team Udayavani, Aug 9, 2018, 4:04 PM IST

9-agust-20.jpg

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ವಿಚಾರ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿ, ಹಲವು ಸುತ್ತಿನ ಹೋರಾಟಕ್ಕೂ ವೇದಿಕೆಯಾಗಿತ್ತು. ವಿಧಾನಸಭೆ ಚುನಾವಣೆ ವಿಷಯವಾಗಿಯೂ ಬಳಕೆಯಾಗಿತ್ತು. ಅಂದಾಜು 105 ಕೋಟಿ ರೂ. ಬಾಕಿ ಹಣಕ್ಕೆ ಕೊನೆಗೂ ಎಳ್ಳು ನೀರು ಬಿಡುವಂತಾಗಿದೆ.

ಪಿಂಚಣಿ ಬಾಕಿ ಹಣ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ರಾಜಕೀಯ ಸಮರ ಸೃಷ್ಟಿಸಿತ್ತು. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಪಿಂಚಣಿ ಬಾಕಿ ಹಣ ನೀಡದೆ ಕಾಂಗ್ರೆಸ್‌ ಸರಕಾರ ಮಲತಾಯಿ ಧೋರಣೆ ತೋರಿದೆ ಎಂದು ಆರೋಪಿಸಿ ಬಿಜೆಪಿಯವರು, ಮುಖ್ಯಮಂತ್ರಿ, ಸಚಿವರ ವಿರುದ್ಧ ಹಲವು ಸುತ್ತಿನ ಹೋರಾಟ ಕೈಗೊಂಡಿದ್ದರೂ ಇದೀಗ ಅಂತಿಮವಾಗಿ ಬಾಕಿ ಹಣದ ಆಸೆ ಬಿಟ್ಟು ಬಿಡಿ ಎಂಬ ಸಂದೇಶವನ್ನು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಸಾರಿದ್ದಾರೆ.

121 ಕೋಟಿ ರೂ. ಬಾಕಿ ಇತ್ತು: ಕಳೆದ ಏಳೆಂಟು ವರ್ಷಗಳಿಂದ ಪಿಂಚಣಿ ಬಾಕಿ ಸಮಸ್ಯೆ ಸೃಷ್ಟಿಯಾಗಿತ್ತು. ಸುಮಾರು 7-8 ಕೋಟಿ ರೂ.ಗಳ ಪಿಂಚಣಿ ಬಾಕಿ ಇದ್ದಾಗಲೇ ಕೆಲವರು ಇದರ ಬಗ್ಗೆ ಎಚ್ಚರಿಸಿದ್ದರಾದರೂ, ಅಧಿಕಾರಿಗಳು, ಪಾಲಿಕೆ ಆಡಳಿತ ಮಂಡಳಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸರಕಾರ ನೀಡಲಿದೆ, ತಂದರಾಯಿತು ಎಂಬ ಉದಾಸೀನತೆ ತೋರಿದ್ದರು.

ವರ್ಷದಿಂದ ವರ್ಷಕ್ಕೆ ಪಿಂಚಣಿ ಬಾಕಿ ಬಾಲ ಬೆಳೆದು ಅದು 100 ಕೋಟಿ ರೂ. ದಾಟಿದಾಗಲೇ ಎಲ್ಲರಿಗೂ ಇದರ ಬಿಸಿ ತಗುಲಿತ್ತು. ಸಾಮಾನ್ಯ ನಿಧಿ ಹಣ ಪಿಂಚಣಿ ಬಾಬತ್ತಿಗೆ ಹೋಗುತ್ತಿದೆ ಎಂದು ಅರಿತಾಗ, ಸರಕಾರಿದಂದ ಪಿಂಚಣಿ ಬಾಕಿ ಪಡೆಯುವ ಧ್ವನಿ ಹೆಚ್ಚತೊಡಗಿತ್ತು. ಪಿಂಚಣಿ ಬಾಕಿ ಮೊತ್ತ 121 ಕೋಟಿ ರೂ. ದಾಟಿತ್ತು. ಪಾಲಿಕೆ ಸರ್ವಪಕ್ಷ ಸದಸ್ಯರು ಹಾಗೂ ಅವಳಿ ನಗರ ಶಾಸಕರು ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರ ಬಳಿ ನಿಯೋಗ ತೆರಳಿ ಮನವಿ ಮಾಡಿದ್ದರು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪಿಂಚಣಿ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಬಾಕಿ ಹಣ ಬಾರದನ್ನು ಖಂಡಿಸಿ ಮಹಾಪೌರರಾಗಿದ್ದ ಡಿ.ಕೆ. ಚವ್ಹಾಣ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನಗರಕ್ಕೆ ಆಗಮಿಸಿದ್ದಾಗ ಶಿಷ್ಟಾಚಾರದಂತೆ ಅವರ ಸ್ವಾಗತಕ್ಕೆ ತೆರಳದೆ ಪ್ರತಿಭಟನೆ ತೋರಿದ್ದರು. ಇದಕ್ಕೆ ಟೀಕೆಯೂ ವ್ಯಕ್ತವಾಗಿತ್ತು. ಕಾಂಗ್ರೆಸ್‌ ಸರಕಾರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣದಲ್ಲಿ 2017ರ ಜೂನ್‌ನಿಂದ ಪಿಂಚಣಿ ಹಣವಾಗಿ ಅಂದಾಜು 16 ಕೋಟಿ ರೂ. ಬಿಡುಗಡೆ ಮಾಡಿ ಕೈ ತೊಳೆದುಕೊಂಡಿತ್ತು. ಪಾಲಿಕೆಗೆ ಬರಬೇಕಾದ 105 ಕೋಟಿ ರೂ. ಬಾಕಿ ರೂಪದಲ್ಲೇ ಉಳಿದಿತ್ತು.

ಬಾಕಿ ಹಣ ಆಸೆ ಬಿಟ್ಟು ಬಿಡಿ: ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರು ಪಿಂಚಣಿ ಬಾಕಿ ಹಣದ ಪ್ರಕರಣಕ್ಕೆ ತೆರೆ ಎಳೆದಿದ್ದು, ಹಿಂದಿನ ಬಾಕಿ ನೀಡಿಕೆ ಅಸಾಧ್ಯ. ಅದರ ಆಸೆ ಬಿಟ್ಟುಬಿಡಿ. ಬೇರೆ ಅಭಿವೃದ್ಧಿ ಯೋಜನೆಗೆ ಪ್ರಸ್ತಾವನೆ ನೀಡಿ ಅನುದಾನ ನೀಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳುವ ಮೂಲಕ ಹಣ ಬರುವ ಆಸೆಗೆ ಇತಿಶ್ರೀ ಹಾಡಿದ್ದಾರೆ.

ಪ್ರಸ್ತುತ ಸ್ಥಿತಿಯಲ್ಲಿ ಸರಕಾರ ಇದ್ದ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಪರದಾಡುತ್ತಿದ್ದು, ಹಲವು ಗೊಂದಲಗಳನ್ನು ಸುತ್ತಿಕೊಂಡ ಬಾಕಿ ಹಣದ ಪಾವತಿಗೆ ಖಂಡಿತವಾಗಿಯೂ ಮುಂದಾಗದು. ರೈತರ ಸಾಲ ಮನ್ನಾದ ಹಣ ಹೊಂದಾಣಿಕೆ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಾಕಿ ಹಣಕ್ಕೆ ಸುತಾರಾಂ ಒಪ್ಪುವುದಿಲ್ಲ ಎಂಬ ವಾಸ್ತವದ ಸಂಗತಿ ಅರಿತಿರುವ ಪಾಲಿಕೆ ಆಡಳಿತ ಮಂಡಳಿಯೂ ಸಹ ಪಿಂಚಣಿ ಬಾಕಿ ಆಸೆಯನ್ನು ಕೈ ಬಿಡಲು ಮುಂದಾಗಿದೆ.

ಸರಿದೂಗಿಸುವ ಸವಾಲು
ಪಿಂಚಣಿ ಬಾಕಿ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಲಿಕೆಯವರಿಗೆ ಇದೀಗ ಬಾಕಿ ಹಣ ಬಾರದು ಎಂಬ ವಾಸ್ತವ ಅರಿವಿಗೆ ಬಂದಿದೆ. ಆದರೆ, ಈಗಾಗಲೇ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯವಾಗಿ ನೀಡಿದ ಅಂದಾಜು 105 ಕೋಟಿ ರೂ. ಗಳನ್ನು ಸರಿದೂಗಿಸುವುದು ಯಾವ ಬಾಬತ್ತಿನಿಂದ ಎಂಬ ಸವಾಲು ಎದುರಾಗಿದೆ. ಪಾಲಿಕೆ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆಸ್ತಿಕರ ಹೊರತು ಪಡಿಸಿದರೆ ಜಾಹೀರಾತು, ಭೂ ಬಾಡಿಗೆ, ವಾಣಿಜ್ಯ ಮಳಿಗೆಗಳು, ಕಟ್ಟಡ ಪರವಾನಗಿ ಶುಲ್ಕ, ನೀರಿನ ಬಾಕಿ ಹೀಗೆ ವಿವಿಧ ವಿಭಾಗಗಳಲ್ಲಿ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ. ಕೆಲವೊಂದು ಬಾಬತ್ತುಗಳಿಂದ ನಯಾ ಪೈಸೆಯು ಆದಾಯ ಇಲ್ಲವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವುದರಿಲಿ, ನೌಕರರಿಗೆ ವೇತನ ನೀಡುವುದಕ್ಕೂ ಸಂಕಷ್ಟ ಪಡುವ ಸ್ಥಿತಿ ಇದೆ.

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.