Gadag:ಉದ್ಘಾಟನೆಗೊಂಡರೂ ಬಳಕೆಗೆ ಬಾರದ ಈಜುಗೊಳ- 1 ಕೋಟಿ ರೂ. ವೆಚ್ಚ


Team Udayavani, Nov 6, 2023, 6:08 PM IST

Gadag:ಉದ್ಘಾಟನೆಗೊಂಡರೂ ಬಳಕೆಗೆ ಬಾರದ ಈಜುಗೊಳ

ಗದಗ: ಬೆಟಗೇರಿಯ ವಸಂತಸಿಂಗ್‌ ಜಮಾದಾರ ನಗರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಈಜುಕೊಳ ಉದ್ಘಾಟನೆಗೊಂಡು 6 ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ಪರಿಣಾಮ ಸರಿಯಾದ ನಿರ್ವಹಣೆ ಕೊರತೆಯಿಂದ ಈಜುಕೊಳದ ಸುತ್ತಲೂ ಗಿಡಗಂಟಿ ಬೆಳೆದು ಸಂಪೂರ್ಣ ಪಾಳು ಬಿದ್ದಿದೆ.

ಈಜುಕೊಳ ಉದ್ಘಾಟನೆ ನಂತರ ಆರಂಭದಲ್ಲಿ 2 ತಿಂಗಳು ಟ್ಯಾಂಕರ್‌ ಮೂಲಕ ನೀರು ಹಾಕಿ ಈಜುಕೊಳ ಆರಂಭಿಸಲಾಗಿತ್ತು. ಮಧ್ಯಾಹ್ನ ಮಾತ್ರ ಈಜಲು ಅವಕಾಶ ನೀಡಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ನೀರು ಲಭ್ಯವಾಗದ ಕಾರಣ ಈಜುಕೊಳ ಹಾಳು ಬೀಳುವಂತಾಗಿದೆ.

ಶಾಸಕರ ಅನುದಾನದಲ್ಲಿ 87 ಲಕ್ಷ ಹಾಗೂ ಇತರೆ ಅನುದಾನದಲ್ಲಿ ಈಜುಕೊಳ ನಿರ್ಮಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ, ನೀರಿನ ವ್ಯವಸ್ಥೆ ಇಲ್ಲದೇ ಹಾಳಾಗಿದೆ. ಜತೆಗೆ ಕಟ್ಟಡವು ಸಹ ಐದು ವರ್ಷದಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ನಿರ್ವಹಣೆ ಇಲ್ಲದ ಕಾರಣ ಈಜುಕೊಳಕ್ಕೆ ಹಾಕಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಉದ್ಘಾಟನೆಗೆ ಸೀಮಿತ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಯೋಜನೆ ಅಡಿಯಲ್ಲಿ 2016-17ನೇ ಸಾಲಿನಲ್ಲಿ ಒಂದು ಕೋಟಿಯಷ್ಟು ಹಣ ಅನುದಾನದೊಂದಿಗೆ 3ನೇ ವಾರ್ಡ್‌ನ ವಸಂತ ನಗರದಲ್ಲಿ ಈ ಈಜುಕೊಳ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ಕಾಮಗಾರಿ ಪೂರ್ಣಗೊಂಡು ಮಾರ್ಚ್‌ 5ರ 2019ರಂದು ಲೋಕಾರ್ಪಣೆಗೊಂಡಿದೆ. ಕೇವಲ ಅವತ್ತಿನ ದಿನ ಮಾತ್ರ ಸಾರ್ವಜನಿಕರಿಗೆ ಲಭ್ಯವಾಯಿತು ಮರುದಿನದಿಂದ ಬೀಗ ಹಾಕಲಾಯಿತು. ನಗರಸಭೆಯಿಂದ ಟೆಂಡರ್‌ ಕರೆದು ನಿರ್ವಹಣೆಗೆ ಮುಂದಾಗದಿರುವುದರಿಂದ ಪಾಳು ಬಿದ್ದಿದೆ.

ನಿರ್ವಹಣೆ ಕೊರತೆ:ಈಜುಕೊಳ ಸಂಪೂರ್ಣ ಹಾಳಾಗಿದ್ದು, ಒಳಗಡೆ ಮತ್ತು ಹೊರಗಡೆ ಸುತ್ತಮುತ್ತ ಜಾಲಿಗಿಡಗಳು ಬೆಳೆದಿವೆ. ಈಜುಕೊಳಕ್ಕೆ ಅಳವಡಿಸಿದ ಎಲ್ಲ ಗಾಜುಗಳು ಒಡೆದು ಹೋಗಿವೆ. ಬಾಗಿಲು-ಕಿಟಕಿಗಳು ಸಂಪೂರ್ಣ ಹಾಳಾಗಿವೆ.

25 ಲಕ್ಷಕ್ಕೂ ಅಧಿಕ ಹಣ ಬೇಕು: ಈ ಈಜುಕೊಳ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಾದರೆ ಅದರ ದುರಸ್ತಿಗೆ ಸುಮಾರು 25 ಲಕ್ಷಕ್ಕೂ ಅ ಧಿಕ ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿ ಗಳು ಎಚ್ಚೆತ್ತುಕೊಂಡು ಈಜುಕೊಳ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಬೆಟಗೇರಿಯ ವಸಂತಸಿಂಗ್‌ ಜಮಾದಾರ ನಗರದ ಈಜುಕೊಳ ಸರಿಯಾದ ನಿರ್ವಹಣೆ ಇಲ್ಲದೇ ಈಜುಕೊಳ ಪಾಳು ಸ್ಥಿತಿಯಲ್ಲಿದೆ. ಮೋಟರ್‌ ಗಳು ಕಳ್ಳತನವಾಗಿವೆ. ವೆಂಟಿಲೇಟರ್‌, ಟೈಲ್ಸ್‌ ಒಡೆದು ಹೋಗಿವೆ. ಬಾಗಿಲುಗಳು ಕಿತ್ತು ಹೋಗಿವೆ. ಜಿಲ್ಲಾ ಉಸ್ತುವಾರಿ ಎಚ್‌.ಕೆ. ಪಾಟೀಲ ಅವರ ಗಮನಕ್ಕೆ ತರಲಾಗಿದ್ದು, ಈಜುಕೊಳ ಪುನರುಜ್ಜೀವನ ಕಾರ್ಯ ಆರಂಭಿಸಲಾಗುವುದು.
*ಹನಮಂತ ಬಂಡಿವಡ್ಡರ, ಗದಗ-ಬೆಟಗೇರಿ ನಗರಸಭೆ ಎಇಇ

ಬೆಟಗೇರಿ ಭಾಗದಲ್ಲಿರುವ ಈಜುಕೊಳ ಸಂಪೂರ್ಣ ಹಾಳಾಗಿದ್ದು, ಅದರ ಒಳಗಡೆ ಮತ್ತು ಹೊರಗಡೆ ಕಸ ಬೆಳೆದು, ಅದರಲ್ಲಿಯ ಬಾಗಿಲು ಕಿಟಕಿಗಳ ಗ್ಲಾಸ್‌ ಒಡೆದು ಹಾಳಾಗಿದೆ. ಈ ಭಾಗದ ಜನರಿಗೆ ಅನುಕೂಲಕ್ಕಾಗಿ 1ಕೋಟಿ ರೂ.ಖರ್ಚು ಮಾಡಿ ನಿರ್ಮಿಸಿರುವ ಈಜುಕೊಳ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅ ಧಿಕಾರಿಗಳು ದುರಸ್ತಿಗೊಳಿಸಿ ಸಾರ್ವಜನಕರ ಉಪಯೋಗಕ್ಕೆ ನೀಡಬೇಕು.
*ಸೂರಜ್‌ಸಿಂಗ್‌ ರಜಪೂತ್‌, ವಸಂತಸಿಂಗ್‌
ಜಮಾದಾರ್‌ ನಗರದ ನಿವಾಸಿ.

*ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.