ಈಗ ರಾಜಕೀಯದ ಬಗ್ಗೆ ಏನನ್ನು ಹೇಳಲಾರೆ, ಡಿ. 25ರಂದು ಬಹಿರಂಗ : ಜನಾರ್ದನ ರೆಡ್ಡಿ
ನನ್ನ ಮನದ ಇಚ್ಛೆಯನ್ನು ಸಿದ್ಧಾರೂಢನಿಗೆ ತಿಳಿಸಿದ್ದೇನೆ....
Team Udayavani, Dec 19, 2022, 8:43 PM IST
ಹುಬ್ಬಳ್ಳಿ: ನನ್ನ ಮುಂದಿನ ರಾಜಕೀಯ ನಡೆಯನ್ನು ಡಿ. 25ರಂದು ಬೆಂಗಳೂರಿನಲ್ಲಿ ಬಹಿರಂಗ ಪಡಿಸುವೆ ಎಂದು ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.
ಇಲ್ಲಿನ ಸಿದ್ಧಾರೂಢಸ್ವಾಮಿ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಭವಿಷ್ಯದ ಸ್ಪಷ್ಟ ನಿಲುವನ್ನು ಅಂದು ತಿಳಿಸುವೆ. ಮಠಕ್ಕೆ ಉಭಯ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಈಗ ರಾಜಕೀಯ ಬಗ್ಗೆ ಏನನ್ನು ಹೇಳಲಾರೆ. ಬಳ್ಳಾರಿಯಿಂದ ನಾನು ಹೊರಗೆ ಇದ್ದೇನೆ. ಗಂಗಾವತಿ ಅದಕ್ಕೆ ಹತ್ತಿರದ ಹಾಗೂ ಇಷ್ಟವಾದ ಕ್ಷೇತ್ರವಾಗಿದೆ. ಚುನಾವಣೆಗೆ ನಾನು ಗಂಗಾವತಿಯಿಂದ ಸ್ಪರ್ಧೆ ಮಾಡುತ್ತೇನೆ ಎಂದರು.
ಮಹಾನ್ ಯೋಗಿ, ಪವಾಡ ಪುರುಷ ಹಾಗೂ ಆಧ್ಯಾತ್ಮಿಕ ಚಿಂತಕರಂತೆ ಸಾಧನೆ ಮಾಡಿದ ಸಿದ್ಧಾರೂಢರು, ಸೋಮವಾರ ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಸಿದ್ಧಾರೂಢರ ಅಂಗಾರ ದೇಶ ಮತ್ತು ಜಗತ್ತಿಗೆ ಬಂಗಾರ ಎಂಬುದಾಗಿದೆ. ಯಾವುದೇ ಕಷ್ಟ ಬಂದಾಗ ಜನರು ಸಿದ್ಧಾರೂಢರ ಮೊರೆ ಹೋಗುತ್ತಿದ್ದರು. ನಾನು ಸಾರ್ವಜನಿಕ ಜೀವನದಲ್ಲಿ ತೊಡಗಿ ಕೊಳ್ಳಲು ಮತ್ತೊಮ್ಮೆ ಆಶೀರ್ವಾದ ಪಡೆದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಅವರ ಜೋಳಿಗೆಯಿಂದ ಹೋಳಿಗೆ ನೀಡಲಿ. ಬರುವ ದಿನಗಳಲ್ಲಿ ನನಗೆ ಮತ್ತಷ್ಟು ಸೇವೆ ಮಾಡಲು ಶಕ್ತಿ ನೀಡಲಿ. ನನ್ನ ಮನದ ಇಚ್ಛೆಯನ್ನು ಸಿದ್ಧಾರೂಢನಿಗೆ ತಿಳಿಸಿದ್ದೇನೆ. ಅದನ್ನು ಈಗ ಹೇಳಲಾರೆ. ಡಿ. 25ರಂದು ಎಲ್ಲವನ್ನೂ ಬಹಿರಂಗ ಪಡಿಸುವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ