ಅಂತರ್ಜಲ ವೃದ್ಧಿಗೆ ದೀಕ್ಷೆ ತೊಟ್ಟ ಭಗೀರಥ

ಹಳ್ಳಿ ಯುವಕನ ಜಲಜಾಗೃತಿ, 11 ರಾಜ್ಯಗಳಲ್ಲಿ ಸೇವಾ ಕಾರ್ಯ, ವಿದೇಶಿ ದಾನಿಗಳಿಂದಲೂ ನೆರವು

Team Udayavani, Mar 22, 2021, 3:32 PM IST

ಅಂತರ್ಜಲ ವೃದ್ಧಿಗೆ ದೀಕ್ಷೆ ತೊಟ್ಟ ಭಗೀರಥ

ಹುಬ್ಬಳ್ಳಿ: ಪ್ರತಿಯೊಂದು ಮಳೆ ಹನಿ ಹಿಡಿದಿಡಬೇಕೆಂಬ ಹಳ್ಳಿ ಯುವಕನ ಸಣ್ಣ ಯತ್ನ ಇಂದು ಬೃಹದಾಕಾರವಾಗಿ ಬೆಳೆದಿದೆ ಹುಬ್ಬಳ್ಳಿಯಿಂದ ಆರಂಭವಾದ ಈ ಪಯಣ 11 ರಾಜ್ಯಗಳಿಗೆ ವಿಸ್ತರಿಸಿದೆ. ಬತ್ತಿದ ಕೊಳವೆ ಬಾವಿಗಳಲ್ಲಿ ಮತ್ತೆಜೀವಜಲ ಚಿಮ್ಮುವಂತೆ ಮಾಡಿದ್ದು ಒಂದೆಡೆಯಾದರೆ, ಮಳೆನೀರುಕೊಯ್ಲು ಕುರಿತಾಗಿ ರೈತರು,ನಗರವಾಸಿಗಳು, ಉದ್ಯಮಿಗಳಿಗೆ ಜಾಗೃತಿಮೂಡಿಸಿ, ಮಳೆ ನೀರು ಸಂಗ್ರಹದ ಸಾಧನೆ ಪ್ರೇರಣಾದಾಯಕವಾಗಿದೆ.

ಜಲಸಂರಕ್ಷಣೆ, ಅಂತರ್ಜಲ ಮರುಪೂರಣದೀಕ್ಷೆ ತೊಟ್ಟ ಸಿಕಂದರ್‌ ಮೀರಾನಾಯ್ಕಎಂಬ ಗ್ರಾಮೀಣ ಯುವಕ 11 ರಾಜ್ಯಗಳಲ್ಲಿ ತನ್ನ ಸೇವಾ ಕಾರ್ಯ ವಿಸ್ತರಿಸಿದ್ದಾನೆ. ವಿದೇಶದಲ್ಲಿನ ದಾನಿಗಳು ಸಹ ಭಾರತದಲ್ಲಿಮಳೆನೀರು ಕೊಯ್ಲು, ಅಂತರ್ಜಲ ಹೆಚ್ಚಳಕ್ಕೆನೆರವು ನೀಡಲು ಮುಂದಾಗಿದ್ದಾರೆ. ಸಂಕಲ್ಪಗ್ರಾಮೀಣಾಭಿವೃದ್ಧಿ ಸೊಸೈಟಿ ಅಡಿಯಲ್ಲಿರೈತರ ಹೊಲಗಳಲ್ಲಿ ಬತ್ತಿದ ಕೊಳವೆ ಬಾವಿಗಳಪುನರುಜ್ಜೀವನ, ಮಳೆ ನೀರು ಸಂಗ್ರಹಕಾರ್ಯಗಳ ಜತೆಗೆ, ಸಂಕಲ್ಪ ಮಳೆ ನೀರುಕೊಯ್ಲು ಸಲ್ಯೂಶನ್ಸ್‌ ಅಡಿಯಲ್ಲಿ ನಗರಪ್ರದೇಶದಲ್ಲಿನ ಅಪಾರ್ಟ್‌ಮೆಂಟ್‌ಗಳು,ಕಾರ್ಖಾನೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದಾರೆ.

ವರ್ಷಕ್ಕೆ 30-40 ಬೋರ್‌ಗಳಿಗೆ ಮರುಜೀವ :

ರಾಜ್ಯದಲ್ಲಿ ನೀರಾವರಿಗೆ ಒಳಪಟ್ಟ ಕೃಷಿಭೂಮಿ ಶೇ.30. ಉತ್ತರ ಕರ್ನಾಟಕದಲ್ಲಿ ಶೇ.25 ಮಾತ್ರ. ಜಲಾಶಯಗಳ ಕಾಲುವೆ, ಹಳ್ಳ-ನದಿ, ಕೆರೆಗಳಿಂದ ನೀರಾವರಿ ಮಾಡುತ್ತಿದ್ದು, ಅನೇಕ ರೈತರು ಕೊಳವೆ ಬಾವಿ ಆಶ್ರಯಿಸಿದ್ದಾರೆ. ಮಳೆ ಕೊರತೆಯಿಂದ ಅಂತರ್ಜಲ ಕುಸಿಯುತ್ತಿದೆ. 200-300 ಅಡಿಗೆಸಿಗುತ್ತಿದ್ದ ನೀರು ಇದೀಗ 1000-1,200 ಅಡಿಗೆ ಕುಸಿದಿದೆ. ಉತ್ತರದ ಅನೇಕ ಜಿಲ್ಲೆಗಳನ್ನು ಕೊಳವೆಬಾವಿ ಕೊರೆಯಲು ನಿಷಿದ್ಧ ಎಂದು ಕೆಂಪು ಪಟ್ಟಿಗೆ ಸೇರಿಸಿದ್ದರೂ ಕೊಳವೆ ಬಾವಿಗಳ ಕೊರೆಯುವುದು ನಿಂತಿಲ್ಲ. ಸಾಲ ಮಾಡಿ ಕೊಳವೆ ಬಾವಿ ತೋಡಿಸಲು ಮುಂದಾಗಿ ನೀರು ಬಾರದೆ ವಿಫಲ ಆಗಿದ್ದಕ್ಕೆ, ಇದ್ದ ಕೊಳವೆ ಬಾವಿ ಬತ್ತಿ ಬೆಳೆ ನಷ್ಟ ಆಗಿದ್ದಕ್ಕೆ ಅದೆಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಲ್ಲೀಗನಿಧಾನವಾಗಿ ಅಂತರ್ಜಲ ಮರುಪೂರಣ ತಿಳಿವಳಿಕೆ ಮೂಡುತ್ತಿದೆ. ದಶಕದಿಂದ ಅಂತರ್ಜಲಮರುಪೂರಣ, ಮಳೆನೀರು ಕೊಯ್ಲು ಕುರಿತಾಗಿ ರೈತರಿಗೆ ತಿಳಿವಳಿಕೆ ನೀಡುತ್ತ ಉಚಿತವಾಗಿಯೇಮರುಪೂರಣ ವ್ಯವಸ್ಥೆ ಮಾಡುತ್ತ ಬಂದಿದ್ದ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಇದೀಗ ರೈತರೇ ಶುಲ್ಕ ನೀಡಿ ಮರುಪೂರಣಕ್ಕೆ ಬೇಡಿಕೆ ಸಲ್ಲಿಸತೊಡಗಿದ್ದಾರೆ. ಪ್ರಸ್ತುತ ಸಂಸ್ಥೆಯು ವಾರ್ಷಿಕ 30-40 ಬತ್ತಿದ ಕೊಳವೆ ಬಾವಿಗಳಿಗೆ ಮರುಜೀವ ನೀಡುತ್ತಿದೆ.

11 ರಾಜ್ಯಗಳಲ್ಲಿ ಕಾರ್ಯ ದೇಶಪಾಂಡೆ ಫೌಂಡೇಶನ್‌ :

ನೆರವಿನೊಂದಿಗೆ ಪ್ರತಿಷ್ಠಾನ ಕಟ್ಟಡದ ಸಣ್ಣ ಕೋಣೆಯಲ್ಲಿ ಸಂಕಲ್ಪಗ್ರಾಮೀಣಾಭಿವೃದ್ಧಿ ಸೊಸೈಟಿಆರಂಭಿಸಿದ್ದ ಸಿಕಂದರ್‌ ಮೀರಾನಾಯ್ಕ,ಕೊಳವೆ ಬಾವಿಗಳ ಮರುಪೂರಣಕಾರ್ಯ ಹಾಗೂ ಜಾಗೃತಿ ಒಬ್ಬರೇಕೈಗೊಳ್ಳುತ್ತಿದ್ದರು. ಇದೀಗ ಸುಮಾರು33 ಜನರಿಗೆ ಉದ್ಯೋಗ ನೀಡಿದ್ದಾರೆ.ಅನೇಕ ಮಹಿಳೆಯರ ಸ್ವಾವಲಂಬಿಬದುಕಿಗೆ ಮಾರ್ಗ ತೋರಿದ್ದಾರೆ. ಮಳೆ ನೀರು ಕೊಯ್ಲು, ಅಂತರ್ಜಲಮರುಪೂರಣ ಕಾಯಕವನ್ನು 11 ರಾಜ್ಯಗಳಿಗೆ ವಿಸ್ತರಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗುಜರಾತ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್‌ ಸೇರಿದಂತೆ ಒಟ್ಟು 11ರಾಜ್ಯಗಳ 266 ಗ್ರಾಮಗಳಲ್ಲಿ,8,600 ರೈತ ಕುಟುಂಬಗಳ ಅಂದಾಜು4,360 ಎಕರೆಯಷ್ಟು ಭೂಮಿಗೆನೀರೊದಗಿಸುವ ನಿಟ್ಟಿನಲ್ಲಿ ಅಂತರ್ಜಲಮರುಪೂರಣ ಹಾಗೂ ಮಳೆ ನೀರುಕೊಯ್ಲು ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ.

ನಗರ ಪ್ರದೇಶದಲ್ಲೂ ಜಲಜಾಗೃತಿ :

ಸಂಕಲ್ಪ ಮಳೆನೀರು ಕೊಯ್ಲು ಸಲ್ಯೂಶನ್ಸ್‌ ಅಡಿಯಲ್ಲಿ ನಗರ ಪ್ರದೇಶ ಹಾಗೂ ಉದ್ಯಮ ವಲಯದಲ್ಲಿ ಮಳೆ ನೀರು ಕೊಯ್ಲಿಗೆ ಮುಂದಾಗಿದ್ದಾರೆ. ಬೆಂಗಳೂರಿನ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿದ್ದು,ತೆಲಂಗಾಣದ ಹೈದರಾಬಾದ್‌ನಲ್ಲಿ ಶಾಲಾ ಕಟ್ಟಡ, ಅಪಾರ್ಟ್‌ಮೆಂಟ್‌ಗಳಲ್ಲಿಮಳೆನೀರು ಕೊಯ್ಲು ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ, ತುಮಕೂರು,ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಕಟ್ಟಡಗಳಿಗೆಮಳೆನೀರು ಕೊಯ್ಲು ಕೈಗೊಂಡಿದ್ದಾರೆ.

ಮುಡಿಗೇರಿದ ಪ್ರಶಸ್ತಿಗಳು : ಸಿಕಂದರ್‌ ಮೀರಾನಾಯ್ಕ ಅವರ ಕಾರ್ಯಕ್ಕೆ ಆಸ್ಟ್ರೇಲಿಯಾದ ಶಝರ್‌ ರಾಬಿನ್ಸನ್‌ ಅವರ ಪ್ರೋತ್ಸಾಹ ಪ್ರಮುಖವಾಗಿದೆ. ಸಂಕಲ್ಪ ಗ್ರಾಮೀಣಾಭಿವೃದ್ಧಿ ಸೊಸೈಟಿಯ ಜಲ ಸಂರಕ್ಷಣೆ-ಸಂವರ್ಧನೆ ಕಾಳಜಿ ಕಂಡು ಇರಾನ್‌ನಲ್ಲಿ ಎನರ್ಜಿ ಗ್ಲೋಬಲ್‌ ಪ್ರಶಸ್ತಿ, ಶ್ರೀಲಂಕಾದದಲ್ಲಿ ಅಂತಾರಾಷ್ಟ್ರೀಯ ವಾಟರ್‌ ಅಸೋಸಿಯೇಶನ್‌ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ.

ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಿಂದ ಮಳೆ ನೀರು ಕೊಯ್ಲು, ಕೊಳವೆ ಬಾವಿ ಮರುಪೂರಣಕ್ಕೆ ಬೇಡಿಕೆಬರುತ್ತಿದೆ. ಅಮೆರಿಕದಲ್ಲಿನ ಸೇವ್‌ ಇಂಡಿಯನ್‌ಫಾರ್ಮರ್ ಟ್ರಸ್ಟ್‌ ದೇಣಿಗೆ ನೀಡುತ್ತಿದ್ದು, ಈಗಾಗಲೇತಮಿಳುನಾಡಿನಲ್ಲಿ ಕಾರ್ಯ ಕೈಗೊಳ್ಳಲಾಗಿದೆ. ದೇಶದಎಲ್ಲ ರಾಜ್ಯಗಳಲ್ಲೂ ಇದು ವಿಸ್ತರಿಸಬೇಕೆಂಬುದುಟ್ರಸ್ಟ್‌ನ ಚಿಂತನೆಯಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿವಿಸ್ತರಣೆ ಕಾರ್ಯ ಸಾಧ್ಯವಾಗಿಲ್ಲ. ಈ ವರ್ಷ ಅಸ್ಸಾಂ ಸೇರಿದಂತೆ ಇನ್ನಷ್ಟು ರಾಜ್ಯಗಳಿಗೆ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ. – ಸಿಕಂದರ್‌ ಮೀರಾನಾಯ್ಕ, ಸಿಇಒ, ಸಂಕಲ್ಪ ಗ್ರಾಮೀಣಾಭಿವೃದ್ಧಿ ಸೊಸೈಟಿ

 

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.