ಬಾಲಕನಿಗೆ ನೆರವಾದ ಫೇಸ್ಬುಕ್ ಸಂದೇಶ
Team Udayavani, Jun 7, 2019, 6:00 AM IST
ನರಗುಂದ: ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಆ ಬಾಲಕ ಪ್ರತಿಭಾವಂತ. ಅಲ್ಲದೇ ತಂದೆ-ತಾಯಿಗೆ ನೆರವಾಗಲು ಶಾಲೆ ಅವಧಿ ಬಳಿಕ ಬುಟ್ಟಿಯಲ್ಲಿ ಹಣ್ಣು ಹೊತ್ತು ಮಾರುತ್ತ ನೆರವಾಗುತ್ತಿದ್ದವನಿಗೆ ಈಗ ಫೇಸ್ಬುಕ್ ಸಂದೇಶ ವಿದ್ಯಾಭ್ಯಾಸದ ನೆರವು ಕಲ್ಪಿಸಿದೆ.
ಮೂಲತಃ ಬೈಲಹೊಂಗಲ ತಾಲೂಕು ಸವಟಗಿ ಗ್ರಾಮದ ಬಾಲಕ ಈರಣ್ಣ ಯಡಹಳ್ಳಿ ಸದ್ಯ ಪಟ್ಟಣದ ನಂ.1 ಶಾಸಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ತಂದೆ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಹಣ್ಣು ಮಾರಿ ಜೀವನ ಸಾಗಿಸುತ್ತಿದ್ದಾರೆ.
ದಿನದ ಈತನ ಕಾಯಕ ನೋಡಿದ ಪಟ್ಟಣದ ಮಂಜುನಾಥ ಗುಗ್ಗರಿ ಎಂಬುವರು ಈತನನ್ನು ಮಾತನಾಡಿಸಿದಾಗ, “ಅಪ್ಪ, ಅವ್ವ ಬಾಳ ಕೆಲ್ಸಾ ಮಾಡ್ತಾರಿ.ಅದಕ್ಕ ನಾನೂ ಅವರಿಗೆ ಒಂದಿಷ್ಟು ಸಹಾಯ ಮಾಡ್ತಿದ್ದೀನಿ’ ಎಂದು ತಿಳಿಸಿದಾಗ ಮೆಚ್ಚಿಕೊಂಡ ಮಂಜುನಾಥ ಗುಗ್ಗರಿ ಅವರು ಚಿತ್ರಸಹಿತ ಬಾಲಕನ ಕುರಿತು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದರು. ಇದನ್ನು ಗಮನಿಸಿದ ಶಾಸಕ ಸಿ.ಸಿ.ಪಾಟೀಲ ಅವರ ಪುತ್ರ ಉಮೇಶಗೌಡ ಪಾಟೀಲ ಮಂಜುನಾಥ ಗುಗ್ಗರಿ ಮೂಲಕ ಈರಣ್ಣ ಯಡಹಳ್ಳಿ ಬಾಲಕನನ್ನು ಕರೆಯಿಸಿ ಆತನಿಗೆ 2 ವರ್ಷಕ್ಕಾಗುವಷ್ಟು ನೋಟ್ಬುಕ್, ಪುಸ್ತಕ ಮುಂತಾದ ಸಾಮಗ್ರಿ ನೀಡಿದ್ದಲ್ಲದೇ, ಆತನ ಆಸಕ್ತಿ ಗಮನಿಸಿ 10ನೇ ವರ್ಗದವರೆಗೆ ಆತನ ವಿದ್ಯಾಭ್ಯಾಸಕ್ಕೆನೆರವಾಗುವ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು
ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ
MUST WATCH
ಹೊಸ ಸೇರ್ಪಡೆ
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ