ಕೃಷಿ ಯೋಜನೆಗಳ ಮಾಹಿತಿ ರಥಕ್ಕೆ ಚಾಲನೆ
ರೈತರ ಹಿತ ಗಮನದಲ್ಲಿಟ್ಟುಕೊಂಡು ಫಸಲ್ ಬಿಮಾ, ರೈತ ಸಮ್ಮಾನ್ ಯೋಜನೆ ರೂಪಿಸಿದ್ದಾರೆ
Team Udayavani, Jul 13, 2022, 6:02 PM IST
ಹೊಳೆಆಲೂರ: ಅತಿವೃಷ್ಟಿ ಕಾರಣದಿಂದ ಈ ಭಾಗದ ಹೆಸರು, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಗಳು ನಂಜಾಣು ರೋಗಕ್ಕೆ ಬಲಿಯಾಗುವ ಸಂಭವವಿದೆ. ಹಾಗಾಗಿ, ಹೋಬಳಿಯ ರೈತ ಸಮುದಾಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಸಕಾಲಿಕ ಕೀಟ ನಾಶಕ ಔಷ ಧಗಳನ್ನು ಬಳಕೆ ಮಾಡಬೇಕೆಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ರವೀಂದ್ರ ಪಾಟೀಲ ಹೇಳಿದರು.
ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ 2022-23ನೇ ಸಾಲಿನ ಸಮಗ್ರ ಕೃಷಿ ಯೋಜನೆಗಳ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
25 ರಿಂದ 40 ದಿನಗಳ ಅವಧಿಯಲ್ಲಿ ಬೆಳೆಗಳಿಗೆ ಬಿಳಿ ನೊಣಗಳು ನಂಜಾಣು ರೋಗ ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ನಿವಾರಣೆಗೆ ಪ್ರತಿ ಲೀಟರ್ ನೀರಿಗೆ 0.2 ಮೀ.ಲೀ. ಇಮಿಡಾಕ್ಲೀಪ್ರಿಡ್, 17.08 ಎಸ್.ಎಲ್. ಅಥವಾ 0.3 ಗ್ರಾ ಥೈಯಾಮಿಥಾಕ್ಸಾಮ್, 25 ಡಬ್ಲೂ ಜಿ ಅಥವಾ ಡಯಾಫೆಂತುರಾನ್ ಮಿಶ್ರಣ ಮಾಡಿ ಬೆಳೆಯ ಕೆಳಗಿನ ಎಲೆಗಳಿಗೆ ಮುಟ್ಟುವಂತೆ ಸಿಂಪಡಿಸಬೇಕು.
ಗ್ರಾಪಂ ಸಹಯೋಗದಲ್ಲಿ ನರೇಗಾ ಯೋಜನೆಯಲ್ಲಿ ರೈತರಿಗೆ ಕೃಷಿ ಹೊಂಡ, ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಹೂಲದ ಬದುಗಳಲ್ಲಿ ಮರ ನಡೆಲು, ತೋಟಗಾರಿಕಾ ಬೆಳೆ ಬೆಳೆಯಲು ಸಹಾಯಧನದ ಯೋಜನೆ ಲಭ್ಯವಿದೆ. ರೈತರು ಸರಕಾರದ ಸೌಲಭ್ಯ ಸಮರ್ಪಕವಾಗಿ ಪಡೆದುಕೊಳ್ಳಬೇಕೆಂದು ಹೇಳಿದರು.
ರೈತ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಂಗಪ್ಪ ದುಗಲದ, ಪ್ರಸ್ತುತ ಸಂರ್ಭದಲ್ಲಿ ಪ್ರಧಾನ ಮಂತ್ರಿಗಳು ರೈತರ ಹಿತ ಗಮನದಲ್ಲಿಟ್ಟುಕೊಂಡು ಫಸಲ್ ಬಿಮಾ, ರೈತ ಸಮ್ಮಾನ್ ಯೋಜನೆ ರೂಪಿಸಿದ್ದಾರೆ. ಬೆಳೆ ವಿಮೆ ಕಂತು ಭರಣಾ ಮಾಡಲು ರೈತರಿಗೆ ಕೊನೆಯ ಅವ ಧಿಯ ಮುನ್ನವೇ ಸೂಕ್ತ ಮಾಹಿತಿ, ಸೂಚನೆ ನೀಡುವಂತೆ ಕೃಷಿ ಅಧಿ ಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ರೋಣ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎಸ್.ವಿ. ಶಾಂತಗೇರಿ, ಹೊಳೆಆಲೂರ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ವಿವಿಧ ಬೆಳೆಗಳ ಬೆಳೆ ನಿರ್ವಹಣೆ, ರೋಗ ನಿವಾರಣೆಯ ಮಾರ್ಗೋಪಾಯಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ, ಕೃಷಿಕ ಸಮಾಜದ ನಿರ್ದೇಶಕ ಬಸವರಾಜ ಉಮಚಗಿ, ಎಚ್.ಬಿ.ಜಂಗಣ್ಣವರ, ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ಎಸ್.ಎನ್. ಮಾದರ, ಗ್ರಾಪಂ ಸದಸ್ಯೆ ಸುಮಂಗಲಾ ಕಲ್ಲಾಪೂರ, ಅಲ್ಲಿಸಾಬ ನದಾಫ್, ಸಂತೋಷ ದೊಡ್ಡಮನಿ, ಉಮೇಶ ಪೂಜಾರ, ಹೋಬಳಿ ಸುತ್ತಮುತ್ತಲಿನ ರೈತ ಸಮುದಾಯ, ಕೃಷಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್