ರೈತರಿಗೆ ತಕ್ಷಣ ಬೆಳೆವಿಮೆ ಪರಿಹಾರ ನೀಡಿ: ಕೋನರಡ್ಡಿ
ಎಲ್ಲ ಗ್ರಾಮಗಳಲ್ಲಿ ನೀರು ಬಂದಿರುವುದರಿಂದ ಭಾಗಶಃ ಸ್ಥಳಾಂತರಿಸಬೇಕಾಗಿದೆ.
Team Udayavani, Sep 14, 2022, 6:25 PM IST
ನವಲಗುಂದ: ಬೆಣ್ಣೆಹಳ್ಳ, ಹಂದಿಗನಹಳ್ಳ ಹಾಗೂ ತುಪ್ಪರಿಹಳ್ಳಗಳಲ್ಲಿ ಸತತ ಮಳೆಯಿಂದ ಪ್ರವಾಹ ಹೆಚ್ಚಾಗಿ ಹೆಸರು, ಈರುಳ್ಳಿ, ಹತ್ತಿ, ಮೆಣಸಿನಕಾಯಿ, ಗೋವಿನಜೋಳ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಒತ್ತಾಯಿಸಿದರು.
ಗುಡಿಸಾಗರದಿಂದ ಕೊಂಗವಾಡ ಗ್ರಾಮದ ವರೆಗೆ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಹಾಗೂ ರೈತರ ಜೊತೆ ಟ್ರಾಕ್ಟರ್ ಚಲಾಯಿಸುತ್ತಾ ನಾಗನೂರ, ಸೊಟಕನಾಳ, ಕಡದಳ್ಳಿ, ಅರಹಟ್ಟಿ, ತಡಹಾಳ ಹಾಗೂ ಕೊಂಗವಾಡದವರೆಗೆ ಹಾನಿಯಾದ ಬೆಳೆ ಹಾಗೂ ಬಿದ್ದ ಮನೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಎಲ್ಲ ಗ್ರಾಮಗಳಲ್ಲಿ ನೀರು ಬಂದಿರುವುದರಿಂದ ಭಾಗಶಃ ಸ್ಥಳಾಂತರಿಸಬೇಕಾಗಿದೆ. ಆದರೆ ಸರ್ಕಾರ ಇಲ್ಲಿಯವರೆಗೆ ಯಾವುದೇ ಪರಿಹಾರ ನೀಡಿಲ್ಲ. ತಡಹಾಳ, ಕೊಂಗವಾಡ ಹಾಗೂ ನರಗುಂದ-ತಡಹಾಳ ಹಂದಿಗನಹಳ್ಳ ಸೇತುವೆ ಕೊಚ್ಚಿಹೋಗಿದ್ದರಿಂದ ಸಂಪರ್ಕವೇ ಕಡಿತಗೊಂಡಿದೆ. ನಾಗನೂರದಿಂದ ದಾಟನಾಳ ಮುಖ್ಯರಸ್ತೆ ಟ್ರಾಕ್ಟರ್ ಸಹಿತ ಸಂಚರಿಸಲು ಸಾಧ್ಯವಿಲ್ಲದ ಪರಸ್ಥಿತಿಯಾಗಿದೆ.
ರೈತರಿಗೆ ಬೆಳೆಹಾನಿ, ಮನೆ ಬಿದ್ದವರಿಗೆ ಮನೆ ಕಟ್ಟಿಕೊಳ್ಳಲು ಅನುದಾನ ಹಾಗೂ ಬೆಳೆವಿಮೆ ತುಂಬಿದ ರೈತರಿಗೆ ಪರಿಹಾರ ತಕ್ಷಣ ನೀಡಬೇಕೆಂದು ಒತ್ತಾಯಿಸಿದರು. ಕಲ್ಲಪ್ಪ ಹುಬ್ಬಳ್ಳಿ, ನಿಜಗುಣಿ ಗಾಡದ, ಮುತ್ತಯ್ಯ ಹಿರೇಮಠ, ಮಂಜು ಕೊಣ್ಣೂರ, ಭಾಷುಸಾಬ ದಿವಾನಸಾಬನವರ, ನಿಂಗಪ್ಪ ಮರಿನಾಯ್ಕರ, ಮಲ್ಲಣ್ಣ ಕಿರೇಸೂರ, ದಾವಲ ಮೊರಬದ, ಬಸವರಡ್ಡಿ ರೋಗಿ, ಎನ್.ವಿ. ಕಿರೇಸೂರ, ಮಲ್ಲನಗೌಡ ಚನ್ನವೀರಗೌಡ, ಎಸ್.ಎಸ್. ಕುಂಬಾರ, ಹನಮಂತಪ್ಪ ಆನಂದಿ, ಶಿವಾನಂದ ಚಿಕ್ಕನರಗುಂದ, ಶಂಭು ಹಡಪದ, ರಾಜು ದೊಡಮನಿ, ಸತೀಶ ಮಮಟಗೇರಿ, ಜೇಕರಡ್ಡಿ ಕರಮಳ್ಳಿ, ಬಸಪ್ಪ ಜಲಾದಿ, ಭೀಮನಗೌಡ ರಾಟಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ