Gadag: ITBP ಯೋಧ ರಾಮನಗೌಡ ಕರಬಸನಗೌಡ್ರ ಸಿಕ್ಕಿಂನಲ್ಲಿ ನಿಧನ
22 ವರ್ಷಗಳ ಸುದೀರ್ಘ ಸೇವೆ... ನಿವೃತ್ತಿಯ ಅಂಚಿನಲ್ಲಿದ್ದರು
Team Udayavani, Feb 5, 2024, 8:47 PM IST
ಗದಗ: ದೇಶ ಸೇವೆಯಲ್ಲಿ ಸುದೀರ್ಘ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿನಲ್ಲಿದ್ದ ಐಟಿಬಿಪಿ ಯೋಧ, ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದ ರಾಮನಗೌಡ ಚಂದ್ರಗೌಡ ಕರಬಸನಗೌಡ್ರ(43) ಅನಾರೋಗ್ಯದಿಂದ ರವಿವಾರ ನಿಧನ ಹೊಂದಿದ್ದಾರೆ.
ಸಿಕ್ಕಿಂನ ಐಟಿಬಿಪಿ ಅರೆಸೇನಾ ಪಡೆಯ 13ನೇ ಬೆಟಾಲಿಯನ್ನಲ್ಲಿ ಹವಾಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮನಗೌಡ ಕರಬಸನಗೌಡ್ರ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರ ಫೆ. 7ರಂದು ಸ್ವಗ್ರಾಮ ರಡ್ಡೇರನಾಗನೂರ ಗ್ರಾಮಕ್ಕೆ ಬರುವ ನಿರೀಕ್ಷೆಯಿದೆ ಎಂದು ತಹಶೀಲ್ದಾರ ಶ್ರೀಶೈಲ ತಳವಾರ ಅವರು ತಿಳಿಸಿದ್ದಾರೆ.
15-8-1980ರಲ್ಲಿ ಜನಿಸಿದ ಯೋಧ ರಾಮನಗೌಡ ಕರಬಸನಗೌಡ್ರ ಅವರು 2002ರ ನವೆಂಬರ್ ತಿಂಗಳಿನಲ್ಲಿ ಐಟಿಬಿಪಿ ಯೋಧರಾಗಿ ಸೇವೆಗೆ ಅಣಿಯಾಗಿದ್ದರು. ಇನ್ನು ಕೇವಲ 2 ತಿಂಗಳು ಸೇವೆಯಲ್ಲಿ ಇರುವಾಗಲೇ ಅವರು ನಿಧನರಾಗಿದ್ದಾರೆ. ಮೃತ ಯೋಧ ಪತ್ನಿ ಜಯಶ್ರೀ ಹಾಗೂ ಪುತ್ರ ನಿಂಗನಗೌಡ ಮತ್ತು ಸಹೋದರರನ್ನು ಅಗಲಿದ್ದಾರೆ.
ತಹಶೀಲ್ದಾರ್ ಭೇಟಿ
ತಹಶೀಲ್ದಾರ ಶ್ರೀಶೈಲ ತಳವಾರ ಅವರು ಸೋಮವಾರ ಸಂಜೆ ಮೃತ ಯೋಧನ ಮನೆಗೆ ಭೇಟಿ ನೀಡಿ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕೊಣ್ಣೂರ ಕಂದಾಯ ನಿರೀಕ್ಷಕ ಈರಣ್ಣ ಕಳಸನ್ನವರ, ಗ್ರಾಮ ಲೆಕ್ಕಾಧಿಕಾರಿಗಳಾದ ಪಾಂಡಪ್ಪ ತಳವಾರ, ಶಿವಯೋಗಿ ಜಲಗೇರಿ ಹಾಗೂ ಪಿಡಿಓ, ಗ್ರಾಮದ ಹಿರಿಯರು ಸ್ಥಳದಲ್ಲಿದ್ದರು.
ಶ್ರೀಗಳಿಂದ ಸಾಂತ್ವನ: ಯೋಧ ರಾಮನಗೌಡ ಕರಬಸನಗೌಡ್ರ ಅವರು ನಿಧನರಾದ ಸುದ್ದಿ ತಿಳಿದು ಶಿರೋಳ ಹಾಗೂ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು ರಡ್ಡೇರನಾಗನೂರ ಗ್ರಾಮದಲ್ಲಿರುವ ಮೃತ ಯೋಧನ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಯೋಧರ ಸೇವೆಯನ್ನು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
MUST WATCH
ಹೊಸ ಸೇರ್ಪಡೆ
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ