ಸಂಜೆ 4:30 ಗಂಟೆಗೆ ಸರಾಫ ಅಂಗಡಿ ವಹಿವಾಟೂ ಬಂದ್
Team Udayavani, Jul 10, 2020, 11:15 AM IST
ಹುಬ್ಬಳ್ಳಿ: ಅವಳಿನಗರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಸರಾಫ ಸಂಘದವರು ಅಂಗಡಿಗಳನ್ನು ಜು. 31ರ ವರೆಗೆ ಬೆಳಗ್ಗೆ 10ರಿಂದ ಸಂಜೆ 4:30 ಗಂಟೆ ವರೆಗೆ ಮಾತ್ರ ತೆರೆಯಲು ನಿರ್ಧರಿಸಿದ್ದಾರೆ.
ಜೊತೆಗೆ ಕರ್ಫ್ಯೂವನ್ನು ರಾತ್ರಿ 8 ಗಂಟೆ ಬದಲು ಸಂಜೆ 5 ಗಂಟೆಯಿಂದಲೇ ಜಾರಿಗೊಳಿಸಿ ಕೋವಿಡ್ 19 ಹರಡುವಿಕೆ ತಡೆಗಟ್ಟಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಸರಾಫ ಸಂಘದ ಪದಾಧಿಕಾರಿಗಳು, ಸದಸ್ಯರು ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸರಕಾರದ ನಿರ್ದೇಶನಗಳನ್ನು ಪಾಲಿಸುವುದು ಬಹಳ ಅವಶ್ಯ. ಆ ನಿಟ್ಟಿನಲ್ಲಿ ತಮ್ಮ ವಹಿವಾಟುಗಳನ್ನು ಸಂಜೆಯೊಳಗೆ ಪೂರ್ಣಗೊಳಿಸಲು ನಿರ್ಧರಿಸಿದ್ದು, ಗುರುವಾರದಿಂದಲೇ ಅದನ್ನು ಜಾರಿಗೊಳಿಸಿದ್ದಾರೆ. ಸಭೆಯಲ್ಲಿ ಸಂಘದ ಅಧ್ಯಕ್ಷ ಪರಶುರಾಮ ಚಿಲ್ಲಾಳ, ಕಾರ್ಯದರ್ಶಿ ವಿಠuಲ ಪೂಜಾರಿ, ಗೋವಿಂದ ನಿರಂಜನ, ಶ್ರೀಕಾಂತ ಕರಿ, ಬಾಬು ಅಣವೇಕರ, ವೀರಣ್ಣಾ ಹೂಲಿ, ಶಿವಾನಂದ ಜೋಗಿನ, ನವರತ್ನರಾಜ ಸಂಘವಿ ಮೊದಲಾದವರಿದ್ದರು.