ಕೋವಿಡ್ಗೆ ಒಂದೇ ಕುಟುಂಬದ ಮೂವರು ಸಹೋದರರು ಬಲಿ
Team Udayavani, Jun 5, 2021, 6:24 PM IST
ಕುಂದಗೋಳ: ಕೋವಿಡ್ನಿಂದ 22 ದಿನಗಳ ಅಂತರದಲ್ಲಿ ಮೂವರು ಸಹೋದರರು ಮೃತಪಟ್ಟ ಘಟನೆ ತಾಲೂಕಿನ ಚಿಕ್ಕಗುಂಜಳ ಗ್ರಾಮದಲ್ಲಿ ನಡೆದಿದೆ.
ಕುಟುಂಬದ ಎಲ್ಲ ಸದಸ್ಯರಿಗೂ ಕೋವಿಡ್ ಸೋಂಕು ತಾಗಿದ್ದು, ಮಂಜುನಾಥ ಹಿರೇತನದ(48), ಅರವಿಂದ ಹಿರೇತನದ(46), ಸುರೇಶ ಹಿರೇತನದ(41) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಇವರ ಪತ್ನಿಯರು ಹಾಗೂ ಮಕ್ಕಳು, 75 ವರ್ಷದ ತಂದೆ ಪರಸಪ್ಪ ಹಿರೇತನದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಮನೆಯ ಮೂರು ಆಧಾರಸ್ತಂಭ ಇಲ್ಲದಂತಾಗಿದ್ದು, ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ.